ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಪಲ್ ಕಪ್ ಗಾಲ್ಫ್ ಟೂರ್ನಿ: ಗಾಲ್ಫರ್ ಶುಭಂಕರ್ ಶರ್ಮಾ ಜೊತೆ ಮಾತುಕತೆ

Last Updated 20 ಅಕ್ಟೋಬರ್ 2021, 13:18 IST
ಅಕ್ಷರ ಗಾತ್ರ

ಬೆಂಗಳೂರು: ಎನೇಬಲ್ ಇಂಡಿಯಾ ಸಹಯೋದಲ್ಲಿ ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್ ಆಯೋಜಿಸಿರುವ ‘ದಿ ಪರ್ಪಲ್ ಕಪ್’ ಗಾಲ್ಫ್ ಟೂರ್ನಿಯು ರಾಜ್ಯ ಗಾಲ್ಫ್ ಸಂಸ್ಥೆಯ ಆವರಣದಲ್ಲಿ ಗುರುವಾರ ನಡೆಯಲಿದೆ. ಟೂರ್ನಿಯ ಅಂಗವಾಗಿ ಸಂಜೆ ಶುಭಂಕರ್ ಶರ್ಮಾ ಜೊತೆ ಮಾತುಕತೆಯೂ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಳಿಗ್ಗೆ 6 ಗಂಟೆಗೆ ಸ್ಪರ್ಧೆಗಳು ನಡೆಯಲಿವೆ. ಇಲ್ಲಿ ಸಂಗ್ರಹವಾಗುವ ಮೊತ್ತವನ್ನು ಭಾರತದ ಪ್ರಪ್ರಥಮ ಅಂಧರ ಗಾಲ್ಫ್ ತಂಡಕ್ಕಾಗಿ ನೀಡಲಾಗುವುದು. ಅಂಗವೈಕಲ್ಯ ಇರುವವರಿಗಾಗಿ ಎನೇಬಲ್ ಇಂಡಿಯಾ ಫೌಂಡೇಷನ್‌ ನಡೆಸುವ ಸಾಮಾಜಿಕ ಕಾರ್ಯಗಳಿಗೂ ಇದರ ಪಾಲು ಸಲ್ಲಲಿದೆ ಎಂದು ತಿಳಿಸಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 5.30ಕ್ಕೆ ಆರಂಭವಾಗಲಿದ್ದು ಗಾಲ್ಫರ್ ಶುಭಂಕರ್ ಶರ್ಮಾ ಜೊತೆ ಸಂದೀಪ್ ರಾವ್‌ ಅವರ ಮಾತುಕತೆ ಈ ಸಂದರ್ಭದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT