<p><strong>ಮೈಸೂರು: </strong>ಪ್ರಸಕ್ತ ರಣಜಿ ಋತುವಿನ ಕ್ವಾರ್ಟರ್ಫೈನಲ್ ಪಂದ್ಯವು ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ಕರ್ನಾಟಕ ಇರುವುದಿಲ್ಲ! ತಟಸ್ಥ ಸ್ಥಳದಲ್ಲಿ ಎಂಟರ ಘಟ್ಟದ ಪಂದ್ಯಗಳು ನಡೆಯಬೇಕು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನಿ ಸಿರುವುದರಿಂದ ಗಂಗೋತ್ರಿಯಲ್ಲಿ ಬೇರೆ ರಾಜ್ಯಗಳ ನಡುವಿನ ಎಂಟರ ಘಟ್ಟದ ಪಂದ್ಯ ನಡೆಯಲಿದೆ.<br /> <br /> ‘ಕಳೆದ ಕೆಲವು ಟೂರ್ನಿಗಳಲ್ಲಿ ಎಂಟರ ಘಟ್ಟದ ಹಂತದಲ್ಲಿ ಪಿಚ್ಗಳ ಸಮಸ್ಯೆಯಾಗಿದ್ದು ಮತ್ತು ಈ ಬಾರಿಯ ಲೀಗ್ನಲ್ಲಿಯೂ ಕೆಲವೆಡೆ ಪಿಚ್ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಬಿಸಿಸಿಐ ಈ ಕ್ರಮ ಕೈಗೊಂಡಿದೆ. ಲೀಗ್ ಹಂತದ ಪಂದ್ಯಗಳು ಸಮಾಪ್ತಿಯಾದ ನಂತರ ಎಂಟರ ಘಟ್ಟದ ಪಂದ್ಯಗಳು ನಿರ್ಧಾರ ಗೊಳ್ಳಲಿವೆ. ಕರ್ನಾಟಕ ತಂಡವು ಎಂಟರ ಘಟ್ಟ ಪ್ರವೇಶಿಸಿದರೆ, ಬೇರೆ ರಾಜ್ಯದಲ್ಲಿ ಆಡಬೇಕಾಗುತ್ತದೆ.</p>.<p>ಇದರಿಂದ ನಮ್ಮ ಸ್ಥಳೀಯ ಉದಯೋನ್ಮುಖ ಆಟಗಾರರಿಗೆ ಯಾವುದೇ ಪ್ರಯೋಜನವಿಲ್ಲ. ನಮ್ಮ ತವರಿನ ತಂಡಗಳು ಆಡಿದಾಗ ಮಾತ್ರ ಆಸಕ್ತರು, ಅಭಿಮಾನಿಗಳು ಬಂದು ನೋಡುತ್ತಾರೆ. ಇದರಿಂದ ಬೆಳೆಯುವ ಹುಡುಗರಿಗೆ ಅನುಕೂಲವಾಗುತ್ತದೆ. ಕೆಲವು ವರ್ಷಗಳ ಹಿಂದೆಯೂ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ನಡೆಸಲಾಗಿತ್ತು. ನಂತರ ಆ ಪದ್ಧತಿಯನ್ನು ರದ್ದುಗೊಳಿಸಲಾಗಿತ್ತು’ ಎಂದು ಇಲ್ಲಿಗೆ ಭೇಟಿ ನೀಡಿದ್ದ ಬ್ರಿಜೇಶ್ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಪ್ರಸಕ್ತ ರಣಜಿ ಋತುವಿನ ಕ್ವಾರ್ಟರ್ಫೈನಲ್ ಪಂದ್ಯವು ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ಕರ್ನಾಟಕ ಇರುವುದಿಲ್ಲ! ತಟಸ್ಥ ಸ್ಥಳದಲ್ಲಿ ಎಂಟರ ಘಟ್ಟದ ಪಂದ್ಯಗಳು ನಡೆಯಬೇಕು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನಿ ಸಿರುವುದರಿಂದ ಗಂಗೋತ್ರಿಯಲ್ಲಿ ಬೇರೆ ರಾಜ್ಯಗಳ ನಡುವಿನ ಎಂಟರ ಘಟ್ಟದ ಪಂದ್ಯ ನಡೆಯಲಿದೆ.<br /> <br /> ‘ಕಳೆದ ಕೆಲವು ಟೂರ್ನಿಗಳಲ್ಲಿ ಎಂಟರ ಘಟ್ಟದ ಹಂತದಲ್ಲಿ ಪಿಚ್ಗಳ ಸಮಸ್ಯೆಯಾಗಿದ್ದು ಮತ್ತು ಈ ಬಾರಿಯ ಲೀಗ್ನಲ್ಲಿಯೂ ಕೆಲವೆಡೆ ಪಿಚ್ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಬಿಸಿಸಿಐ ಈ ಕ್ರಮ ಕೈಗೊಂಡಿದೆ. ಲೀಗ್ ಹಂತದ ಪಂದ್ಯಗಳು ಸಮಾಪ್ತಿಯಾದ ನಂತರ ಎಂಟರ ಘಟ್ಟದ ಪಂದ್ಯಗಳು ನಿರ್ಧಾರ ಗೊಳ್ಳಲಿವೆ. ಕರ್ನಾಟಕ ತಂಡವು ಎಂಟರ ಘಟ್ಟ ಪ್ರವೇಶಿಸಿದರೆ, ಬೇರೆ ರಾಜ್ಯದಲ್ಲಿ ಆಡಬೇಕಾಗುತ್ತದೆ.</p>.<p>ಇದರಿಂದ ನಮ್ಮ ಸ್ಥಳೀಯ ಉದಯೋನ್ಮುಖ ಆಟಗಾರರಿಗೆ ಯಾವುದೇ ಪ್ರಯೋಜನವಿಲ್ಲ. ನಮ್ಮ ತವರಿನ ತಂಡಗಳು ಆಡಿದಾಗ ಮಾತ್ರ ಆಸಕ್ತರು, ಅಭಿಮಾನಿಗಳು ಬಂದು ನೋಡುತ್ತಾರೆ. ಇದರಿಂದ ಬೆಳೆಯುವ ಹುಡುಗರಿಗೆ ಅನುಕೂಲವಾಗುತ್ತದೆ. ಕೆಲವು ವರ್ಷಗಳ ಹಿಂದೆಯೂ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ನಡೆಸಲಾಗಿತ್ತು. ನಂತರ ಆ ಪದ್ಧತಿಯನ್ನು ರದ್ದುಗೊಳಿಸಲಾಗಿತ್ತು’ ಎಂದು ಇಲ್ಲಿಗೆ ಭೇಟಿ ನೀಡಿದ್ದ ಬ್ರಿಜೇಶ್ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>