<p><strong>ಸೋನೆಪತ್ (ಪಿಟಿಐ): </strong>`ಆ ನಾಲ್ಕು ವರ್ಷಗಳು ನನ್ನ ಪಾಲಿಗೆ ಮುಳ್ಳಿನ ಹಾಸಿಗೆಯಂತಿದ್ದವು. ಅದೆಷ್ಟೊ ರಾತ್ರಿಗಳು ನಿದ್ದೆ ಇಲ್ಲದೇ ಕಳೆದಿದ್ದೆ. ಏಕೆಂದರೆ 2008ರ ಬೀಜಿಂಗ್ ಒಲಿಂಪಿಕ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡಿದ್ದ ಕಹಿ ಕ್ಷಣ ಮತ್ತೆ ಮತ್ತೆ ನನ್ನನ್ನು ಕಾಡುತಿತ್ತು~<br /> <br /> -ಈ ಮಾತು ಹೇಳಿದ್ದು ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಯೋಗೀಶ್ವರ್ ದತ್. `ಈ ಬಾರಿ ಕಂಚಿನ ಪದಕದ ಸಾಧನೆ ಮಾಡಲು ಸಾಧ್ಯವಾಗಿದ್ದು ನನಗೆ ಸಮಾಧಾನ ಉಂಟು ಮಾಡಿದೆ. ನಾಲ್ಕು ವರ್ಷಗಳ ಬಳಿಕ ಸರಿಯಾಗಿ ನಿದ್ದೆ ಮಾಡಲು ಅವಕಾಶ ಮಾಡಿಕೊಟ್ಟಿದೆ~ ಎಂದರು.<br /> <br /> `ಕೊನೆಗೂ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲು ನನಗೆ ಸಾಧ್ಯವಾಗಿದೆ. ಅದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು. ಈಗ ಖುಷಿಯಿಂದ ನಿದ್ದೆ ಮಾಡಬಹುದು~ ಎಂದು ದತ್ ನುಡಿದಿದ್ದಾರೆ. ಅವರು 60 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. <br /> <br /> `ಲಂಡನ್ನಲ್ಲಿ ಪದಕ ಗೆಲ್ಲುವ ವಿಶ್ವಾಸವಿತ್ತು. ಆದರೆ ಈ ಬಾರಿ ನನಗೆ ಕಠಿಣ ಡ್ರಾ ಲಭಿಸಿತ್ತು. ಹಾಗಾಗಿ ಚಿನ್ನದ ಪದಕದೊಂದಿಗೆ ಹಿಂತಿರುಗುವ ಆಸೆ ಈಡೇರಲಿಲ್ಲ. ಆ ಸಾಧನೆ ಮಾಡಲು ಸಾಧ್ಯವಾಗದ್ದಕ್ಕೆ ಇದು ನಾನು ನೀಡುತ್ತಿರುವ ಕಾರಣವಲ್ಲ. ಆದರೆ ಯಾರು ಎದುರಾಳಿ ಎಂಬುದರ ಮೇಲೂ ಫಲಿತಾಂಶ ಅಡಗಿರುತ್ತದೆ~ ಎಂದು 29 ವರ್ಷ ವಯಸ್ಸಿನ ಯೋಗೀಶ್ವರ್ ಹೇಳಿದರು.<br /> <br /> `ನಾನು ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ರಷ್ಯಾದ ಬೆಸಿಕ್ ಕುಡುಖೋವ್ ಎದುರು ಪೈಪೋಟಿ ನಡೆಸಿದೆ. ಕುಡುಖೋವ್ ಈ ಬಾರಿ ಬೆಳ್ಳಿ ಪದಕ ಗೆದ್ದರು. ಜೊತೆಗೆ ಅವರು ನಾಲ್ಕು ಬಾರಿಯ ವಿಶ್ವ ಚಾಂಪಿಯನ್. ಬೀಜಿಂಗ್ನಲ್ಲಿ ಕಂಚು ಜಯಿಸಿದ್ದರು. ಅವರ ಎದುರು ಸೋತರೂ ಮತ್ತೊಂದು ಅವಕಾಶ ಸಿಗಲಿದೆ ಎಂಬುದು ನನಗೆ ಗೊತ್ತಿತ್ತು. ಏಕೆಂದರೆ ಕುಡುಖೋವ್ ಫೈನಲ್ ತಲುಪುವ ವಿಶ್ವಾಸ ನನಗಿತ್ತು~ ಎಂದು ಅವರು ವಿವರಿಸಿದರು.