<p><strong>ಬೆಂಗಳೂರು: </strong>ಎದುರಾಳಿಗಳ ಸವಾಲನ್ನು ದಿಟ್ಟವಾಗಿ ಎದುರಿಸಿದ ಕರ್ನಾಟಕದ ಆಟಗಾರರಾದ ವೈಭವ್ ಕೃಷ್ಣ ಶ್ರೀರಾಮ್ ಮತ್ತು ಸುಚಿರ್ ಚೇತನ್ ಶೇಷಾದ್ರಿ ಅವರು ಟೆನಿಸ್ 360 ಅಕಾಡೆಮಿಯಲ್ಲಿ ನಡೆಯುತ್ತಿರುವ ಎಐಟಿಎ ಟ್ಯಾಲೆಂಟ್ ಸೀರಿಸ್ನ 16 ವರ್ಷದೊಳಗಿನವರ ಟೂರ್ನಿಯ ಫೈನಲ್ ಪ್ರವೇಶಿಸಿದರು.</p>.<p>ಗುರುವಾರ ನಡೆದ ಸೆಮಿಫೈನಲ್ನಲ್ಲಿ ಆರನೇ ಶ್ರೇಯಾಂಕದ ವೈಭವ್ ಅಗ್ರ ಶ್ರೇಯಾಂಕದ ಜೇಸನ್ ಮೈಕೆಲ್ ಡೇವಿಡ್ ವಿರುದ್ಧ 6–1, 7–5ರಲ್ಲಿ ಜಯ ಗಳಿಸಿದರು. ನಾಲ್ಕನೇ ಶ್ರೇಯಾಂಕದ ಸುಚಿರ್ ಎರಡನೇ ಶ್ರೇಯಾಂಕದ ಅನೂಪ್ ಕೇಶವಮೂರ್ತಿ ಎದುರು 7–5, 6–1ರಲ್ಲಿ ಗೆಲುವು ಸಾಧಿಸಿದರು. </p>.<p>ಬಾಲಕಿಯರ ವಿಭಾಗದಲ್ಲಿ ದಿಶಾ ಸಂತೋಷ್ ಖಂಡೋಜಿ 6-1, 7-6 (1)ರಲ್ಲಿ ವಾರುಣ್ಯ ಸಿ.ಎನ್ ಎದುರು ಗೆದ್ದು ಫೈನಲ್ ಪ್ರವೇಶಿಸಿದರು. ಮೂರನೇ ಶ್ರೇಯಾಂಕದ ಕಾಜಲ್ ರಾಮಿಶೆಟ್ಟಿ ಅಗ್ರ ಶ್ರೇಯಾಂಕದ ಗಗನಾ ಮೋಹನ್ ಎದುರು 1-6, 6-4, 6-3ರಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು.</p>.<p>ಬಾಲಕರ ಡಬಲ್ಸ್ ವಿಭಾಗದ ಪ್ರಶಸ್ತಿ ಅನೂಪ್ ಕೇಶವಮೂರ್ತಿ ಮತ್ತು ಜೇಸನ್ ಜೋಡಿಯ ಪಾಲಾಯಿತು. ಫೈನಲ್ನಲ್ಲಿ ಅವರು ಪವನ್ ಗಣೇಶ್ ಮತ್ತು ಹರೀಶ್ ಕುಮಾರ್ ವಿರುದ್ಧ 7-6 (2), 6-2ರಲ್ಲಿ ಜಯ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎದುರಾಳಿಗಳ ಸವಾಲನ್ನು ದಿಟ್ಟವಾಗಿ ಎದುರಿಸಿದ ಕರ್ನಾಟಕದ ಆಟಗಾರರಾದ ವೈಭವ್ ಕೃಷ್ಣ ಶ್ರೀರಾಮ್ ಮತ್ತು ಸುಚಿರ್ ಚೇತನ್ ಶೇಷಾದ್ರಿ ಅವರು ಟೆನಿಸ್ 360 ಅಕಾಡೆಮಿಯಲ್ಲಿ ನಡೆಯುತ್ತಿರುವ ಎಐಟಿಎ ಟ್ಯಾಲೆಂಟ್ ಸೀರಿಸ್ನ 16 ವರ್ಷದೊಳಗಿನವರ ಟೂರ್ನಿಯ ಫೈನಲ್ ಪ್ರವೇಶಿಸಿದರು.</p>.<p>ಗುರುವಾರ ನಡೆದ ಸೆಮಿಫೈನಲ್ನಲ್ಲಿ ಆರನೇ ಶ್ರೇಯಾಂಕದ ವೈಭವ್ ಅಗ್ರ ಶ್ರೇಯಾಂಕದ ಜೇಸನ್ ಮೈಕೆಲ್ ಡೇವಿಡ್ ವಿರುದ್ಧ 6–1, 7–5ರಲ್ಲಿ ಜಯ ಗಳಿಸಿದರು. ನಾಲ್ಕನೇ ಶ್ರೇಯಾಂಕದ ಸುಚಿರ್ ಎರಡನೇ ಶ್ರೇಯಾಂಕದ ಅನೂಪ್ ಕೇಶವಮೂರ್ತಿ ಎದುರು 7–5, 6–1ರಲ್ಲಿ ಗೆಲುವು ಸಾಧಿಸಿದರು. </p>.<p>ಬಾಲಕಿಯರ ವಿಭಾಗದಲ್ಲಿ ದಿಶಾ ಸಂತೋಷ್ ಖಂಡೋಜಿ 6-1, 7-6 (1)ರಲ್ಲಿ ವಾರುಣ್ಯ ಸಿ.ಎನ್ ಎದುರು ಗೆದ್ದು ಫೈನಲ್ ಪ್ರವೇಶಿಸಿದರು. ಮೂರನೇ ಶ್ರೇಯಾಂಕದ ಕಾಜಲ್ ರಾಮಿಶೆಟ್ಟಿ ಅಗ್ರ ಶ್ರೇಯಾಂಕದ ಗಗನಾ ಮೋಹನ್ ಎದುರು 1-6, 6-4, 6-3ರಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು.</p>.<p>ಬಾಲಕರ ಡಬಲ್ಸ್ ವಿಭಾಗದ ಪ್ರಶಸ್ತಿ ಅನೂಪ್ ಕೇಶವಮೂರ್ತಿ ಮತ್ತು ಜೇಸನ್ ಜೋಡಿಯ ಪಾಲಾಯಿತು. ಫೈನಲ್ನಲ್ಲಿ ಅವರು ಪವನ್ ಗಣೇಶ್ ಮತ್ತು ಹರೀಶ್ ಕುಮಾರ್ ವಿರುದ್ಧ 7-6 (2), 6-2ರಲ್ಲಿ ಜಯ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>