<p><strong>ಬೆಂಗಳೂರು:</strong> ಪಂಚತಾರಾ ಲಲಿತ್ ಅಶೋಕ್ ಹೊಟೇಲ್ ಆವರಣದಲ್ಲಿ ನಡೆದ ಎರಡು ದಿನಗಳ ಬೆಂಗಳೂರು ಸಾಹಿತ್ಯೋತ್ಸವಕ್ಕೆ ಮಕ್ಕಳು ರಂಗು ಹೆಚ್ಚಿಸಿದರು. ಅವರಿಗಾಗಿಯೇ ವಿಶೇಷವಾಗಿ ಆಯೋಜಿಸಿದ್ದ ಗೋಷ್ಠಿಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.</p>.<p>ಪತ್ರಕರ್ತರಾದ ಬರ್ಖಾ ದತ್, ನಾಗೇಶ್ ಹೆಗಡೆ ಸೇರಿದಂತೆ ಸಾಹಿತಿಗಳು, ತಜ್ಞರೊಂದಿಗೆ ಬೆರೆತ ಮಕ್ಕಳು ತಮಗೆ ತೋಚಿದಂತೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.</p>.<p>‘ಇದು ಯಾಕೆ ಹೀಗೆ, ಇದು ಎಲ್ಲಿಂದ ಬಂದಿದೆ. ನಾವು ಈಗ ಏನು ಮಾಡಬೇಕು’ ಹೀಗೆ ಪೂರ್ತಿ ವಿಷಯ ಅರ್ಥವಾಗುವವರೆಗೂ ಪಟ್ಟು ಬಿಡದೆ ಹಿರಿಯರನ್ನು ಕಾಡಿದರು. ಉತ್ತರ ಹೇಳಿ ಸಮಾಧಾನಪಡಿಸುವಲ್ಲಿ ತಜ್ಞರು ತಿಣುಕಾಡಬೇಕಾಯಿತು.</p>.<p class="Subhead"><strong>ಜನಜಂಗುಳಿ:</strong> ಭಾನುವಾರ ಸಾಹಿತ್ಯಾಸಕ್ತರ ಸಂಖ್ಯೆ ತುಸು ಹೆಚ್ಚಿತ್ತು. ಬೇರೆ ಬೇರೆ ರಾಜ್ಯಗಳಿಂದ ಬಂದವರು ಸಾಕಷ್ಟಿದ್ದರು. ಪ್ರತಿಯೊಂದು ಗೋಷ್ಠಿಯಲ್ಲಿಯೂ ಕೂತಿರುವವರಿಗಿಂತ ನಿಂತುಕೊಂಡು ಮಾತುಗಳನ್ನು ಕೇಳುವವರು ಹೆಚ್ಚಿದ್ದರು. ಬಿರು ಬಿಸಿಲಿನಲ್ಲಿ ತಂಪನೆ ಬಿಯರ್ ಹೀರುತ್ತಾ, ಚಿಕನ್ ತಿನ್ನುತ್ತಾ ಗೋಷ್ಠಿಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.</p>.<p>ಪ್ರತಿ ಗೋಷ್ಠಿ ಮುಗಿದ ಮೇಲೂ ಸಂಪನ್ಮೂಲ ವ್ಯಕ್ತಿಗಳು ತಮ್ಮ ಪುಸ್ತಕಕ್ಕೆ ಸಹಿ ಹಾಕಿ ಕೊಡುತ್ತಿದ್ದರು. ಪುಸ್ತಕ ಪ್ರಿಯರು ಸಹಿಗಾಗಿ ಅಲ್ಲಿ ಜಮಾಯಿಸುತ್ತಿದ್ದರು. ಪುಸ್ತಕ ಮಳಿಗೆ ಕೂಡ ಯಾವಾಗಲೂ ತುಂಬಿಕೊಂಡಿತ್ತು. ಮಕ್ಕಳೂ ಪೈಪೋಟಿಯಲ್ಲಿ ಪುಸ್ತಕಗಳನ್ನು ಖರೀದಿಸಿದರು.