ಶಿರಗನಹಳ್ಳಿ, ನಿಡವಂದ, ಮಾದೇನಹಳ್ಳಿ, ಲಕ್ಕೂರು ತೋಟ, ಹೊನ್ನೇನಹಳ್ಳಿ, ತಟ್ಟೇಕೆರೆ ಗ್ರಾಮಗಳಲ್ಲಿನ ಬಸವಣ್ಣ ದೇವಾಲಯಗಳನ್ನು ತಳಿರು ತೋರಣ, ಹೂಗಳಿಂದ ಸಿಂಗರಿಸಲಾಗಿತ್ತು. ವಿಶೇಷ ಪೂಜೆ ನಡೆಸಿ, ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಗ್ರಾಮಗಳ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಹಸಿರು ಚಪ್ಪರ ಹಾಕಿ, ರಾಸುಗಳಿಗೆ ಪೂಜೆ ಮಾಡಿ ಹೆಸರುಬೇಳೆ, ಪಾನಕ, ಮಜ್ಜಿಗೆ ವಿತರಿಸಿದರು.