<p><strong>ಮೆಲ್ಬರ್ನ್:</strong> ಗ್ರ್ಯಾನ್ಸ್ಲಾಮ್ ಟೂರ್ನಿಯೊಂದಕ್ಕೆ ಅರ್ಹತೆ ಪಡೆದುಕೊಳ್ಳಬೇಕೆಂಬ ಭಾರತದ ಟೆನಿಸ್ ತಾರೆ ಅಂಕಿತಾ ರೈನಾ ಕನಸು ಈ ಬಾರಿಯೂ ನನಸಾಗಲಿಲ್ಲ. ಆಸ್ಟ್ರೇಲಿಯಾ ಓಪನ್ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಅವರು ಬುಧವಾರ ಸರ್ಬಿಯಾದ ಓಲ್ಗಾ ಡೆನಿಲೊವಿಚ್ ಎದುರು ಸೋತರು.</p>.<p>ದುಬೈನಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನಮಹಿಳಾ ಸಿಂಗಲ್ಸ್ ಟೂರ್ನಿಯ ಪಂದ್ಯದಲ್ಲಿ ಅಂಕಿತಾ 2–6, 6–3, 1–6ರಿಂದ ಸೋಲು ಅನುಭವಿಸಿದರು. ಈ ಹಣಾಹಣಿ ಎರಡು ತಾಸುಗಳವರೆಗೆ ನಡೆಯಿತು.</p>.<p>ಗ್ರ್ಯಾನ್ಸ್ಲಾಮ್ ಟೂರ್ನಿಯೊಂದಕ್ಕೆ ಅರ್ಹತೆ ಗಿಟ್ಟಿಸಲು ಅಂಕಿತಾ ನಡೆಸಿದ ಆರನೇ ಪ್ರಯತ್ನ ಇದಾಗಿತ್ತು.</p>.<p>ಸುಮಿತ್ ನಗಾಲ್ ಅವರು ಈ ಬಾರಿಯ ಆಸ್ಟ್ರೇಲಿಯಾ ಓಪನ್ ಸಿಂಗಲ್ಸ್ ವಿಭಾಗದ ಮುಖ್ಯ ಸುತ್ತಿನಲ್ಲಿ ಸ್ಪರ್ಧಿಸಲಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ. ನಗಾಲ್ ಅವರಿಗೆ ವೈಲ್ಡ್ಕಾರ್ಡ್ ಪ್ರವೇಶ ಸಿಕ್ಕಿದೆ.</p>.<p>ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲೇ ರಾಮಕುಮಾರ್ ರಾಮನಾಥನ್ ಅವರು ನಿರ್ಗಮಿಸಿದ್ದರೆ, ಪ್ರಜ್ಞೇಶ್ ಗುಣೇಶ್ವರನ್ ಎರಡನೇ ಸುತ್ತಿನಲ್ಲಿ ಸೋಲುಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೆಲ್ಬರ್ನ್:</strong> ಗ್ರ್ಯಾನ್ಸ್ಲಾಮ್ ಟೂರ್ನಿಯೊಂದಕ್ಕೆ ಅರ್ಹತೆ ಪಡೆದುಕೊಳ್ಳಬೇಕೆಂಬ ಭಾರತದ ಟೆನಿಸ್ ತಾರೆ ಅಂಕಿತಾ ರೈನಾ ಕನಸು ಈ ಬಾರಿಯೂ ನನಸಾಗಲಿಲ್ಲ. ಆಸ್ಟ್ರೇಲಿಯಾ ಓಪನ್ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಅವರು ಬುಧವಾರ ಸರ್ಬಿಯಾದ ಓಲ್ಗಾ ಡೆನಿಲೊವಿಚ್ ಎದುರು ಸೋತರು.</p>.<p>ದುಬೈನಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನಮಹಿಳಾ ಸಿಂಗಲ್ಸ್ ಟೂರ್ನಿಯ ಪಂದ್ಯದಲ್ಲಿ ಅಂಕಿತಾ 2–6, 6–3, 1–6ರಿಂದ ಸೋಲು ಅನುಭವಿಸಿದರು. ಈ ಹಣಾಹಣಿ ಎರಡು ತಾಸುಗಳವರೆಗೆ ನಡೆಯಿತು.</p>.<p>ಗ್ರ್ಯಾನ್ಸ್ಲಾಮ್ ಟೂರ್ನಿಯೊಂದಕ್ಕೆ ಅರ್ಹತೆ ಗಿಟ್ಟಿಸಲು ಅಂಕಿತಾ ನಡೆಸಿದ ಆರನೇ ಪ್ರಯತ್ನ ಇದಾಗಿತ್ತು.</p>.<p>ಸುಮಿತ್ ನಗಾಲ್ ಅವರು ಈ ಬಾರಿಯ ಆಸ್ಟ್ರೇಲಿಯಾ ಓಪನ್ ಸಿಂಗಲ್ಸ್ ವಿಭಾಗದ ಮುಖ್ಯ ಸುತ್ತಿನಲ್ಲಿ ಸ್ಪರ್ಧಿಸಲಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ. ನಗಾಲ್ ಅವರಿಗೆ ವೈಲ್ಡ್ಕಾರ್ಡ್ ಪ್ರವೇಶ ಸಿಕ್ಕಿದೆ.</p>.<p>ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲೇ ರಾಮಕುಮಾರ್ ರಾಮನಾಥನ್ ಅವರು ನಿರ್ಗಮಿಸಿದ್ದರೆ, ಪ್ರಜ್ಞೇಶ್ ಗುಣೇಶ್ವರನ್ ಎರಡನೇ ಸುತ್ತಿನಲ್ಲಿ ಸೋಲುಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>