<p><strong>ಬಾಗಲಕೋಟೆ</strong>: ಜಿಲ್ಲೆಯಲ್ಲಿ ಗ್ರಾಮೀಣರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿರಾಮದ ಕಟ್ಟೆ, ಜಗುಲಿ, ದೇವಸ್ಥಾನದ ಹೊರಗಿನ ಕಟ್ಟೆಗಳಿಗೆ ಕೀಲೆಣ್ಣೆ (ಬಂಡಿ ಆಯಿಲ್) ಸುರಿಯುವ ಕಾರ್ಯ ನಡೆದಿದೆ.</p>.<p>ಹಿಂದೆಲ್ಲಾ ಈ ಕಟ್ಟೆಗಳು ನ್ಯಾಯ ಪಂಚಾಯ್ತಿಗಳಿಗೆ ವೇದಿಕೆಯಾಗಿದ್ದವು. ಈಗ ಗ್ರಾಮೀಣರು ಹೊಲ–ಮನೆಯ ಕೆಲಸ ಮುಗಿದ ನಂತರ ಬಹುತೇಕ ಈ ಕಟ್ಟೆಗಳ ಮೇಲೆ ದಿನ ಕಳೆಯುತ್ತಾರೆ. ಅಲ್ಲಿಯೇ ಕುಳಿತು ಕಷ್ಟ–ಸುಖ ಮಾತನಾಡುತ್ತಾರೆ. ಜೊತೆಗೆ ಊರ ಸಂಗತಿಗಳೂ ಅಲ್ಲಿಯೆ ಚರ್ಚೆಗೆ ಬರುತ್ತವೆ.</p>.<p>ಮಾತು ಸಾಕಾದರೆ ಹೊತ್ತು ಕಳೆಯಲು ಅಲ್ಲಿಯೇ ಕುಳಿತು ಚೌಕಾಬಾರ, ಹಾವು–ಏಣಿ, ಕವಡೆ ಆಡುತ್ತಾರೆ. ಇನ್ನೂ ಕೆಲವರಿಗೆ ಅವು ಇಸ್ಪೀಟ್ ಅಡ್ಡೆ. ಕೆಲವರು ಮಧ್ಯಾಹ್ನದ ಉರಿ ಬಿಸಿಲಿನ ನಡುವೆ ಸಣ್ಣದೊಂದು ನಿದ್ರೆ ತೆಗೆಯಲು ಇವೇ ಕಟ್ಟೆಗಳಲ್ಲಿ ಪವಡಿಸುತ್ತಾರೆ. ಊರಿನ ಎಲ್ಲ ಸಂಪರ್ಕ ರಸ್ತೆಗಳು ಈ ಕಟ್ಟೆಯ ಮೇಲೆ ಹಾಯ್ದು ಹೋಗುವುದರಿಂದ ಬಸ್ ನಿಲ್ದಾಣವಾಗಿಯೂ ಈ ಕಟ್ಟೆಗಳು ಬಳಕೆಯಾಗುತ್ತವೆ.</p>.<p>ಗ್ರಾಮೀಣರ ಈ ಸಂಪರ್ಕ ಕೇಂದ್ರ ಕೊರೊನಾ ವೈರಸ್ ಹರಡಲು ವೇದಿಕೆ ಆಗಬಾರದು ಎಂಬ ಕಾರಣಕ್ಕೆ ಜಿಲ್ಲಾ ಪಂಚಾಯ್ತಿ ಆಡಳಿತ ಅದನ್ನು ತಪ್ಪಿಸಲು ಮುಂದಾಗಿದೆ. ಕೀಲೆಣ್ಣೆ ಸುರಿದರೆ ಯಾರೂ ಅಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ ಎಂಬುದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಅವರ ಲೆಕ್ಕಾಚಾರ.</p>.<p class="Subhead"><strong>ಟಾಸ್ಕ್ಫೋರ್ಸ್ಗೆ ಹೊಣೆ</strong></p>.<p>ಆಯಾ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪಿಡಿಒ ಒಳಗೊಂಡ ಟಾಸ್ಕ್ಫೋರ್ಸ್ ರಚಿಸಲಾಗಿದೆ. ಕಟ್ಟೆಗಳಿಗೆ ಕೀಲೆಣ್ಣೆ ಸುರಿಯುವ ಹೊಣೆ ಈ ಸಮಿತಿಗೆ ವಹಿಸಲಾಗಿದೆ.</p>.<p>ಅಗತ್ಯ ವಸ್ತುಗಳನ್ನು ಖರೀದಿಸುವಾಗಲೂ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಈ ಟಾಸ್ಕ್ಫೋರ್ಸ್ ಗ್ರಾಮೀಣರಲ್ಲಿ ಜಾಗೃತಿ ಮೂಡಿಸುತ್ತಿದೆ. ಅದರೊಂದಿಗೆ ಊರಿನ ಪ್ರತಿ ದಿನಸಿ ಅಂಗಡಿಗಳ ಮುಂದೆ ತಲಾ ಮೂರು ಅಡಿ ಅಂತರದಲ್ಲಿ ಗುರುತು ಹಾಕುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಜಿಲ್ಲೆಯಲ್ಲಿ ಗ್ರಾಮೀಣರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿರಾಮದ ಕಟ್ಟೆ, ಜಗುಲಿ, ದೇವಸ್ಥಾನದ ಹೊರಗಿನ ಕಟ್ಟೆಗಳಿಗೆ ಕೀಲೆಣ್ಣೆ (ಬಂಡಿ ಆಯಿಲ್) ಸುರಿಯುವ ಕಾರ್ಯ ನಡೆದಿದೆ.