<p><strong>ಬೆಂಗಳೂರು: </strong>ಅಗ್ರಕ್ರಮಾಂಕದ ಆಟಗಾರ ತೇಜಸ್ ಸಂಜಯ್ ಕಲ್ಲೋಳಕರ್ ಅವರು ಎಂ.ಎಸ್.ರಾಮಯ್ಯ ಆನಂದಾಶ್ರಮ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.</p>.<p>ಕೆನರಾ ಯೂನಿಯನ್ ಅಂಗಳದಲ್ಲಿ ನಡೆದ 19 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ತೇಜಸ್ 21–11, 21–19 ನೇರ ಗೇಮ್ಗಳಿಂದ ಎರಡನೇ ಶ್ರೇಯಾಂಕದ ಆಟಗಾರ ಎಸ್.ಭಾರ್ಗವ್ ಅವರನ್ನು ಸೋಲಿಸಿದರು.</p>.<p>ಮೊದಲ ಗೇಮ್ನಲ್ಲಿ ಸುಲಭವಾಗಿ ಗೆದ್ದ ತೇಜಸ್, ಎರಡನೇ ಗೇಮ್ನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ರೋಚಕ ಘಟ್ಟದಲ್ಲಿ ಮಿಂಚಿದ ಅವರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.</p>.<p>ಡಬಲ್ಸ್ ವಿಭಾಗದಲ್ಲಿ ಸಿ.ಎಸ್.ಸಾಕೇತ್ ಜೊತೆಗೂಡಿ ಆಡಿದ ತೇಜಸ್, ಮತ್ತೊಂದು ಪ್ರಶಸ್ತಿಗೆ ಮುತ್ತಿಕ್ಕಿದರು.</p>.<p>ಆರನೇ ಶ್ರೇಯಾಂಕದ ಜೋಡಿ ಸಾಕೇತ್ ಮತ್ತು ತೇಜಸ್ 19–21, 21–19, 22–20ರಲ್ಲಿ ಎಚ್.ವಿ.ನಿತಿನ್ ಮತ್ತು ಎಸ್.ಭಾರ್ಗವ್ಗೆ ಆಘಾತ ನೀಡಿತು. ನಿತಿನ್ ಮತ್ತು ಭಾರ್ಗವ್ ಅವರು ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದರು.</p>.<p>ವಿಜೇತಾಗೆ ಪ್ರಶಸ್ತಿ: ಬಾಲಕಿಯರ ವಿಭಾಗದಲ್ಲಿ ವಿಜೇತಾ ಹರೀಶ್, ಚಾಂಪಿಯನ್ ಆದರು.</p>.<p>ಅಂತಿಮ ಘಟ್ಟದ ಹಣಾಹಣಿಯಲ್ಲಿ ವಿಜೇತಾ 21–6, 21–16ರಲ್ಲಿ ಡಿ.ಶೀತಲ್ ಎದುರು ಗೆದ್ದರು.</p>.<p>ಬಾಲಕಿಯರ ಡಬಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಅಗ್ರಶ್ರೇಯಾಂಕದ ಜೋಡಿ ದೀತ್ಯಾ ಮತ್ತು ರಮ್ಯಾ ವೆಂಕಟೇಶ್ 21–16, 21–16ರಲ್ಲಿ ಕಿಶಾ ಕೊಠಾರಿ ಮತ್ತು ಶ್ರುತಿ ನಿತಿನ್ ಮೊಗೆ ಅವರನ್ನು ಪರಾಭವಗೊಳಿಸಿತು.</p>.<p>ಮಿಶ್ರ ಡಬಲ್ಸ್ ವಿಭಾಗದಲ್ಲಿ ಎಚ್.ವಿ.ನಿತಿನ್ ಮತ್ತು ರಮ್ಯಾ ವೆಂಕಟೇಶ್ ಪ್ರಶಸ್ತಿ ಜಯಿಸಿದರು.</p>.<p>ಫೈನಲ್ನಲ್ಲಿ ನಿತಿನ್ ಮತ್ತು ರಮ್ಯಾ 21–23, 21–13, 21–9ರಲ್ಲಿ ಅಗ್ರಶ್ರೇಯಾಂಕದ ಸಿ.ಎಸ್.ಸಾಕೆತ್ ಮತ್ತು ಡಿ.