<p><strong>ನವದೆಹಲಿ</strong>: ಹೈದರಾಬಾದ್ ಪಂದ್ಯದ ಸೋಲಿನಿಂದ ನಮ್ಮ ತಂಡಕ್ಕೆ ಬಹಳ ಬೇಸರವಾಗಿದೆ. ನಾವು ಚೆನ್ನಾಗಿ ಆಡಲಿಲ್ಲ ಎಂದು ಇಂಗ್ಲೆಂಡ್ ಬೌಲರ್ ಜೇಡ್ ಡೆನ್ಬ್ಯಾಚ್ ವಿಷಾದ ವ್ಯಕ್ತಪಡಿಸಿದರು. <br /> <br /> ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಇನ್ನೂ ಸರಣಿ ಬಾಕಿಯಿದೆ. ನಾಲ್ಕು ಪಂದ್ಯಗಳಲ್ಲಿ ನಮ್ಮ ಆಟ ಪ್ರದರ್ಶಿಸುತ್ತೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ~ ಎಂದರು. <br /> <br /> `ಮಹೇಂದ್ರಸಿಂಗ್ ದೋನಿ ಒಳ್ಳೆಯ ನಾಯಕನ ಜೊತೆಗೆ ಉತ್ತಮ ಆಟಗಾರನೂ ಹೌದು. ನಮ್ಮ ಬೌಲಿಂಗ್ ಉತ್ತಮಪಡಿಸಿಕೊಳ್ಳುವ ಅಗತ್ಯವಿದೆ. ಪವರ್ಪ್ಲೇಗಳು ಕುತೂಹಲದ ಕ್ಷಣಗಳು. ಅದರಲ್ಲಿಯೇ ನಾವು ರನ್ಗಳನ್ನು ತಡೆಯಬೇಕು~ ಎಂದು ಹೇಳಿದರು. <br /> <br /> `ವಿದೇಶದ ನೆಲದಲ್ಲಿ ಆಡುವಾಗ, ಅದರಲ್ಲೂ ವಿಶ್ವಚಾಂಪಿಯನ್ ತಂಡದ ವಿರುದ್ಧ ಆಡುವಾಗ ಸೋಲಿನ ಫಲಿತಾಂಶ ಸಹಜ. ಅವರ ನೆಲದಲ್ಲಿಯೇ ಅವರನ್ನು ಸೋಲಿಸುವುದು ಕಷ್ಟದ ಕೆಲಸ. ಆದರೆ, ನಾವು ಪುಟಿದು ನಿಲ್ಲುತ್ತೇವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು. <br /> <br /> `ಸ್ಪಿನ್ ವಿಭಾಗವೊಂದೇ ನಮ್ಮ ಸಮಸ್ಯೆಯಲ್ಲ. ಎಲ್ಲ ವಿಭಾಗಗಳಲ್ಲಿಯೂ ನಾವು ಕೆಟ್ಟ ಪ್ರದರ್ಶನ ನೀಡಿದ್ದು ನಮ್ಮ ಸೋಲಿಗೆ ಕಾರಣ. ಮುಂದಿನ ಪಂದ್ಯಗಳಲ್ಲಿ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸುತ್ತೇವೆ~ ಎಂದರು.<br /> <br /> `ಇಲ್ಲಿನ ಪಿಚ್ಗಳು ತುಂಬಾ ವಿಭಿನ್ನವಾಗಿವೆ. ಇದಕ್ಕೆ ಅನುಗುಣವಾಗಿ ನಾವು ಕಾರ್ಯತಂತ್ರ ರೂಪಿಸುವ ಅಗತ್ಯವಿದೆ. ಎಲ್ಲ ಸವಾಲುಗಳನ್ನು ಎದುರಿಸಿಯೂ ಜಯಿಸುವ ಹಾದಿಯನ್ನು ಕಂಡುಹಿಡಿಯುತ್ತಿದ್ದೇವೆ~ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹೈದರಾಬಾದ್ ಪಂದ್ಯದ ಸೋಲಿನಿಂದ ನಮ್ಮ ತಂಡಕ್ಕೆ ಬಹಳ ಬೇಸರವಾಗಿದೆ. ನಾವು ಚೆನ್ನಾಗಿ ಆಡಲಿಲ್ಲ ಎಂದು ಇಂಗ್ಲೆಂಡ್ ಬೌಲರ್ ಜೇಡ್ ಡೆನ್ಬ್ಯಾಚ್ ವಿಷಾದ ವ್ಯಕ್ತಪಡಿಸಿದರು. <br /> <br /> ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಇನ್ನೂ ಸರಣಿ ಬಾಕಿಯಿದೆ. ನಾಲ್ಕು ಪಂದ್ಯಗಳಲ್ಲಿ ನಮ್ಮ ಆಟ ಪ್ರದರ್ಶಿಸುತ್ತೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ~ ಎಂದರು. <br /> <br /> `ಮಹೇಂದ್ರಸಿಂಗ್ ದೋನಿ ಒಳ್ಳೆಯ ನಾಯಕನ ಜೊತೆಗೆ ಉತ್ತಮ ಆಟಗಾರನೂ ಹೌದು. ನಮ್ಮ ಬೌಲಿಂಗ್ ಉತ್ತಮಪಡಿಸಿಕೊಳ್ಳುವ ಅಗತ್ಯವಿದೆ. ಪವರ್ಪ್ಲೇಗಳು ಕುತೂಹಲದ ಕ್ಷಣಗಳು. ಅದರಲ್ಲಿಯೇ ನಾವು ರನ್ಗಳನ್ನು ತಡೆಯಬೇಕು~ ಎಂದು ಹೇಳಿದರು. <br /> <br /> `ವಿದೇಶದ ನೆಲದಲ್ಲಿ ಆಡುವಾಗ, ಅದರಲ್ಲೂ ವಿಶ್ವಚಾಂಪಿಯನ್ ತಂಡದ ವಿರುದ್ಧ ಆಡುವಾಗ ಸೋಲಿನ ಫಲಿತಾಂಶ ಸಹಜ. ಅವರ ನೆಲದಲ್ಲಿಯೇ ಅವರನ್ನು ಸೋಲಿಸುವುದು ಕಷ್ಟದ ಕೆಲಸ. ಆದರೆ, ನಾವು ಪುಟಿದು ನಿಲ್ಲುತ್ತೇವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು. <br /> <br /> `ಸ್ಪಿನ್ ವಿಭಾಗವೊಂದೇ ನಮ್ಮ ಸಮಸ್ಯೆಯಲ್ಲ. ಎಲ್ಲ ವಿಭಾಗಗಳಲ್ಲಿಯೂ ನಾವು ಕೆಟ್ಟ ಪ್ರದರ್ಶನ ನೀಡಿದ್ದು ನಮ್ಮ ಸೋಲಿಗೆ ಕಾರಣ. ಮುಂದಿನ ಪಂದ್ಯಗಳಲ್ಲಿ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸುತ್ತೇವೆ~ ಎಂದರು.<br /> <br /> `ಇಲ್ಲಿನ ಪಿಚ್ಗಳು ತುಂಬಾ ವಿಭಿನ್ನವಾಗಿವೆ. ಇದಕ್ಕೆ ಅನುಗುಣವಾಗಿ ನಾವು ಕಾರ್ಯತಂತ್ರ ರೂಪಿಸುವ ಅಗತ್ಯವಿದೆ. ಎಲ್ಲ ಸವಾಲುಗಳನ್ನು ಎದುರಿಸಿಯೂ ಜಯಿಸುವ ಹಾದಿಯನ್ನು ಕಂಡುಹಿಡಿಯುತ್ತಿದ್ದೇವೆ~ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>