<p><strong>ನವದೆಹಲಿ (ಪಿಟಿಐ):</strong> ಐಪಿಎಲ್ನಲ್ಲಿ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಹಾಗೂ ರಾಜಸ್ತಾನ ರಾಯಲ್ಸ್ (ಆರ್ಆರ್) ತಂಡಗಳನ್ನು ಅಮಾನತುಗೊಳಿಸುವಂತೆ ಬಿಸಿಸಿಐ `ಹಂಗಾಮಿ ಅಧ್ಯಕ್ಷ' ಜಗಮೋಹನ್ ದಾಲ್ಮಿಯ ಅವರಿಗೆ ಪತ್ರ ಬರೆದಿದ್ದೆ ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಐ.ಎಸ್.ಬಿಂದ್ರಾ ನುಡಿದಿದ್ದಾರೆ.<br /> <br /> `ಈ ಪತ್ರವನ್ನು ನಾನು ಸೋಮವಾರ ನಡೆದ ಕಾರ್ಯಕಾರಿ ಸಮಿತಿ ಸಭೆಗೂ ಮುನ್ನವೇ ಬರೆದಿದ್ದೆ. ಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದೆ. ಆದರೆ ಈ ತಂಡಗಳ ತನಿಖೆ ನಡೆಸಲಾಗುವುದು ಎಂದು ಮಾತ್ರ ದಾಲ್ಮಿಯ ಹೇಳಿದರು' ಎಂದು ಅವರು ಹೇಳಿದ್ದಾರೆ.<br /> <br /> ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿರುವ ದೋನಿ ಅವರ ಬಗ್ಗೆ ಪ್ರತಿಕ್ರಿಯಿಸಿದ ಬಿಂದ್ರಾ, `ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿಲ್ಲ' ಎಂದು ಸ್ಪಷ್ಟಪಡಿಸಿದರು. ಈ ವಿಷಯದ ಬಗ್ಗೆ ಮಂಡಳಿಯು ದೋನಿಗೆ ಪತ್ರ ಬರೆಯಲಿದೆ ಎಂದಿರುವ ನೂತನ ಖಜಾಂಚಿ ರವಿ ಸಾವಂತ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, `ಈ ಬಗ್ಗೆ ಮಾತನಾಡಲು ಸಾವಂತ್ಗೆ ಏನು ಅಧಿಕಾರವಿದೆ? ನೋಟಿಸ್ ವಿಷಯದಲ್ಲಿ ಖಜಾಂಚಿ ಪ್ರತಿಕ್ರಿಯೆ ನೀಡುವಂತಿಲ್ಲ. ಅದೊಂದು ಮೂರ್ಖತನದ ಹೇಳಿಕೆ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಐಪಿಎಲ್ನಲ್ಲಿ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಹಾಗೂ ರಾಜಸ್ತಾನ ರಾಯಲ್ಸ್ (ಆರ್ಆರ್) ತಂಡಗಳನ್ನು ಅಮಾನತುಗೊಳಿಸುವಂತೆ ಬಿಸಿಸಿಐ `ಹಂಗಾಮಿ ಅಧ್ಯಕ್ಷ' ಜಗಮೋಹನ್ ದಾಲ್ಮಿಯ ಅವರಿಗೆ ಪತ್ರ ಬರೆದಿದ್ದೆ ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಐ.ಎಸ್.ಬಿಂದ್ರಾ ನುಡಿದಿದ್ದಾರೆ.<br /> <br /> `ಈ ಪತ್ರವನ್ನು ನಾನು ಸೋಮವಾರ ನಡೆದ ಕಾರ್ಯಕಾರಿ ಸಮಿತಿ ಸಭೆಗೂ ಮುನ್ನವೇ ಬರೆದಿದ್ದೆ. ಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದೆ. ಆದರೆ ಈ ತಂಡಗಳ ತನಿಖೆ ನಡೆಸಲಾಗುವುದು ಎಂದು ಮಾತ್ರ ದಾಲ್ಮಿಯ ಹೇಳಿದರು' ಎಂದು ಅವರು ಹೇಳಿದ್ದಾರೆ.<br /> <br /> ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿರುವ ದೋನಿ ಅವರ ಬಗ್ಗೆ ಪ್ರತಿಕ್ರಿಯಿಸಿದ ಬಿಂದ್ರಾ, `ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿಲ್ಲ' ಎಂದು ಸ್ಪಷ್ಟಪಡಿಸಿದರು. ಈ ವಿಷಯದ ಬಗ್ಗೆ ಮಂಡಳಿಯು ದೋನಿಗೆ ಪತ್ರ ಬರೆಯಲಿದೆ ಎಂದಿರುವ ನೂತನ ಖಜಾಂಚಿ ರವಿ ಸಾವಂತ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, `ಈ ಬಗ್ಗೆ ಮಾತನಾಡಲು ಸಾವಂತ್ಗೆ ಏನು ಅಧಿಕಾರವಿದೆ? ನೋಟಿಸ್ ವಿಷಯದಲ್ಲಿ ಖಜಾಂಚಿ ಪ್ರತಿಕ್ರಿಯೆ ನೀಡುವಂತಿಲ್ಲ. ಅದೊಂದು ಮೂರ್ಖತನದ ಹೇಳಿಕೆ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>