<p><strong>ಬೆಂಗಳೂರು:</strong> ಕೇರಳದ ಎಂಎಸ್ಪಿ ಎಚ್ಎಸ್ಎಸ್ ಪ್ರೌಢಶಾಲಾ ತಂಡ ಬಿಡಿಎಫ್ಎ ಹಾಗೂ ಪ್ರೊಕಾಮ್ ಇಂಟರ್ ನ್ಯಾಷನಲ್ ಲಿಮಿಟೆಡ್ ಆಶ್ರಯದಲ್ಲಿ ನಡೆಯುತ್ತಿರುವ ಮಹೀಂದ್ರಾ ಯೂತ್ ಚಾಲೆಂಜ್ ಅಂತರ ಶಾಲಾ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ 3-0ಗೋಲುಗಳಿಂದ ಗೋವಾದ ಬ್ರಿಟ್ಟೊ ಶಾಲಾ ತಂಡವನ್ನು ಮಣಿಸಿತು.<br /> <br /> ವಿಜಯಿ ತಂಡದ ಮಹಮ್ಮದ್ ಸಾಜಿದ್ ಖಾನ್ 9 ಹಾಗೂ 18ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ರೆಹಮಾನ್ 35ನೇ ನಿಮಿಷದಲ್ಲಿ ಗೋಲು ತಂದಿಟ್ಟು ಗೆಲುವಿನ ರೂವಾರಿಯೆನಿಸಿದರು. <br /> <br /> ಎಂಎಸ್ಪಿ ಶಾಲೆ ವಿರಾಮದ ವೇಳೆಗೆ 3-0ರಲ್ಲಿ ಮುನ್ನಡೆ ಸಾಧಿಸಿತ್ತು. ಎರಡು ಗೋಲುಗಳನ್ನು ಗಳಿಸಿದ ಸಾಜಿದ್ `ಪಂದ್ಯ ಶ್ರೇಷ್ಠ~ ಗೌರವ ಪಡೆದರು. <br /> <br /> ದಿನದ ಇತರ ಪಂದ್ಯಗಳಲ್ಲಿ ಕೋಲ್ಕತ್ತದ ಪಂಧು ಎಸ್ಬಿಎಸ್ ಪ್ರೌಢಶಾಲೆ 3-0ಗೋಲುಗಳಿಂದ ಮುಂಬೈನ ಡಾನ್ ಬಾಸ್ಕೊ ಪ್ರೌಢಶಾಲಾ ತಂಡದ ಮೇಲೂ, ದೆಹಲಿಯ ಸಿಆರ್ಪಿಎಫ್ ಶಾಲೆ 1-0 ಗೋಲಿನಿಂದ ಆತಿಥೇಯ ಬೆಂಗಳೂರಿನ ಅಲೋಶಿಯಸ್ ಶಾಲಾ ತಂಡದ ವಿರುದ್ಧವೂ ಗೆಲುವು ಸಾಧಿಸಿತು. ಸಿಆರ್ಪಿಎಫ್ ತಂಡದ ದಿನೇಶ್ ಸುಹಾಗ್ 41ನೇ ನಿಮಿಷದಲ್ಲಿ ಗೋಲು ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೇರಳದ ಎಂಎಸ್ಪಿ ಎಚ್ಎಸ್ಎಸ್ ಪ್ರೌಢಶಾಲಾ ತಂಡ ಬಿಡಿಎಫ್ಎ ಹಾಗೂ ಪ್ರೊಕಾಮ್ ಇಂಟರ್ ನ್ಯಾಷನಲ್ ಲಿಮಿಟೆಡ್ ಆಶ್ರಯದಲ್ಲಿ ನಡೆಯುತ್ತಿರುವ ಮಹೀಂದ್ರಾ ಯೂತ್ ಚಾಲೆಂಜ್ ಅಂತರ ಶಾಲಾ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ 3-0ಗೋಲುಗಳಿಂದ ಗೋವಾದ ಬ್ರಿಟ್ಟೊ ಶಾಲಾ ತಂಡವನ್ನು ಮಣಿಸಿತು.<br /> <br /> ವಿಜಯಿ ತಂಡದ ಮಹಮ್ಮದ್ ಸಾಜಿದ್ ಖಾನ್ 9 ಹಾಗೂ 18ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ರೆಹಮಾನ್ 35ನೇ ನಿಮಿಷದಲ್ಲಿ ಗೋಲು ತಂದಿಟ್ಟು ಗೆಲುವಿನ ರೂವಾರಿಯೆನಿಸಿದರು. <br /> <br /> ಎಂಎಸ್ಪಿ ಶಾಲೆ ವಿರಾಮದ ವೇಳೆಗೆ 3-0ರಲ್ಲಿ ಮುನ್ನಡೆ ಸಾಧಿಸಿತ್ತು. ಎರಡು ಗೋಲುಗಳನ್ನು ಗಳಿಸಿದ ಸಾಜಿದ್ `ಪಂದ್ಯ ಶ್ರೇಷ್ಠ~ ಗೌರವ ಪಡೆದರು. <br /> <br /> ದಿನದ ಇತರ ಪಂದ್ಯಗಳಲ್ಲಿ ಕೋಲ್ಕತ್ತದ ಪಂಧು ಎಸ್ಬಿಎಸ್ ಪ್ರೌಢಶಾಲೆ 3-0ಗೋಲುಗಳಿಂದ ಮುಂಬೈನ ಡಾನ್ ಬಾಸ್ಕೊ ಪ್ರೌಢಶಾಲಾ ತಂಡದ ಮೇಲೂ, ದೆಹಲಿಯ ಸಿಆರ್ಪಿಎಫ್ ಶಾಲೆ 1-0 ಗೋಲಿನಿಂದ ಆತಿಥೇಯ ಬೆಂಗಳೂರಿನ ಅಲೋಶಿಯಸ್ ಶಾಲಾ ತಂಡದ ವಿರುದ್ಧವೂ ಗೆಲುವು ಸಾಧಿಸಿತು. ಸಿಆರ್ಪಿಎಫ್ ತಂಡದ ದಿನೇಶ್ ಸುಹಾಗ್ 41ನೇ ನಿಮಿಷದಲ್ಲಿ ಗೋಲು ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>