<p>ಅವ್ಯವಸ್ಥೆಯಲ್ಲಿ ಮುಗಿದು ಹೋದ ಕಾರ್ಯಕ್ರಮ, ಕುಸ್ತಿ ಫೆಡರೇಷನ್ ಆಕ್ರೋಶ<br /> <strong>ನವದೆಹಲಿ (ಪಿಟಿಐ):</strong> ಸಾನಿಯಾ ನೆಹ್ವಾಲ್, ಯೋಗೇಂದರ್ ದತ್, ಆರ್ಚರಿ ಸ್ಪರ್ಧಿ ಜೈದೀಪ್ ಕರ್ಮಾಕರ್...!<br /> -ಈ ರೀತಿಯ ಅವಾಂತರಗಳು ನಡೆದಿದ್ದು ಕ್ರೀಡಾ ಸಚಿವಾಲಯ ಗುರುವಾರ ಒಲಿಂಪಿಕ್ಸ್ ಸಾಧಕರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ. ಕಾರ್ಯಕ್ರಮ ನಿರೂಪಕರು ಸೈನಾ ಅವರನ್ನು ಸಾನಿಯಾ, ಕುಸ್ತಿಪಟು ಯೋಗೀಶ್ವರ್ ಅವರನ್ನು ಯೋಗೇಂದರ್, ಶೂಟರ್ ಜೈದೀಪ್ ಅವರನ್ನು ಆರ್ಚರಿ ಸ್ಪರ್ಧಿ ಎಂದು ಕರೆದು ನಗೆಪಾಟಲಿಗೆ ಗುರಿಯಾದರು.<br /> <br /> ಅಷ್ಟೇ ಅಲ್ಲ, ಸಮಾರಂಭದಲ್ಲಿ ಅಧಿಕಾರಿಗಳದ್ದೇ ಕಾರುಬಾರು. ಇದ್ದಬದ್ದವರೆಲ್ಲಾ ವೇದಿಕೆ ಮೇಲೆ ನುಗ್ಗುತ್ತಿದ್ದರು. ಶಾಲೆಯ ಮಕ್ಕಳು, ಅಭಿಮಾನಿಗಳು ತಮ್ಮ ಹೀರೊಗಳನ್ನು ನೋಡಲು ಆಗಮಿಸಿದ್ದರು. ಆದರೆ ನೂಕುನುಗ್ಗಲು ಸಂಭವಿಸಿತು. ಸಮಾರಂಭದಲ್ಲಿ ಕಾಲ್ತುಳಿತ ಘಟನೆ ನಡೆಯದ್ದು ಅದೃಷ್ಟ. ಈ ಕಾರ್ಯಕ್ರಮ ನಡೆದಿದ್ದು ಮೇಜರ್ ಧ್ಯಾನ್ಚಂದ್ ರಾಷ್ಟ್ರೀಯ ಹಾಕಿ ಕ್ರೀಡಾಂಗಣದ ಹೊರ ಆವರಣದಲ್ಲಿ. <br /> <br /> ಪದಕ ವಿಜೇತ ಶೂಟರ್ಗಳಾದ ವಿಜಯ್ ಕುಮಾರ್, ಗಗನ್ ನಾರಂಗ್, ಕುಸ್ತಿಪಟುಗಳಾದ ಸುಶೀಲ್ ಕುಮಾರ್, ಯೋಗೀಶ್ವರ್ ದತ್, ಬಾಕ್ಸರ್ ಮೇರಿ ಕೋಮ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ಅವರಿಗೆ ಕ್ರೀಡಾ ಸಚಿವ ಅಜಯ್ ಮಾಕನ್ ಬಹುಮಾನದ ಹಣ ನೀಡಿ ಸನ್ಮಾನಿಸಿದರು.<br /> <br /> ಟಿವಿ ಹಾಗೂ ಫೋಟೊದಲ್ಲಿ ಕಾಣಿಸಿಕೊಳ್ಳುವ ಉದ್ದೇಶದಿಂದ ಕೆಲವರು ಸುಖಾಸುಮ್ಮನೇ ವೇದಿಕೆ ಹತ್ತುತ್ತಿದ್ದರು. ಈ ಸಮಾರಂಭಕ್ಕೆ ಉಳಿದ ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿತ್ತು. ಆದರೆ ಜನರ ಮಧ್ಯೆ ಅವರು ಮರೆಯಾಗಿದ್ದರು. <br /> ಈ ಅವ್ಯವಸ್ಥೆ ಬಗ್ಗೆ ಭಾರತ ಕುಸ್ತಿ ಫೆಡರೇಷನ್ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.