ನರಸೀಪುರದ ಆತ್ಮಾರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಲಾಯಿತು. ರಾಮನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿನ ರೈತರು ಕೈಗೊಂಡಿರುವ ಸಾವಯವ ಕೃಷಿ, ಸಮಗ್ರ ಕೃಷಿಗಳ ಜೊತೆಗೆ ಸ್ವ ಉದ್ಯೋಗ ಆಧಾರಿತ ನಾಟಿ ಕೋಳಿ ಸಾಕಾಣಿಕೆ, ಅಣಬೆ ಬೆಳೆಗಳ ಕುರಿತು ಪ್ರವಾಸದಲ್ಲಿ ಮಾಹಿತಿ ಒದಗಿಸಲಾಗುತ್ತದೆ. ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿರುವ ಈ ಭಾಗದ ರೈತರಿಗೆ, ಕೃಷಿ ಹಾಗೂ ಪೂರಕ ಉಪಕಸುಬುಗಳ ಪರಿಚಯ ನಡೆಯಲಿದೆ.