</p>.<p>ಹಿಂದೆಲ್ಲಾ ಈ ಕಟ್ಟೆಗಳು ನ್ಯಾಯ ಪಂಚಾಯ್ತಿಗಳಿಗೆ ವೇದಿಕೆಯಾಗಿದ್ದವು. ಈಗ ಗ್ರಾಮೀಣರು ಹೊಲ–ಮನೆಯ ಕೆಲಸ ಮುಗಿದ ನಂತರ ಬಹುತೇಕ ಈ ಕಟ್ಟೆಗಳ ಮೇಲೆ ದಿನ ಕಳೆಯುತ್ತಾರೆ. ಅಲ್ಲಿಯೇ ಕುಳಿತು ಕಷ್ಟ–ಸುಖ ಮಾತನಾಡುತ್ತಾರೆ. ಜೊತೆಗೆ ಊರ ಸಂಗತಿಗಳೂ ಅಲ್ಲಿಯೆ ಚರ್ಚೆಗೆ ಬರುತ್ತವೆ.</p>.<p>ಮಾತು ಸಾಕಾದರೆ ಹೊತ್ತು ಕಳೆಯಲು ಅಲ್ಲಿಯೇ ಕುಳಿತು ಚೌಕಾಬಾರ, ಹಾವು–ಏಣಿ, ಕವಡೆ ಆಡುತ್ತಾರೆ. ಇನ್ನೂ ಕೆಲವರಿಗೆ ಅವು ಇಸ್ಪೀಟ್ ಅಡ್ಡೆ. ಕೆಲವರು ಮಧ್ಯಾಹ್ನದ ಉರಿ ಬಿಸಿಲಿನ ನಡುವೆ ಸಣ್ಣದೊಂದು ನಿದ್ರೆ ತೆಗೆಯಲು ಇವೇ ಕಟ್ಟೆಗಳಲ್ಲಿ ಪವಡಿಸುತ್ತಾರೆ. ಊರಿನ ಎಲ್ಲ ಸಂಪರ್ಕ ರಸ್ತೆಗಳು ಈ ಕಟ್ಟೆಯ ಮೇಲೆ ಹಾಯ್ದು ಹೋಗುವುದರಿಂದ ಬಸ್ ನಿಲ್ದಾಣವಾಗಿಯೂ ಈ ಕಟ್ಟೆಗಳು ಬಳಕೆಯಾಗುತ್ತವೆ.</p>.<p>ಗ್ರಾಮೀಣರ ಈ ಸಂಪರ್ಕ ಕೇಂದ್ರ ಕೊರೊನಾ ವೈರಸ್ ಹರಡಲು ವೇದಿಕೆ ಆಗಬಾರದು ಎಂಬ ಕಾರಣಕ್ಕೆ ಜಿಲ್ಲಾ ಪಂಚಾಯ್ತಿ ಆಡಳಿತ ಅದನ್ನು ತಪ್ಪಿಸಲು ಮುಂದಾಗಿದೆ. ಕೀಲೆಣ್ಣೆ ಸುರಿದರೆ ಯಾರೂ ಅಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ ಎಂಬುದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಅವರ ಲೆಕ್ಕಾಚಾರ.</p>.<p class="Subhead"><strong>ಟಾಸ್ಕ್ಫೋರ್ಸ್ಗೆ ಹೊಣೆ</strong></p>.<p>ಆಯಾ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪಿಡಿಒ ಒಳಗೊಂಡ ಟಾಸ್ಕ್ಫೋರ್ಸ್ ರಚಿಸಲಾಗಿದೆ. ಕಟ್ಟೆಗಳಿಗೆ ಕೀಲೆಣ್ಣೆ ಸುರಿಯುವ ಹೊಣೆ ಈ ಸಮಿತಿಗೆ ವಹಿಸಲಾಗಿದೆ.</p>.<p>ಅಗತ್ಯ ವಸ್ತುಗಳನ್ನು ಖರೀದಿಸುವಾಗಲೂ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಈ ಟಾಸ್ಕ್ಫೋರ್ಸ್ ಗ್ರಾಮೀಣರಲ್ಲಿ ಜಾಗೃತಿ ಮೂಡಿಸುತ್ತಿದೆ. ಅದರೊಂದಿಗೆ ಊರಿನ ಪ್ರತಿ ದಿನಸಿ ಅಂಗಡಿಗಳ ಮುಂದೆ ತಲಾ ಮೂರು ಅಡಿ ಅಂತರದಲ್ಲಿ ಗುರುತು ಹಾಕುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>