<p><strong>ಬೆಂಗಳೂರು: </strong>ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರು ನಾರ್ತ್ ಮೆಸಿಡೋನಿಯಾದಲ್ಲಿ ಡಬ್ಲ್ಯುಟಿಟಿ ಯೂತ್ ಕಂಟೆಂಡರ್ ಟೇಬಲ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.</p>.<p>ಪೋರ್ಟೊರಿಕೊ ದೇಶದ ಆಸ್ಕರ್ ಜೊತೆಗೂಡಿ ಆಡಿದ ಯಶಸ್ವಿನಿ ಫೈನಲ್ ಪಂದ್ಯದಲ್ಲಿ7-11,7-11, 11-9,11-9,11-9ರಿಂದ ಕ್ರೊವೇಷ್ಯಾದ ಬಾರ್ನಾ ಮತ್ತು ಚೀನಾ ತೈಪೆಯ ಚೆಂಗ್ ಎದುರು ಗೆದ್ದರು.</p>.<p class="Briefhead">ಕಾಡಿದ ಮಳೆ: ದಿನದಾಟ ರದ್ದು</p>.<p>ಹುಬ್ಬಳ್ಳಿ: ಭಾರತ ‘ಎ’ ಹಾಗೂ ನ್ಯೂಜಿಲೆಂಡ್ ‘ಎ’ ತಂಡಗಳ ನಡುವಣ ‘ಟೆಸ್ಟ್’ ಪಂದ್ಯದ ಮೂರನೇ ದಿನದಾಟವೂ ಮಳೆಯಿಂದ ರದ್ದಾಯಿತು.</p>.<p>ಪಂದ್ಯದ ಮೊದಲ ದಿನದಾಟ ಮಳೆಯಿಂದ ರದ್ದುಗೊಂಡಿದ್ದರೆ, ಎರಡನೇ ದಿನವಾದ ಶುಕ್ರವಾರ 66 ಓವರ್ಗಳ ಆಟ ನಡೆದಿತ್ತು. ಶುಕ್ರವಾರ ತಡರಾತ್ರಿ ಮಳೆ ಸುರಿಯಿತಲ್ಲದೆ ಶನಿವಾರ ದಿನವಿಡೀ ದಟ್ಟ ಮೋಡಕವಿದ ವಾತಾವರಣ, ತುಂತುರು ಮಳೆ ಮುಂದುವರಿಯಿತು.</p>.<p>ಅಂಪೈರ್ಗಳಾದ ಎ.ನಂದಕಿಶೋರ್, ಸಂಜಯಕುಮಾರ್ ಸಿಂಗ್ ಮತ್ತು ರೆಫರಿ ಸತ್ಯಜಿತ್ ಸತ್ಭಾಯಿ ಅವರು ಶನಿವಾರ ಬೆಳಿಗ್ಗೆ 8.30ಕ್ಕೆ, 11, ಮಧ್ಯಾಹ್ನ 12.40, 2 ಹಾಗೂ 3 ಗಂಟೆಗೆ ಮೈದಾನವನ್ನು ಪರಿಶೀಲಿಸಿದರು. ಆ ಬಳಿಕ ದಿನದಾಟ ರದ್ದುಗೊಳಿಸಲು ನಿರ್ಧರಿಸಿದರು.</p>.<p>ಭಾನುವಾರದ ಒಂದು ದಿನದ ಆಟ ಮಾತ್ರ ಬಾಕಿಯಿದೆ. ಭಾರತ ‘ಎ’ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ಗೆ 229 ರನ್ ಗಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರು ನಾರ್ತ್ ಮೆಸಿಡೋನಿಯಾದಲ್ಲಿ ಡಬ್ಲ್ಯುಟಿಟಿ ಯೂತ್ ಕಂಟೆಂಡರ್ ಟೇಬಲ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.</p>.<p>ಪೋರ್ಟೊರಿಕೊ ದೇಶದ ಆಸ್ಕರ್ ಜೊತೆಗೂಡಿ ಆಡಿದ ಯಶಸ್ವಿನಿ ಫೈನಲ್ ಪಂದ್ಯದಲ್ಲಿ7-11,7-11, 11-9,11-9,11-9ರಿಂದ ಕ್ರೊವೇಷ್ಯಾದ ಬಾರ್ನಾ ಮತ್ತು ಚೀನಾ ತೈಪೆಯ ಚೆಂಗ್ ಎದುರು ಗೆದ್ದರು.</p>.<p class="Briefhead">ಕಾಡಿದ ಮಳೆ: ದಿನದಾಟ ರದ್ದು</p>.<p>ಹುಬ್ಬಳ್ಳಿ: ಭಾರತ ‘ಎ’ ಹಾಗೂ ನ್ಯೂಜಿಲೆಂಡ್ ‘ಎ’ ತಂಡಗಳ ನಡುವಣ ‘ಟೆಸ್ಟ್’ ಪಂದ್ಯದ ಮೂರನೇ ದಿನದಾಟವೂ ಮಳೆಯಿಂದ ರದ್ದಾಯಿತು.</p>.<p>ಪಂದ್ಯದ ಮೊದಲ ದಿನದಾಟ ಮಳೆಯಿಂದ ರದ್ದುಗೊಂಡಿದ್ದರೆ, ಎರಡನೇ ದಿನವಾದ ಶುಕ್ರವಾರ 66 ಓವರ್ಗಳ ಆಟ ನಡೆದಿತ್ತು. ಶುಕ್ರವಾರ ತಡರಾತ್ರಿ ಮಳೆ ಸುರಿಯಿತಲ್ಲದೆ ಶನಿವಾರ ದಿನವಿಡೀ ದಟ್ಟ ಮೋಡಕವಿದ ವಾತಾವರಣ, ತುಂತುರು ಮಳೆ ಮುಂದುವರಿಯಿತು.</p>.<p>ಅಂಪೈರ್ಗಳಾದ ಎ.ನಂದಕಿಶೋರ್, ಸಂಜಯಕುಮಾರ್ ಸಿಂಗ್ ಮತ್ತು ರೆಫರಿ ಸತ್ಯಜಿತ್ ಸತ್ಭಾಯಿ ಅವರು ಶನಿವಾರ ಬೆಳಿಗ್ಗೆ 8.30ಕ್ಕೆ, 11, ಮಧ್ಯಾಹ್ನ 12.40, 2 ಹಾಗೂ 3 ಗಂಟೆಗೆ ಮೈದಾನವನ್ನು ಪರಿಶೀಲಿಸಿದರು. ಆ ಬಳಿಕ ದಿನದಾಟ ರದ್ದುಗೊಳಿಸಲು ನಿರ್ಧರಿಸಿದರು.</p>.<p>ಭಾನುವಾರದ ಒಂದು ದಿನದ ಆಟ ಮಾತ್ರ ಬಾಕಿಯಿದೆ. ಭಾರತ ‘ಎ’ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ಗೆ 229 ರನ್ ಗಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>