<br /> <br /> 2009ರಲ್ಲಿ ಮಂಡಿ ನೋವಿನಿಂದ ದತ್ ಒಂದು ವರ್ಷ ಕುಸ್ತಿಯಿಂದ ಹೊರ ಉಳಿದಿದ್ದರು. ಹಾಗಾಗಿ ಕುಸ್ತಿಯನ್ನೇ ತ್ಯಜಿಸುವ ಹಂತ ತಲುಪಿದ್ದರು. ಆದರೆ ಪದಕ ಗೆಲ್ಲಬೇಕೆಂಬ ಅವರ ಛಲ ಅದಕ್ಕೆ ಅವಕಾಶ ನೀಡಲಿಲ್ಲ. <br /> <br /> ಈ ಬಾರಿಯ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸಿಗಬಹುದೇ ಎಂಬುಕ್ಕೆ ಪ್ರತಿಕ್ರಿಯಿಸಿದ ದತ್, `ಆ ಪುರಸ್ಕಾರ ನನಗೆ ಲಭಿಸುತ್ತದೆಯೇ ಇಲ್ಲವೇ ನನಗೆ ಗೊತ್ತಿಲ್ಲ. ಈ ವರ್ಷ ಅಲ್ಲದಿದ್ದರೂ ಮುಂದಿನ ವರ್ಷ ಸಿಗಬಹುದು. ಆದರೆ ಇಷ್ಟು ದಿನ ನನ್ನ ಹೃದಯ ಒಲಿಂಪಿಕ್ಸ್ ಪದಕಕ್ಕಾಗಿ ಮಿಡಿಯುತಿತ್ತು. ಅದರಲ್ಲಿ ನಾನು ಯಶಸ್ವಿಯಾಗಿದ್ದೇನೆ. ಆ ಖುಷಿಯಲ್ಲಿ ನಾನೀಗ ತೇಲುತ್ತಿದ್ದೇನೆ~ ಎಂದರು.<br /> <br /> 2016ರಲ್ಲಿ ರಯೋ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲೂ ಸ್ಪರ್ಧಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. `ನನಗೀಗ 29 ವರ್ಷ. ಮುಂದಿನ ಒಲಿಂಪಿಕ್ಸ್ ಆಗಮನಕ್ಕೆ ಇನ್ನೂ 4 ವರ್ಷಗಳಿವೆ. ಫಿಟ್ನೆಸ್ ಕಾಯ್ದುಕೊಂಡರೆ ಆ ಕ್ರೀಡಾ ಮೇಳದಲ್ಲಿ ಸ್ಪರ್ಧಿಸಬಹುದು. ಅದಕ್ಕೂ ಮೊದಲು 2014ರ ಏಷ್ಯನ್ ಕೂಟದಲ್ಲಿ ಉತ್ತಮ ಸಾಧನೆ ತೋರಬೇಕು~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋನೆಪತ್ (ಪಿಟಿಐ): </strong>`ಆ ನಾಲ್ಕು ವರ್ಷಗಳು ನನ್ನ ಪಾಲಿಗೆ ಮುಳ್ಳಿನ ಹಾಸಿಗೆಯಂತಿದ್ದವು. ಅದೆಷ್ಟೊ ರಾತ್ರಿಗಳು ನಿದ್ದೆ ಇಲ್ಲದೇ ಕಳೆದಿದ್ದೆ. ಏಕೆಂದರೆ 2008ರ ಬೀಜಿಂಗ್ ಒಲಿಂಪಿಕ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡಿದ್ದ ಕಹಿ ಕ್ಷಣ ಮತ್ತೆ ಮತ್ತೆ ನನ್ನನ್ನು ಕಾಡುತಿತ್ತು~<br /> <br /> -ಈ ಮಾತು ಹೇಳಿದ್ದು ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಯೋಗೀಶ್ವರ್ ದತ್. `ಈ ಬಾರಿ ಕಂಚಿನ ಪದಕದ ಸಾಧನೆ ಮಾಡಲು ಸಾಧ್ಯವಾಗಿದ್ದು ನನಗೆ ಸಮಾಧಾನ ಉಂಟು ಮಾಡಿದೆ. ನಾಲ್ಕು ವರ್ಷಗಳ ಬಳಿಕ ಸರಿಯಾಗಿ ನಿದ್ದೆ ಮಾಡಲು ಅವಕಾಶ ಮಾಡಿಕೊಟ್ಟಿದೆ~ ಎಂದರು.<br /> <br /> `ಕೊನೆಗೂ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲು ನನಗೆ ಸಾಧ್ಯವಾಗಿದೆ. ಅದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು. ಈಗ ಖುಷಿಯಿಂದ ನಿದ್ದೆ ಮಾಡಬಹುದು~ ಎಂದು ದತ್ ನುಡಿದಿದ್ದಾರೆ. ಅವರು 60 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. <br /> <br /> `ಲಂಡನ್ನಲ್ಲಿ ಪದಕ ಗೆಲ್ಲುವ ವಿಶ್ವಾಸವಿತ್ತು. ಆದರೆ ಈ ಬಾರಿ ನನಗೆ ಕಠಿಣ ಡ್ರಾ ಲಭಿಸಿತ್ತು. ಹಾಗಾಗಿ ಚಿನ್ನದ ಪದಕದೊಂದಿಗೆ ಹಿಂತಿರುಗುವ ಆಸೆ ಈಡೇರಲಿಲ್ಲ. ಆ ಸಾಧನೆ ಮಾಡಲು ಸಾಧ್ಯವಾಗದ್ದಕ್ಕೆ ಇದು ನಾನು ನೀಡುತ್ತಿರುವ ಕಾರಣವಲ್ಲ. ಆದರೆ ಯಾರು ಎದುರಾಳಿ ಎಂಬುದರ ಮೇಲೂ ಫಲಿತಾಂಶ ಅಡಗಿರುತ್ತದೆ~ ಎಂದು 29 ವರ್ಷ ವಯಸ್ಸಿನ ಯೋಗೀಶ್ವರ್ ಹೇಳಿದರು.<br /> <br /> `ನಾನು ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ರಷ್ಯಾದ ಬೆಸಿಕ್ ಕುಡುಖೋವ್ ಎದುರು ಪೈಪೋಟಿ ನಡೆಸಿದೆ. ಕುಡುಖೋವ್ ಈ ಬಾರಿ ಬೆಳ್ಳಿ ಪದಕ ಗೆದ್ದರು. ಜೊತೆಗೆ ಅವರು ನಾಲ್ಕು ಬಾರಿಯ ವಿಶ್ವ ಚಾಂಪಿಯನ್. ಬೀಜಿಂಗ್ನಲ್ಲಿ ಕಂಚು ಜಯಿಸಿದ್ದರು. ಅವರ ಎದುರು ಸೋತರೂ ಮತ್ತೊಂದು ಅವಕಾಶ ಸಿಗಲಿದೆ ಎಂಬುದು ನನಗೆ ಗೊತ್ತಿತ್ತು. ಏಕೆಂದರೆ ಕುಡುಖೋವ್ ಫೈನಲ್ ತಲುಪುವ ವಿಶ್ವಾಸ ನನಗಿತ್ತು~ ಎಂದು ಅವರು ವಿವರಿಸಿದರು.<br /> <br /> 2009ರಲ್ಲಿ ಮಂಡಿ ನೋವಿನಿಂದ ದತ್ ಒಂದು ವರ್ಷ ಕುಸ್ತಿಯಿಂದ ಹೊರ ಉಳಿದಿದ್ದರು. ಹಾಗಾಗಿ ಕುಸ್ತಿಯನ್ನೇ ತ್ಯಜಿಸುವ ಹಂತ ತಲುಪಿದ್ದರು. ಆದರೆ ಪದಕ ಗೆಲ್ಲಬೇಕೆಂಬ ಅವರ ಛಲ ಅದಕ್ಕೆ ಅವಕಾಶ ನೀಡಲಿಲ್ಲ. <br /> <br /> ಈ ಬಾರಿಯ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸಿಗಬಹುದೇ ಎಂಬುಕ್ಕೆ ಪ್ರತಿಕ್ರಿಯಿಸಿದ ದತ್, `ಆ ಪುರಸ್ಕಾರ ನನಗೆ ಲಭಿಸುತ್ತದೆಯೇ ಇಲ್ಲವೇ ನನಗೆ ಗೊತ್ತಿಲ್ಲ. ಈ ವರ್ಷ ಅಲ್ಲದಿದ್ದರೂ ಮುಂದಿನ ವರ್ಷ ಸಿಗಬಹುದು. ಆದರೆ ಇಷ್ಟು ದಿನ ನನ್ನ ಹೃದಯ ಒಲಿಂಪಿಕ್ಸ್ ಪದಕಕ್ಕಾಗಿ ಮಿಡಿಯುತಿತ್ತು. ಅದರಲ್ಲಿ ನಾನು ಯಶಸ್ವಿಯಾಗಿದ್ದೇನೆ. ಆ ಖುಷಿಯಲ್ಲಿ ನಾನೀಗ ತೇಲುತ್ತಿದ್ದೇನೆ~ ಎಂದರು.<br /> <br /> 2016ರಲ್ಲಿ ರಯೋ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲೂ ಸ್ಪರ್ಧಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. `ನನಗೀಗ 29 ವರ್ಷ. ಮುಂದಿನ ಒಲಿಂಪಿಕ್ಸ್ ಆಗಮನಕ್ಕೆ ಇನ್ನೂ 4 ವರ್ಷಗಳಿವೆ. ಫಿಟ್ನೆಸ್ ಕಾಯ್ದುಕೊಂಡರೆ ಆ ಕ್ರೀಡಾ ಮೇಳದಲ್ಲಿ ಸ್ಪರ್ಧಿಸಬಹುದು. ಅದಕ್ಕೂ ಮೊದಲು 2014ರ ಏಷ್ಯನ್ ಕೂಟದಲ್ಲಿ ಉತ್ತಮ ಸಾಧನೆ ತೋರಬೇಕು~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>