ಶೀತಲ್ ಅವರಿಗೆ ಆಘಾತ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅಗ್ರಕ್ರಮಾಂಕದ ಆಟಗಾರ ತೇಜಸ್ ಸಂಜಯ್ ಕಲ್ಲೋಳಕರ್ ಅವರು ಎಂ.ಎಸ್.ರಾಮಯ್ಯ ಆನಂದಾಶ್ರಮ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.</p>.<p>ಕೆನರಾ ಯೂನಿಯನ್ ಅಂಗಳದಲ್ಲಿ ನಡೆದ 19 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ತೇಜಸ್ 21–11, 21–19 ನೇರ ಗೇಮ್ಗಳಿಂದ ಎರಡನೇ ಶ್ರೇಯಾಂಕದ ಆಟಗಾರ ಎಸ್.ಭಾರ್ಗವ್ ಅವರನ್ನು ಸೋಲಿಸಿದರು.</p>.<p>ಮೊದಲ ಗೇಮ್ನಲ್ಲಿ ಸುಲಭವಾಗಿ ಗೆದ್ದ ತೇಜಸ್, ಎರಡನೇ ಗೇಮ್ನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ರೋಚಕ ಘಟ್ಟದಲ್ಲಿ ಮಿಂಚಿದ ಅವರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.</p>.<p>ಡಬಲ್ಸ್ ವಿಭಾಗದಲ್ಲಿ ಸಿ.ಎಸ್.ಸಾಕೇತ್ ಜೊತೆಗೂಡಿ ಆಡಿದ ತೇಜಸ್, ಮತ್ತೊಂದು ಪ್ರಶಸ್ತಿಗೆ ಮುತ್ತಿಕ್ಕಿದರು.</p>.<p>ಆರನೇ ಶ್ರೇಯಾಂಕದ ಜೋಡಿ ಸಾಕೇತ್ ಮತ್ತು ತೇಜಸ್ 19–21, 21–19, 22–20ರಲ್ಲಿ ಎಚ್.ವಿ.ನಿತಿನ್ ಮತ್ತು ಎಸ್.ಭಾರ್ಗವ್ಗೆ ಆಘಾತ ನೀಡಿತು. ನಿತಿನ್ ಮತ್ತು ಭಾರ್ಗವ್ ಅವರು ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದರು.</p>.<p>ವಿಜೇತಾಗೆ ಪ್ರಶಸ್ತಿ: ಬಾಲಕಿಯರ ವಿಭಾಗದಲ್ಲಿ ವಿಜೇತಾ ಹರೀಶ್, ಚಾಂಪಿಯನ್ ಆದರು.</p>.<p>ಅಂತಿಮ ಘಟ್ಟದ ಹಣಾಹಣಿಯಲ್ಲಿ ವಿಜೇತಾ 21–6, 21–16ರಲ್ಲಿ ಡಿ.ಶೀತಲ್ ಎದುರು ಗೆದ್ದರು.</p>.<p>ಬಾಲಕಿಯರ ಡಬಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಅಗ್ರಶ್ರೇಯಾಂಕದ ಜೋಡಿ ದೀತ್ಯಾ ಮತ್ತು ರಮ್ಯಾ ವೆಂಕಟೇಶ್ 21–16, 21–16ರಲ್ಲಿ ಕಿಶಾ ಕೊಠಾರಿ ಮತ್ತು ಶ್ರುತಿ ನಿತಿನ್ ಮೊಗೆ ಅವರನ್ನು ಪರಾಭವಗೊಳಿಸಿತು.</p>.<p>ಮಿಶ್ರ ಡಬಲ್ಸ್ ವಿಭಾಗದಲ್ಲಿ ಎಚ್.ವಿ.ನಿತಿನ್ ಮತ್ತು ರಮ್ಯಾ ವೆಂಕಟೇಶ್ ಪ್ರಶಸ್ತಿ ಜಯಿಸಿದರು.</p>.<p>ಫೈನಲ್ನಲ್ಲಿ ನಿತಿನ್ ಮತ್ತು ರಮ್ಯಾ 21–23, 21–13, 21–9ರಲ್ಲಿ ಅಗ್ರಶ್ರೇಯಾಂಕದ ಸಿ.ಎಸ್.ಸಾಕೆತ್ ಮತ್ತು ಡಿ.ಶೀತಲ್ ಅವರಿಗೆ ಆಘಾತ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>