<br /> <br /> `ಕ್ರೀಡಾ ಫೆಡರೇಷನ್ಗಳ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳನ್ನು ಆಹ್ವಾನಿಸಿ ಕ್ರೀಡಾ ಸಚಿವಾಲಯ ಅವಮಾನಿಸಿದೆ. ಈ ರೀತಿಯ ಅವ್ಯವಸ್ಥೆ ಇರುವ ಕಾರ್ಯಕ್ರಮವನ್ನು ನಾವೆಂದೂ ಕಂಡಿರಲಿಲ್ಲ~ ಎಂದು ಅವರು ನುಡಿದಿದ್ದಾರೆ.<br /> <br /> `ನನ್ನ ಹೆಸರು ಬರೆಯಿರಿ. ನನಗೇನು ಭಯವಿಲ್ಲ. ಈ ಅವ್ಯವಸ್ಥೆ ಕಂಡು ಹೆಚ್ಚಿನ ಕ್ರೀಡಾಪಟುಗಳು ಅರ್ಧಕ್ಕೆ ಎದ್ದು ಹೋದರು. ಕಾರ್ಯಕ್ರಮದಲ್ಲಿ ಕೊಂಚವೂ ಶಿಸ್ತು ಇರಲಿಲ್ಲ. ನಮ್ಮ ಫೆಡರೇಷನ್ ಈ ಬಾರಿ ಎರಡು ಪದಕ ಗೆದ್ದುಕೊಟ್ಟಿದೆ. ಆದರೆ ಕ್ರೀಡಾ ಸಚಿವಾಲಯ ನಮ್ಮ ಫೆಡರೇಷನ್ ಹೆಸರನ್ನೇ ಪ್ರಸ್ತಾಪಿಸಲಿಲ್ಲ. ಎಲ್ಲಾ ಶ್ರೇಯವನ್ನು ಅವರೇ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ~ ಎಂದು ಭೂಷಣ್ ಹೇಳಿದರು.<br /> <br /> ಈ ಕಾರ್ಯಕ್ರಮಕ್ಕೆ ವಿಜೇಂದರ್ ಸಿಂಗ್, ಕೃಷ್ಣಾ ಪೂನಿಯಾ, ಕೋಚ್ಗಳಾದ ಬಹದ್ದೂರ್ ಸಿಂಗ್ ಹಾಗೂ ಪಿ.ಟಿ.ಉಷಾ ಕೂಡ ಆಗಮಿಸಿದ್ದರು. ಆದರೆ ವೇದಿಕೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವೀಕ್ಷಿಸಲು ಅವರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಅವರಿಗೆ ಅಡ್ಡಲಾಗಿ ಜನ ನಿಂತಿದ್ದರು. <br /> <br /> ವಿಜೇಂದರ್ ಕಾರ್ಯಕ್ರಮದ ಮಧ್ಯದಲ್ಲೇ ಹೊರಬಂದರು. ವೇಟ್ಲಿಫ್ಟರ್ ರವಿಕುಮಾರ್ ಕೂಡ ಕಾರ್ಯಕ್ರಮದಿಂದ ಜನರ ಮಧ್ಯ ನುಸುಳಿ ಹೊರಬಂದರು.<br /> <br /> ಈ ಕಾರ್ಯಕ್ರಮಕ್ಕೆ ಬರಬಾರದಿತ್ತು ಎಂದು ಪದಕ ವಿಜೇತ ಕುಟುಂಬದ ವ್ಯಕ್ತಿಯೊಬ್ಬರು ನುಡಿದರು. `ಇಂತಹ ಕಾರ್ಯಕ್ರಮಕ್ಕೆ ನಾವು ಬರಬಾರದಿತ್ತು. ಇಷ್ಟು ಅಸ್ತವ್ಯಸ್ತದ ಕಾರ್ಯಕ್ರಮ ಬೇಕಿತ್ತಾ? ಇದರಿಂದ ನಮಗೆ ಮುಜುಗರವಾಗಿದೆ~ ಎಂದರು.<br /> <br /> ಮಾಧ್ಯಮದವರೂ ಮುಜುಗರಕ್ಕೆ ಒಳಗಾಗಬೇಕಾಯಿತು. ಪೊಲೀಸರು ಅನುಚಿತವಾಗಿ ವರ್ತಿಸಿದರು. `ನೀವು ಮಾಧ್ಯಮದವರಾದರೇನು? ನಮ್ಮ ತಲೆಯ ಮೇಲೆ ಕೂರಲು ಅವಕಾಶ ನೀಡಬೇಕೇ? ಮೊದಲೇ ನೂಕುನುಗ್ಗುಲು ಸಂಭವಿಸಿದೆ. ಅದರಲ್ಲಿ ನಿಮಗೆ ಇಲ್ಲಿ ಜಾಗಬೇಕೇ~ ಎಂದು ಮಾಧ್ಯಮದವರನ್ನು ತಡೆಗಟ್ಟಿದ ಪೊಲೀಸರು ಹೇಳಿದರು.