ಬೆಂಗಳೂರು: ಬಾಗಲಕೋಟೆ ಜಿಲ್ಲೆ ಬೇವಿನಹಳ್ಳಿಯ ಅರ್ಜುನ್ ಡಿ. ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹರಿಯಾಣದ ಸೋನೆಪತ್ನಲ್ಲಿ ಮಂಗಳ ವಾರ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ಅವರು ಅರ್ಹತೆ ಗಳಿಸಿದರು.
2020ರ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ ನವದೆಹಲಿಯಲ್ಲಿ ಫೆಬ್ರುವರಿ 18ರಿಂದ 23ರವರೆಗೆ ನಡೆಯಲಿದೆ. ದಾವಣಗೆರೆ ಕ್ರೀಡಾ ವಸತಿ ನಿಲಯದ ಹಳೆ ವಿದ್ಯಾರ್ಥಿಯಾಗಿರುವ ಅವರು ಅಂತರರಾಷ್ಟ್ರೀಯ ಕುಸ್ತಿ ಚಾಂಪಿಯನ್ಷಿಪ್ ಜೂನಿಯರ್ ವಿಭಾಗದಲ್ಲಿ ಐದು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.