<p><strong>ಮುಂಬೈ (ಪಿಟಿಐ): </strong>ಕ್ರಿಕೆಟ್ ಜಗತ್ತಿನ ಯಶಸ್ವಿ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಅವರು ಮುಂದಿನ ದಿನಗಳಲ್ಲಿ ಭಾರತ ತಂಡದ ಕೋಚ್ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.<br /> <br /> `ಮುಂದಿನ ದಿನಗಳಲ್ಲಿ ಕೋಚ್ ಆಗಬಹುದು ಯಾರಿಗ್ಗೊತ್ತು?~ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. <br /> <br /> ಐಪಿಎಲ್ ಐದನೇ ಅವತರಣಿಕೆಯಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದ ರಾಹುಲ್ ಕೋಚ್ ಆಗಿ ಕೂಡ ಕಾರ್ಯನಿರ್ವಹಿಸಿದ್ದರು. `ನಾನು ಯಾವುದೇ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಜೊತೆಗೆ 1, 2, 3 ಮಟ್ಟದ ಕೋಚಿಂಗ್ ಅರ್ಹತೆಯನ್ನೂ ನಾನು ಹೊಂದಿಲ್ಲ~ ಎಂದಿದ್ದಾರೆ.<br /> <br /> 16 ವರ್ಷಗಳ ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವು ಬಾರಿ ತುಂಬಾ ಸಿಟ್ಟಾಗಿದ್ದೂ ಇದೆ ಎಂದು ಬೆಂಗಳೂರಿನ ಬ್ಯಾಟ್ಸ್ಮನ್ ಹೇಳಿದ್ದಾರೆ. `ಡ್ರೆಸ್ಸಿಂಗ್ ಕೊಠಡಿಯಲ್ಲಿ ಹಲವು ಬಾರಿ ತಾಳ್ಮೆ ಕಳೆದುಕೊಂಡಿದ್ದೆ. ಸಿಟ್ಟಿನಿಂದ ಬ್ಯಾಟ್ ಎಸೆದಿದ್ದೆ. ಈ ರೀತಿ ನನ್ನ ಕ್ರಿಕೆಟ್ ಜೀವನದದಲ್ಲಿ ಒಂದೆರಡು ಬಾರಿ ಆಗಿರಬಹುದು ಅಷ್ಟೆ. ಬ್ಯಾಟಿಂಗ್ ವೇಳೆ ಕೆಟ್ಟ ಹೊಡೆತಕ್ಕೆ ಮುಂದಾಗಿ ಔಟ್ ಆದರೆ ಈ ರೀತಿ ಆಗುತಿತ್ತು. ಆದರೆ ನನಗೆ ಸಿಟ್ಟು ಬರುವುದು ತುಂಬಾ ಕಡಿಮೆ~ ಎಂದು ಮಾಜಿ ನಾಯಕ ರಾಹುಲ್ ವಿವರಿಸಿದ್ದಾರೆ.<br /> <br /> ಇಷ್ಟು ವರ್ಷ ಆಡಿಯೂ ಡಿವಿಷನ್ ಲೀಗ್ ಕ್ರಿಕೆಟ್ನಲ್ಲಿ ಮತ್ತೆ ಪಾಲ್ಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಜಿ.ಆರ್.ವಿಶ್ವನಾಥ್ ಹಾಗೂ ಸುಧಾಕರ್ ರಾವ್ ಅವರು ನಿವೃತ್ತರಾದ ಬಳಿಕವೂ ಆಡುತ್ತಿದ್ದರು. ನನ್ನ ಕ್ರಿಕೆಟ್ನ ಆರಂಭದ ದಿನಗಳಲ್ಲಿ ಅವರೊಂದಿಗೆ ಲೀಗ್ನಲ್ಲಿ ಆಡಿದ್ದೆ. ಈಗ ಮತ್ತೆ ಆಡಲು ಖುಷಿಯಾಗುತ್ತಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ): </strong>ಕ್ರಿಕೆಟ್ ಜಗತ್ತಿನ ಯಶಸ್ವಿ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಅವರು ಮುಂದಿನ ದಿನಗಳಲ್ಲಿ ಭಾರತ ತಂಡದ ಕೋಚ್ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.