<p><strong>ಮೈಸೂರು:</strong> ಕೆ.ಜೆ.ಆಕಾಶ್ ಮತ್ತು ಎ.ನಿಹಾರಿಕಾ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.</p>.<p>ಮೈಸೂರು ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ವಿ.ವಿ. ಜಿಮ್ನೇಷಿಯಂ ಹಾಲ್ನಲ್ಲಿ ಶನಿವಾರ ನಡೆದ ಬಾಲಕಿಯರ ವಿಭಾಗದ ಫೈನಲ್ನಲ್ಲಿ ಎಂಎಸ್ಎಸ್ನ ನಿಹಾರಿಕಾ 13-11,11-6,11-8 ರಲ್ಲಿ ಎಸ್ಬಿಟಿಯ ಕರುಣಾ ಗಜೇಂದ್ರನ್ ವಿರುದ್ಧ ಗೆದ್ದರು.</p>.<p>ಸೆಮಿಫೈನಲ್ಗಳಲ್ಲಿ ಕರುಣಾ 11-5,12-10,9-11,9-11,12-10 ರಲ್ಲಿ ತೃಪ್ತಿ ಪುರೋಹಿತ್ ವಿರುದ್ಧ; ನಿಹಾರಿಕಾ 3-11,9-11,11-8,16-14,12-10ರಲ್ಲಿ ಸಹನಾ ಎಚ್.ಮೂರ್ತಿ ಎದುರು ಗೆದ್ದರು. ಬಾಲಕರ ವಿಭಾಗದ ಫೈನಲ್ನಲ್ಲಿ ಆಕಾಶ್, ಪಿ.ವಿ.ಶ್ರೀಕಾಂತ್ ಕಶ್ಯಪ್ ವಿರುದ್ಧ ಪೈಪೋಟಿ ನಡೆಸಿದರು. ಗಾಯದ ಕಾರಣ ಶ್ರೀಕಾಂತ್ ಅರ್ಧದಲ್ಲೇ ಹಿಂದೆ ಸರಿದರು. ಸೆಮಿಫೈನಲ್ಗಳಲ್ಲಿ ಆಕಾಶ್ 8-11,11-5,11-2,11-9 ರಲ್ಲಿ ಪಿ.ಯಶ್ವಂತ್ ವಿರುದ್ಧ; ಶ್ರೀಕಾಂತ್ 11-8,11-9,11-8 ರಲ್ಲಿ ಸುಜನ್.ಭಾರದ್ವಾಜ್ ಎದುರು ಗೆದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಕೆ.ಜೆ.ಆಕಾಶ್ ಮತ್ತು ಎ.ನಿಹಾರಿಕಾ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.</p>.<p>ಮೈಸೂರು ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ವಿ.ವಿ. ಜಿಮ್ನೇಷಿಯಂ ಹಾಲ್ನಲ್ಲಿ ಶನಿವಾರ ನಡೆದ ಬಾಲಕಿಯರ ವಿಭಾಗದ ಫೈನಲ್ನಲ್ಲಿ ಎಂಎಸ್ಎಸ್ನ ನಿಹಾರಿಕಾ 13-11,11-6,11-8 ರಲ್ಲಿ ಎಸ್ಬಿಟಿಯ ಕರುಣಾ ಗಜೇಂದ್ರನ್ ವಿರುದ್ಧ ಗೆದ್ದರು.</p>.<p>ಸೆಮಿಫೈನಲ್ಗಳಲ್ಲಿ ಕರುಣಾ 11-5,12-10,9-11,9-11,12-10 ರಲ್ಲಿ ತೃಪ್ತಿ ಪುರೋಹಿತ್ ವಿರುದ್ಧ; ನಿಹಾರಿಕಾ 3-11,9-11,11-8,16-14,12-10ರಲ್ಲಿ ಸಹನಾ ಎಚ್.ಮೂರ್ತಿ ಎದುರು ಗೆದ್ದರು. ಬಾಲಕರ ವಿಭಾಗದ ಫೈನಲ್ನಲ್ಲಿ ಆಕಾಶ್, ಪಿ.ವಿ.ಶ್ರೀಕಾಂತ್ ಕಶ್ಯಪ್ ವಿರುದ್ಧ ಪೈಪೋಟಿ ನಡೆಸಿದರು. ಗಾಯದ ಕಾರಣ ಶ್ರೀಕಾಂತ್ ಅರ್ಧದಲ್ಲೇ ಹಿಂದೆ ಸರಿದರು. ಸೆಮಿಫೈನಲ್ಗಳಲ್ಲಿ ಆಕಾಶ್ 8-11,11-5,11-2,11-9 ರಲ್ಲಿ ಪಿ.ಯಶ್ವಂತ್ ವಿರುದ್ಧ; ಶ್ರೀಕಾಂತ್ 11-8,11-9,11-8 ರಲ್ಲಿ ಸುಜನ್.ಭಾರದ್ವಾಜ್ ಎದುರು ಗೆದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>