<p><strong>ಬೆಂಗಳೂರು: </strong>ಹೈದರಾಬಾದ್ನ ಪ್ರಾಂಜಲ ಯಡ್ಲಪಲ್ಲಿ ಅವರು ಐಟಿಎಫ್ ಮಹಿಳೆಯರ ವಿಶ್ವ ಟೆನಿಸ್ ಟೂರ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.</p>.<p>ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಅಂಗಣದಲ್ಲಿ ಭಾನುವಾರ ಕೊನೆಗೊಂಡ ಚಾಂಪಿಯನ್ಷಿಪ್ನ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಅವರು ತಮ್ಮದೇ ರಾಜ್ಯದ ಸೌಜನ್ಯ ಬಾವಿಸೆಟ್ಟಿ ಸವಾಲು ಮೀರಿದರು. ಪ್ರಾಂಜಲ 7-5, 6-2ರಿಂದ ಜಯಿಸಿ ವೃತ್ತಿಜೀವನದ ನಾಲ್ಕನೇ ಐಟಿಎಫ್ ಕಿರೀಟ ಧರಿಸಿದರು.</p>.<p>ಮೊದಲ ಸೆಟ್ನಲ್ಲಿ 3–5ರಿಂದ ಹಿನ್ನಡೆ ಅನುಭವಿಸಿದ್ದ ಪ್ರಾಂಜಲ ಬಳಿಕ ಪುಟಿದೆದ್ದು 7–5ರಿಂದ ಸೆಟ್ ತಮ್ಮದಾಗಿಸಿಕೊಂಡರು. ಅದೇ ಲಯದೊಂದಿಗೆ ಮುಂದುವರಿದು ಎರಡನೇ ಸೆಟ್ ಗೆದ್ದು ಪ್ರಶಸ್ತಿ ಒಲಿಸಿಕೊಂಡರು.</p>.<p>ಭುಜದ ನೋವಿನಿಂದ ಬಳಲಿದ್ದ 22 ವರ್ಷದ ಪ್ರಾಂಜಲ, ಸುಮಾರು ಎರಡು ವರ್ಷಗಳ ಕಾಲ ಟೆನಿಸ್ನಿಂದ ದೂರ ಉಳಿದಿದ್ದರು. ಇಲ್ಲಿ ಪ್ರಶಸ್ತಿಯೊಂದಿಗೆ ಅವರು ₹ 1 ಲಕ್ಷ 70 ಸಾವಿರ ನಗದು ತಮ್ಮದಾಗಿಸಿಕೊಂಡರು. ಅಲ್ಲದೆ 10 ವಿಶ್ವ ರ್ಯಾಂಕಿಂಗ್ ಪಾಯಿಂಟ್ಸ್ ಕೂಡ ಗಳಿಸಿದರು.</p>.<p>ಸೌಜನ್ಯ ಆರು ಪಾಯಿಂಟ್ಸ್ ಮತ್ತು ₹ 1 ಲಕ್ಷ 10 ಸಾವಿರ ಜೇಬಿಗಿಳಿಸಿದರು.</p>.<p>ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ನಲ್ಲಿ, ಸೌಜನ್ಯ ಆಕ್ರಮಣದ ಆಟಕ್ಕೆ ಹೆಚ್ಚು ಮಹತ್ವ ನೀಡಿದರು. ಆದರೆ ಅದೇ ಅವರಿಗೆ ಮುಳುವಾಯಿತು. ಶಾಂತಚಿತ್ತ ಆಟದ ಮೂಲಕ ಪ್ರಾಂಜಲ ಪಾಯಿಂಟ್ಸ್ ಹೆಚ್ಚಿಸಿಕೊಂಡರು. ಬ್ಯಾಕ್ಹ್ಯಾಂಡ್ ಹೊಡೆತಗಳಿಗೆ ಒತ್ತು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಹೈದರಾಬಾದ್ನ ಪ್ರಾಂಜಲ ಯಡ್ಲಪಲ್ಲಿ ಅವರು ಐಟಿಎಫ್ ಮಹಿಳೆಯರ ವಿಶ್ವ ಟೆನಿಸ್ ಟೂರ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.</p>.<p>ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಅಂಗಣದಲ್ಲಿ ಭಾನುವಾರ ಕೊನೆಗೊಂಡ ಚಾಂಪಿಯನ್ಷಿಪ್ನ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಅವರು ತಮ್ಮದೇ ರಾಜ್ಯದ ಸೌಜನ್ಯ ಬಾವಿಸೆಟ್ಟಿ ಸವಾಲು ಮೀರಿದರು. ಪ್ರಾಂಜಲ 7-5, 6-2ರಿಂದ ಜಯಿಸಿ ವೃತ್ತಿಜೀವನದ ನಾಲ್ಕನೇ ಐಟಿಎಫ್ ಕಿರೀಟ ಧರಿಸಿದರು.</p>.<p>ಮೊದಲ ಸೆಟ್ನಲ್ಲಿ 3–5ರಿಂದ ಹಿನ್ನಡೆ ಅನುಭವಿಸಿದ್ದ ಪ್ರಾಂಜಲ ಬಳಿಕ ಪುಟಿದೆದ್ದು 7–5ರಿಂದ ಸೆಟ್ ತಮ್ಮದಾಗಿಸಿಕೊಂಡರು. ಅದೇ ಲಯದೊಂದಿಗೆ ಮುಂದುವರಿದು ಎರಡನೇ ಸೆಟ್ ಗೆದ್ದು ಪ್ರಶಸ್ತಿ ಒಲಿಸಿಕೊಂಡರು.</p>.<p>ಭುಜದ ನೋವಿನಿಂದ ಬಳಲಿದ್ದ 22 ವರ್ಷದ ಪ್ರಾಂಜಲ, ಸುಮಾರು ಎರಡು ವರ್ಷಗಳ ಕಾಲ ಟೆನಿಸ್ನಿಂದ ದೂರ ಉಳಿದಿದ್ದರು. ಇಲ್ಲಿ ಪ್ರಶಸ್ತಿಯೊಂದಿಗೆ ಅವರು ₹ 1 ಲಕ್ಷ 70 ಸಾವಿರ ನಗದು ತಮ್ಮದಾಗಿಸಿಕೊಂಡರು. ಅಲ್ಲದೆ 10 ವಿಶ್ವ ರ್ಯಾಂಕಿಂಗ್ ಪಾಯಿಂಟ್ಸ್ ಕೂಡ ಗಳಿಸಿದರು.</p>.<p>ಸೌಜನ್ಯ ಆರು ಪಾಯಿಂಟ್ಸ್ ಮತ್ತು ₹ 1 ಲಕ್ಷ 10 ಸಾವಿರ ಜೇಬಿಗಿಳಿಸಿದರು.</p>.<p>ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ನಲ್ಲಿ, ಸೌಜನ್ಯ ಆಕ್ರಮಣದ ಆಟಕ್ಕೆ ಹೆಚ್ಚು ಮಹತ್ವ ನೀಡಿದರು. ಆದರೆ ಅದೇ ಅವರಿಗೆ ಮುಳುವಾಯಿತು. ಶಾಂತಚಿತ್ತ ಆಟದ ಮೂಲಕ ಪ್ರಾಂಜಲ ಪಾಯಿಂಟ್ಸ್ ಹೆಚ್ಚಿಸಿಕೊಂಡರು. ಬ್ಯಾಕ್ಹ್ಯಾಂಡ್ ಹೊಡೆತಗಳಿಗೆ ಒತ್ತು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>