<br /> <br /> `ಮುಂದಿನ ದಿನಗಳಲ್ಲಿ ಕೋಚ್ ಆಗಬಹುದು ಯಾರಿಗ್ಗೊತ್ತು?~ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. <br /> <br /> ಐಪಿಎಲ್ ಐದನೇ ಅವತರಣಿಕೆಯಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದ ರಾಹುಲ್ ಕೋಚ್ ಆಗಿ ಕೂಡ ಕಾರ್ಯನಿರ್ವಹಿಸಿದ್ದರು. `ನಾನು ಯಾವುದೇ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಜೊತೆಗೆ 1, 2, 3 ಮಟ್ಟದ ಕೋಚಿಂಗ್ ಅರ್ಹತೆಯನ್ನೂ ನಾನು ಹೊಂದಿಲ್ಲ~ ಎಂದಿದ್ದಾರೆ.<br /> <br /> 16 ವರ್ಷಗಳ ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವು ಬಾರಿ ತುಂಬಾ ಸಿಟ್ಟಾಗಿದ್ದೂ ಇದೆ ಎಂದು ಬೆಂಗಳೂರಿನ ಬ್ಯಾಟ್ಸ್ಮನ್ ಹೇಳಿದ್ದಾರೆ. `ಡ್ರೆಸ್ಸಿಂಗ್ ಕೊಠಡಿಯಲ್ಲಿ ಹಲವು ಬಾರಿ ತಾಳ್ಮೆ ಕಳೆದುಕೊಂಡಿದ್ದೆ. ಸಿಟ್ಟಿನಿಂದ ಬ್ಯಾಟ್ ಎಸೆದಿದ್ದೆ. ಈ ರೀತಿ ನನ್ನ ಕ್ರಿಕೆಟ್ ಜೀವನದದಲ್ಲಿ ಒಂದೆರಡು ಬಾರಿ ಆಗಿರಬಹುದು ಅಷ್ಟೆ. ಬ್ಯಾಟಿಂಗ್ ವೇಳೆ ಕೆಟ್ಟ ಹೊಡೆತಕ್ಕೆ ಮುಂದಾಗಿ ಔಟ್ ಆದರೆ ಈ ರೀತಿ ಆಗುತಿತ್ತು. ಆದರೆ ನನಗೆ ಸಿಟ್ಟು ಬರುವುದು ತುಂಬಾ ಕಡಿಮೆ~ ಎಂದು ಮಾಜಿ ನಾಯಕ ರಾಹುಲ್ ವಿವರಿಸಿದ್ದಾರೆ.<br /> <br /> ಇಷ್ಟು ವರ್ಷ ಆಡಿಯೂ ಡಿವಿಷನ್ ಲೀಗ್ ಕ್ರಿಕೆಟ್ನಲ್ಲಿ ಮತ್ತೆ ಪಾಲ್ಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಜಿ.ಆರ್.ವಿಶ್ವನಾಥ್ ಹಾಗೂ ಸುಧಾಕರ್ ರಾವ್ ಅವರು ನಿವೃತ್ತರಾದ ಬಳಿಕವೂ ಆಡುತ್ತಿದ್ದರು. ನನ್ನ ಕ್ರಿಕೆಟ್ನ ಆರಂಭದ ದಿನಗಳಲ್ಲಿ ಅವರೊಂದಿಗೆ ಲೀಗ್ನಲ್ಲಿ ಆಡಿದ್ದೆ. ಈಗ ಮತ್ತೆ ಆಡಲು ಖುಷಿಯಾಗುತ್ತಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>