ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಮೂಲ್‌ನಲ್ಲಿ ಕಾಂಗ್ರೆಸ್‌ ಮೇಲುಗೈ

Last Updated 12 ಮೇ 2019, 18:58 IST
ಅಕ್ಷರ ಗಾತ್ರ

ಬೆಂಗಳೂರು:ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ (ಬಮೂಲ್‌) ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 7 ಮಂದಿ ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್‌ ಬೆಂಬಲಿತ ತಲಾ ಮೂವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಗೆದ್ದಿರುವ 13 ಮಂದಿಯ ಪೈಕಿ ಕೆಎಂಎಫ್ ಹಾಲಿ ಅಧ್ಯಕ್ಷ ಪಿ. ನಾಗರಾಜ್ ಸೇರಿ 6 ಮಂದಿ ಹಾಲಿ ನಿರ್ದೇಶಕರು ಪುನರ್ ಆಯ್ಕೆಯಾಗಿದ್ದಾರೆ. ಆನೇಕಲ್ ಮತ್ತು ಕನಕಪುರ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದ್ದರೆ, ಉಳಿದ 11 ಕ್ಷೇತ್ರಗಳಿಗೆ ಚುನಾವಣೆ ನಡೆಯಿತು.

ವಿಜೇತರು:
ಕೇಶವಮೂರ್ತಿ (ಬೆಂಗಳೂರು ಉತ್ತರ), ಎಂ. ಮಂಜುನಾಥ್‌(ಬೆಂಗಳೂರು ಪೂರ್ವ), ಎಚ್.ಎಸ್. ಹರೀಶ್‌ ಕುಮಾರ್‌(ಬೆಂಗಳೂರು ದಕ್ಷಿಣ), ಬಿ.ಜಿ. ಆಂಜಿನಪ್ಪ(ಆನೇಕಲ್), ಎಚ್‌.ಸಿ. ಜಯಮುತ್ತು (ಚನ್ನಪಟ್ಟಣ), ನರಸಿಂಹಮೂರ್ತಿ (ಮಾಗಡಿ), ಎಚ್‌.ಪಿ. ರಾಜಕುಮಾರ (ಕನಕಪುರ), ಪಿ. ನಾಗರಾಜ್ (ರಾಮನಗರ), ಸಿ. ಮಂಜುನಾಥ್‌ (ಹೊಸಕೋಟೆ), ಬಿ. ಶ್ರೀನಿವಾಸ್‌ (ದೇವನಹಳ್ಳಿ), ಜಿ.ಆರ್. ಭಾಸ್ಕರ್ (ನೆಲಮಂಗಲ), ಆನಂದಕುಮಾರ್‌ (ದೊಡ್ಡಬಳ್ಳಾಪುರ), ರಾಜಣ್ಣ (ಕುದೂರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT