ಈ ಕುರಿತು ಮಾಹಿತಿ ನೀಡಿದ ಬಾಂಧವ ತಂಡದ ಮುಖ್ಯಸ್ಥ, ಪಾಲಿಕೆ ಸದಸ್ಯ ಎನ್. ನಾಗರಾಜು, ‘ಕೊರೊನಾ ವೈರಾಣುವಿನಿಂದ ಇಡೀ ಭಾರತ ಬಂದ್ ಆಗಿದ್ದು ಜಯನಗರದ ಬೈರಸಂದ್ರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸುಮಾರು 30 ರಿಂದ 40 ದಿನ ಉಚಿತ ಊಟ ವಿತರಣೆ ಮಾಡಲಾಗುವುದು. ಅತ್ಯಂತ ರುಚಿ, ಶುಚಿಯಾದ ಆಹಾರವನ್ನು ಕಂಟೈನರ್ ಮೂಲಕ ಪೂರೈಸಲಾಗುವುದು. ದಿನನಿತ್ಯ ಒಂದೊಂದು ಬಗೆಯ ಆಹಾರ ವಿತರಿಸಲು ತೀರ್ಮಾನಿಸಲಾಗಿದೆ’ ಎಂದರು.