<br /> <br /> ಈ ಅವ್ಯವಸ್ಥೆಯ ಮಧ್ಯದಲ್ಲೇ ಕ್ರೀಡಾ ಸಚಿವ ಮಾಕನ್ ಭಾಷಣ ಶುರು ಮಾಡಿದರು. `ಈಗಲೇ ಮುಂದಿನ ಒಲಿಂಪಿಕ್ಸ್ಗೆ ಯೋಜನೆ ರೂಪಿಸಲು ಶುರು ಮಾಡುತ್ತೇವೆ. 2020ರ ಒಲಿಂಪಿಕ್ಸ್ನಲ್ಲಿ 25 ಪದಕ ಗೆಲ್ಲಬೇಕು. ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ, ಉತ್ತಮ ಕೋಚ್ ಹಾಗೂ ವಿದೇಶಿ ತರಬೇತಿ ನೀಡಲು ಸರ್ಕಾರ ಸಿದ್ಧವಿದೆ~ ಎಂದರು.<br /> <br /> `ಒಲಿಂಪಿಯನ್ಗಳ ನಮ್ಮ ದೇಶದ ಹೀರೊಗಳು. ಅವರು ನಮ್ಮ ಸಂಪತ್ತು. ಅವರ ಸಾಧನೆಗೆ ಇಡೀ ದೇಶ ಹೆಮ್ಮೆಪಡುತ್ತದೆ~ ಎಂದೂ ಮಾಕನ್ ಹೇಳಿದರು. <br /> <br /> ಬಳಿಕ ಪದಕ ವಿಜೇತ ಕ್ರೀಡಾಪಟುಗಳನ್ನು ಐತಿಹಾಸಿಕ ಇಂಡಿಯಾ ಗೇಟ್ ಬಳಿ ಕರೆದುಕೊಂಡು ಹೋಗಲಾಯಿತು. ಈ ಕ್ರೀಡಾಪಟುಗಳು ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅವ್ಯವಸ್ಥೆಯಲ್ಲಿ ಮುಗಿದು ಹೋದ ಕಾರ್ಯಕ್ರಮ, ಕುಸ್ತಿ ಫೆಡರೇಷನ್ ಆಕ್ರೋಶ<br /> <strong>ನವದೆಹಲಿ (ಪಿಟಿಐ):</strong> ಸಾನಿಯಾ ನೆಹ್ವಾಲ್, ಯೋಗೇಂದರ್ ದತ್, ಆರ್ಚರಿ ಸ್ಪರ್ಧಿ ಜೈದೀಪ್ ಕರ್ಮಾಕರ್...!<br /> -ಈ ರೀತಿಯ ಅವಾಂತರಗಳು ನಡೆದಿದ್ದು ಕ್ರೀಡಾ ಸಚಿವಾಲಯ ಗುರುವಾರ ಒಲಿಂಪಿಕ್ಸ್ ಸಾಧಕರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ. ಕಾರ್ಯಕ್ರಮ ನಿರೂಪಕರು ಸೈನಾ ಅವರನ್ನು ಸಾನಿಯಾ, ಕುಸ್ತಿಪಟು ಯೋಗೀಶ್ವರ್ ಅವರನ್ನು ಯೋಗೇಂದರ್, ಶೂಟರ್ ಜೈದೀಪ್ ಅವರನ್ನು ಆರ್ಚರಿ ಸ್ಪರ್ಧಿ ಎಂದು ಕರೆದು ನಗೆಪಾಟಲಿಗೆ ಗುರಿಯಾದರು.<br /> <br /> ಅಷ್ಟೇ ಅಲ್ಲ, ಸಮಾರಂಭದಲ್ಲಿ ಅಧಿಕಾರಿಗಳದ್ದೇ ಕಾರುಬಾರು. ಇದ್ದಬದ್ದವರೆಲ್ಲಾ ವೇದಿಕೆ ಮೇಲೆ ನುಗ್ಗುತ್ತಿದ್ದರು. ಶಾಲೆಯ ಮಕ್ಕಳು, ಅಭಿಮಾನಿಗಳು ತಮ್ಮ ಹೀರೊಗಳನ್ನು ನೋಡಲು ಆಗಮಿಸಿದ್ದರು. ಆದರೆ ನೂಕುನುಗ್ಗಲು ಸಂಭವಿಸಿತು. ಸಮಾರಂಭದಲ್ಲಿ ಕಾಲ್ತುಳಿತ ಘಟನೆ ನಡೆಯದ್ದು ಅದೃಷ್ಟ. ಈ ಕಾರ್ಯಕ್ರಮ ನಡೆದಿದ್ದು ಮೇಜರ್ ಧ್ಯಾನ್ಚಂದ್ ರಾಷ್ಟ್ರೀಯ ಹಾಕಿ ಕ್ರೀಡಾಂಗಣದ ಹೊರ ಆವರಣದಲ್ಲಿ. <br /> <br /> ಪದಕ ವಿಜೇತ ಶೂಟರ್ಗಳಾದ ವಿಜಯ್ ಕುಮಾರ್, ಗಗನ್ ನಾರಂಗ್, ಕುಸ್ತಿಪಟುಗಳಾದ ಸುಶೀಲ್ ಕುಮಾರ್, ಯೋಗೀಶ್ವರ್ ದತ್, ಬಾಕ್ಸರ್ ಮೇರಿ ಕೋಮ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ಅವರಿಗೆ ಕ್ರೀಡಾ ಸಚಿವ ಅಜಯ್ ಮಾಕನ್ ಬಹುಮಾನದ ಹಣ ನೀಡಿ ಸನ್ಮಾನಿಸಿದರು.<br /> <br /> ಟಿವಿ ಹಾಗೂ ಫೋಟೊದಲ್ಲಿ ಕಾಣಿಸಿಕೊಳ್ಳುವ ಉದ್ದೇಶದಿಂದ ಕೆಲವರು ಸುಖಾಸುಮ್ಮನೇ ವೇದಿಕೆ ಹತ್ತುತ್ತಿದ್ದರು. ಈ ಸಮಾರಂಭಕ್ಕೆ ಉಳಿದ ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿತ್ತು. ಆದರೆ ಜನರ ಮಧ್ಯೆ ಅವರು ಮರೆಯಾಗಿದ್ದರು. <br /> ಈ ಅವ್ಯವಸ್ಥೆ ಬಗ್ಗೆ ಭಾರತ ಕುಸ್ತಿ ಫೆಡರೇಷನ್ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.<br /> <br /> `ಕ್ರೀಡಾ ಫೆಡರೇಷನ್ಗಳ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳನ್ನು ಆಹ್ವಾನಿಸಿ ಕ್ರೀಡಾ ಸಚಿವಾಲಯ ಅವಮಾನಿಸಿದೆ. ಈ ರೀತಿಯ ಅವ್ಯವಸ್ಥೆ ಇರುವ ಕಾರ್ಯಕ್ರಮವನ್ನು ನಾವೆಂದೂ ಕಂಡಿರಲಿಲ್ಲ~ ಎಂದು ಅವರು ನುಡಿದಿದ್ದಾರೆ.<br /> <br /> `ನನ್ನ ಹೆಸರು ಬರೆಯಿರಿ. ನನಗೇನು ಭಯವಿಲ್ಲ. ಈ ಅವ್ಯವಸ್ಥೆ ಕಂಡು ಹೆಚ್ಚಿನ ಕ್ರೀಡಾಪಟುಗಳು ಅರ್ಧಕ್ಕೆ ಎದ್ದು ಹೋದರು. ಕಾರ್ಯಕ್ರಮದಲ್ಲಿ ಕೊಂಚವೂ ಶಿಸ್ತು ಇರಲಿಲ್ಲ. ನಮ್ಮ ಫೆಡರೇಷನ್ ಈ ಬಾರಿ ಎರಡು ಪದಕ ಗೆದ್ದುಕೊಟ್ಟಿದೆ. ಆದರೆ ಕ್ರೀಡಾ ಸಚಿವಾಲಯ ನಮ್ಮ ಫೆಡರೇಷನ್ ಹೆಸರನ್ನೇ ಪ್ರಸ್ತಾಪಿಸಲಿಲ್ಲ. ಎಲ್ಲಾ ಶ್ರೇಯವನ್ನು ಅವರೇ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ~ ಎಂದು ಭೂಷಣ್ ಹೇಳಿದರು.<br /> <br /> ಈ ಕಾರ್ಯಕ್ರಮಕ್ಕೆ ವಿಜೇಂದರ್ ಸಿಂಗ್, ಕೃಷ್ಣಾ ಪೂನಿಯಾ, ಕೋಚ್ಗಳಾದ ಬಹದ್ದೂರ್ ಸಿಂಗ್ ಹಾಗೂ ಪಿ.ಟಿ.ಉಷಾ ಕೂಡ ಆಗಮಿಸಿದ್ದರು. ಆದರೆ ವೇದಿಕೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವೀಕ್ಷಿಸಲು ಅವರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಅವರಿಗೆ ಅಡ್ಡಲಾಗಿ ಜನ ನಿಂತಿದ್ದರು. <br /> <br /> ವಿಜೇಂದರ್ ಕಾರ್ಯಕ್ರಮದ ಮಧ್ಯದಲ್ಲೇ ಹೊರಬಂದರು. ವೇಟ್ಲಿಫ್ಟರ್ ರವಿಕುಮಾರ್ ಕೂಡ ಕಾರ್ಯಕ್ರಮದಿಂದ ಜನರ ಮಧ್ಯ ನುಸುಳಿ ಹೊರಬಂದರು.<br /> <br /> ಈ ಕಾರ್ಯಕ್ರಮಕ್ಕೆ ಬರಬಾರದಿತ್ತು ಎಂದು ಪದಕ ವಿಜೇತ ಕುಟುಂಬದ ವ್ಯಕ್ತಿಯೊಬ್ಬರು ನುಡಿದರು. `ಇಂತಹ ಕಾರ್ಯಕ್ರಮಕ್ಕೆ ನಾವು ಬರಬಾರದಿತ್ತು. ಇಷ್ಟು ಅಸ್ತವ್ಯಸ್ತದ ಕಾರ್ಯಕ್ರಮ ಬೇಕಿತ್ತಾ? ಇದರಿಂದ ನಮಗೆ ಮುಜುಗರವಾಗಿದೆ~ ಎಂದರು.<br /> <br /> ಮಾಧ್ಯಮದವರೂ ಮುಜುಗರಕ್ಕೆ ಒಳಗಾಗಬೇಕಾಯಿತು. ಪೊಲೀಸರು ಅನುಚಿತವಾಗಿ ವರ್ತಿಸಿದರು. `ನೀವು ಮಾಧ್ಯಮದವರಾದರೇನು? ನಮ್ಮ ತಲೆಯ ಮೇಲೆ ಕೂರಲು ಅವಕಾಶ ನೀಡಬೇಕೇ? ಮೊದಲೇ ನೂಕುನುಗ್ಗುಲು ಸಂಭವಿಸಿದೆ. ಅದರಲ್ಲಿ ನಿಮಗೆ ಇಲ್ಲಿ ಜಾಗಬೇಕೇ~ ಎಂದು ಮಾಧ್ಯಮದವರನ್ನು ತಡೆಗಟ್ಟಿದ ಪೊಲೀಸರು ಹೇಳಿದರು.<br /> <br /> ಈ ಅವ್ಯವಸ್ಥೆಯ ಮಧ್ಯದಲ್ಲೇ ಕ್ರೀಡಾ ಸಚಿವ ಮಾಕನ್ ಭಾಷಣ ಶುರು ಮಾಡಿದರು. `ಈಗಲೇ ಮುಂದಿನ ಒಲಿಂಪಿಕ್ಸ್ಗೆ ಯೋಜನೆ ರೂಪಿಸಲು ಶುರು ಮಾಡುತ್ತೇವೆ. 2020ರ ಒಲಿಂಪಿಕ್ಸ್ನಲ್ಲಿ 25 ಪದಕ ಗೆಲ್ಲಬೇಕು. ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ, ಉತ್ತಮ ಕೋಚ್ ಹಾಗೂ ವಿದೇಶಿ ತರಬೇತಿ ನೀಡಲು ಸರ್ಕಾರ ಸಿದ್ಧವಿದೆ~ ಎಂದರು.<br /> <br /> `ಒಲಿಂಪಿಯನ್ಗಳ ನಮ್ಮ ದೇಶದ ಹೀರೊಗಳು. ಅವರು ನಮ್ಮ ಸಂಪತ್ತು. ಅವರ ಸಾಧನೆಗೆ ಇಡೀ ದೇಶ ಹೆಮ್ಮೆಪಡುತ್ತದೆ~ ಎಂದೂ ಮಾಕನ್ ಹೇಳಿದರು. <br /> <br /> ಬಳಿಕ ಪದಕ ವಿಜೇತ ಕ್ರೀಡಾಪಟುಗಳನ್ನು ಐತಿಹಾಸಿಕ ಇಂಡಿಯಾ ಗೇಟ್ ಬಳಿ ಕರೆದುಕೊಂಡು ಹೋಗಲಾಯಿತು. ಈ ಕ್ರೀಡಾಪಟುಗಳು ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>