<p><strong>ನವದೆಹಲಿ</strong>: ತರಬೇತಿ ಅಥವಾ ಟೂರ್ನಿಗಳಲ್ಲಿ ಗಾಯಗೊಂಡ ಎಲೀಟ್ ಅಥ್ಲೀಟ್ಗಳಿಗೆ ವಿಶ್ವದರ್ಜೆಯ ಚಿಕಿತ್ಸೆ ಹಾಗೂ ಪುನಶ್ಚೇತನ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷಿ ‘ಕೇಂದ್ರೀಕೃತ ಕ್ರೀಡಾಪಟುಗಳ ಗಾಯ ನಿರ್ವಹಣಾ ವ್ಯವಸ್ಥೆ (ಸಿಎಐಎಮ್ಎಸ್)’ ಕಾರ್ಯಕ್ರಮಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶುಕ್ರವಾರ ಚಾಲನೆ ನೀಡಿದರು.</p>.<p>ಕ್ರೀಡಾಪಟುಗಳಿಗೆ ಗಾಯವಾಗದಂತೆ ತಡೆಯುವ ವಿಧಾನ, ಸಕಾಲದಲ್ಲಿ ರೋಗನಿರ್ಣಯ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಪುನಶ್ಚೇತನ ಕುರಿತು ಒಳನೋಟ ಒದಗಿಸುವ ಉದ್ದೇಶವನ್ನುಸಿಎಐಎಮ್ಎಸ್ ಹೊಂದಿದೆ.</p>.<p>ದೇಶದ ಪ್ರಮುಖ ವೈದ್ಯಕೀಯ ತಜ್ಞರ ಸಹಕಾರದೊಂದಿಗೆ ಭಾರತ ಕ್ರೀಡಾ ಪ್ರಾಧಿಕಾರವು (ಸಾಯ್) ಈ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಲಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು ಪ್ರತಿಭಾನ್ವಿತ ಅಥ್ಲೀಟ್ಗಳಿಗೆ ಆರಂಭಿಕವಾಗಿ ಈ ಯೋಜನೆ ಅನ್ವಯವಾಗಲಿದೆ. ನಂತರ ಇತರರಿಗೆ ವಿಸ್ತರಿಸಲಾಗುತ್ತದೆ.</p>.<p>‘ಸಾಮಾನ್ಯ ಗಾಯಗಳಿಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ವೃತ್ತಿಜೀವನವನ್ನೇ ಕೊನೆಗೊಳಿಸಿಕೊಂಡ ಅನೇಕ ಕ್ರೀಡಾಪಟುಗಳನ್ನು ಕಂಡಿದ್ದೇನೆ. ಕೆಲವು ಗಾಯಗಳಿಗೆ ನಮ್ಮ ದೇಶದಲ್ಲಿ ಚಿಕಿತ್ಸೆ ಲಭಿಸದ ಸಂದರ್ಭದಲ್ಲಿ ಅಥ್ಲೀಟ್ಗಳು ವಿದೇಶಗಳಿಗೆ ತೆರಳಬೇಕಾಗುತ್ತದೆ. ಹೀಗಾಗಿ ಈ ಸಮಸ್ಯೆ ಪರಿಹಾರಕ್ಕೆ ಮುಂದಡಿ ಇಟ್ಟಿದ್ದೇವೆ. ಎಲ್ಲ ಕ್ರೀಡಾಪಟುಗಳು ಈ ವ್ಯವಸ್ಥೆಯನ್ನು ಬಯಸಿದ್ದರು‘ ಎಂದು ಆನ್ಲೈನ್ ಸಂವಾದವೊಂದರಲ್ಲಿ ಕಿರಣ್ ರಿಜಿಜು ಹೇಳಿದ್ದಾರೆ.</p>.<p>‘ದೇಶದಲ್ಲಿ ಕ್ರೀಡಾವಿಜ್ಞಾನ ಇನ್ನೂ ಬೆಳವಣಿಗೆ ಹಂತದಲ್ಲಿದ್ದು ಇನ್ನಷ್ಟು ಸುಧಾರಿಸಬೇಕಿದೆ‘ ಎಂದು ಇದೇ ವೇಳೆ ಅವರು ನುಡಿದರು.</p>.<p>ಕ್ರೀಡಾ ಸಚಿವಾಲಯ ಹಾಗೂ ಸಾಯ್ನ ಈ ಕಾರ್ಯಕ್ರಮಕ್ಕೆ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<p>ಕೇಂದ್ರ ಕ್ರೀಡಾ ಕಾರ್ಯದರ್ಶಿ ರವಿ ಮಿತ್ತಲ್, ಸಾಯ್ನ ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್, ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮತ್ತು ವೈದ್ಯಕೀಯ ತಜ್ಞರು ಸಂವಾದದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ತರಬೇತಿ ಅಥವಾ ಟೂರ್ನಿಗಳಲ್ಲಿ ಗಾಯಗೊಂಡ ಎಲೀಟ್ ಅಥ್ಲೀಟ್ಗಳಿಗೆ ವಿಶ್ವದರ್ಜೆಯ ಚಿಕಿತ್ಸೆ ಹಾಗೂ ಪುನಶ್ಚೇತನ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷಿ ‘ಕೇಂದ್ರೀಕೃತ ಕ್ರೀಡಾಪಟುಗಳ ಗಾಯ ನಿರ್ವಹಣಾ ವ್ಯವಸ್ಥೆ (ಸಿಎಐಎಮ್ಎಸ್)’ ಕಾರ್ಯಕ್ರಮಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶುಕ್ರವಾರ ಚಾಲನೆ ನೀಡಿದರು.</p>.<p>ಕ್ರೀಡಾಪಟುಗಳಿಗೆ ಗಾಯವಾಗದಂತೆ ತಡೆಯುವ ವಿಧಾನ, ಸಕಾಲದಲ್ಲಿ ರೋಗನಿರ್ಣಯ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಪುನಶ್ಚೇತನ ಕುರಿತು ಒಳನೋಟ ಒದಗಿಸುವ ಉದ್ದೇಶವನ್ನುಸಿಎಐಎಮ್ಎಸ್ ಹೊಂದಿದೆ.</p>.<p>ದೇಶದ ಪ್ರಮುಖ ವೈದ್ಯಕೀಯ ತಜ್ಞರ ಸಹಕಾರದೊಂದಿಗೆ ಭಾರತ ಕ್ರೀಡಾ ಪ್ರಾಧಿಕಾರವು (ಸಾಯ್) ಈ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಲಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು ಪ್ರತಿಭಾನ್ವಿತ ಅಥ್ಲೀಟ್ಗಳಿಗೆ ಆರಂಭಿಕವಾಗಿ ಈ ಯೋಜನೆ ಅನ್ವಯವಾಗಲಿದೆ. ನಂತರ ಇತರರಿಗೆ ವಿಸ್ತರಿಸಲಾಗುತ್ತದೆ.</p>.<p>‘ಸಾಮಾನ್ಯ ಗಾಯಗಳಿಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ವೃತ್ತಿಜೀವನವನ್ನೇ ಕೊನೆಗೊಳಿಸಿಕೊಂಡ ಅನೇಕ ಕ್ರೀಡಾಪಟುಗಳನ್ನು ಕಂಡಿದ್ದೇನೆ. ಕೆಲವು ಗಾಯಗಳಿಗೆ ನಮ್ಮ ದೇಶದಲ್ಲಿ ಚಿಕಿತ್ಸೆ ಲಭಿಸದ ಸಂದರ್ಭದಲ್ಲಿ ಅಥ್ಲೀಟ್ಗಳು ವಿದೇಶಗಳಿಗೆ ತೆರಳಬೇಕಾಗುತ್ತದೆ. ಹೀಗಾಗಿ ಈ ಸಮಸ್ಯೆ ಪರಿಹಾರಕ್ಕೆ ಮುಂದಡಿ ಇಟ್ಟಿದ್ದೇವೆ. ಎಲ್ಲ ಕ್ರೀಡಾಪಟುಗಳು ಈ ವ್ಯವಸ್ಥೆಯನ್ನು ಬಯಸಿದ್ದರು‘ ಎಂದು ಆನ್ಲೈನ್ ಸಂವಾದವೊಂದರಲ್ಲಿ ಕಿರಣ್ ರಿಜಿಜು ಹೇಳಿದ್ದಾರೆ.</p>.<p>‘ದೇಶದಲ್ಲಿ ಕ್ರೀಡಾವಿಜ್ಞಾನ ಇನ್ನೂ ಬೆಳವಣಿಗೆ ಹಂತದಲ್ಲಿದ್ದು ಇನ್ನಷ್ಟು ಸುಧಾರಿಸಬೇಕಿದೆ‘ ಎಂದು ಇದೇ ವೇಳೆ ಅವರು ನುಡಿದರು.</p>.<p>ಕ್ರೀಡಾ ಸಚಿವಾಲಯ ಹಾಗೂ ಸಾಯ್ನ ಈ ಕಾರ್ಯಕ್ರಮಕ್ಕೆ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<p>ಕೇಂದ್ರ ಕ್ರೀಡಾ ಕಾರ್ಯದರ್ಶಿ ರವಿ ಮಿತ್ತಲ್, ಸಾಯ್ನ ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್, ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮತ್ತು ವೈದ್ಯಕೀಯ ತಜ್ಞರು ಸಂವಾದದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>