</p>.<p>ಗೋಷ್ಠಿಗಳು ನಡೆಯುವ ಐದು ಪ್ರಮುಖ ವೇದಿಕೆಗಳಿಗೆ ಈ ಬಾರಿ ಭಿನ್ನವಾದ ಹೆಸರುಗಳನ್ನಿಡಲಾಗಿತ್ತು. ‘ಅಡ್ಜಸ್ಟ್ ಮಾಡಿ, ನಾಳೆ ಬಾ, ರೆಡ್ ಕೌಚ್, ಮಾಲ್ಗುಡಿ, ನರ್ನಿಯಾ’ ಎನ್ನುವ ಹೆಸರುಗಳು ಜನರ ಬಾಯಿಯಲ್ಲಿ ವಿಭಿನ್ನವಾಗಿ ಕೇಳಿಸುತ್ತಿತ್ತು. ‘ಅಡ್ಜಸ್ಟ್ ಮಾಡಿಕೊಂಡು ಹೋಗೋಣ ಬಾ’ ಎಂದು ವ್ಯಕ್ತಿಯೊಬ್ಬರು ತಮ್ಮ ಪತ್ನಿಯನ್ನು ಕೈ ಹಿಡಿದುಕೊಂಡು ಹೋದರು.</p>.<p class="Subhead">ರೇಖಾ ಚಿತ್ರಗಳು: ಪ್ರಮುಖ ಎಲ್ಲ ವೇದಿಕೆಗಳಲ್ಲಿ ನಗರದ ವಿವಿಧ ಪ್ರದೇಶಗಳ ಕಟ್ಟಡಗಳನ್ನು ಬಿಂಬಿಸುವ ರೇಖಾಚಿತ್ರಗಳ ಡಿಜಿಟಲ್ ಪರದೆ ಅಳವಡಿಸಲಾಗಿತ್ತು. ಈ ಹಿಂದಿನ ವರ್ಷಗಳಲ್ಲಿ ವಿವಿಧ ಕಾರ್ಪೊರೇಟ್ ಕಂಪನಿಗಳ ಹೋರ್ಡಿಂಗ್ ಅಳವಡಿಸುತ್ತಿದುದು ಟೀಕೆಗೆ ಕಾರಣವಾಗಿತ್ತು. ಒಟ್ಟು 97 ಸಂವಾದ ಮತ್ತು ಇತರ ಚಟುವಟಿಕೆಗಳು ಈ ಎರಡು ದಿನಗಳಲ್ಲಿ ನಡೆದವು.</p>.<p><strong>ಗೋಷ್ಠಿಯಲ್ಲಿ ಪರಿಸರದ ಜಾಗೃತಿ</strong></p>.<p>ಕಟ್ಟಡಗಳನ್ನು ಕಟ್ಟುತ್ತಾ ನಾಗರೀಕತೆಯ ಕಡೆಗೆ ಜಾರುವ ಮನುಷ್ಯ ಕೊನೆಗೆ ತಾನು ಸೃಷ್ಟಿಸಿದ ಕಸದ ರಾಶಿಯಿಂದಲೇ ಹೊರಬರಲು ಒದ್ದಾಡುತ್ತಾನೆ..</p>.<p>ಇಂತಹ ಅನೇಕ ಕಥೆಗಳನ್ನು ಪತ್ರಕರ್ತ ನಾಗೇಶ್ ಹೆಗಡೆ ಅವರು ಮಕ್ಕಳಿಗಾಗಿ ಹೇಳಿದರು.</p>.<p>ನಲ್ಲಿಯನ್ನು ನಿಲ್ಲಿಸದೆ ಹೋಗುವ ತಂದೆ ತಾಯಿಗೆ ಚಿಕ್ಕಮಗು ಪಾಠ ಹೇಳುತ್ತದೆ. ತಾನೇ ಹೋಗಿ ನೀರನ್ನು ನಿಲ್ಲಿಸುತ್ತದೆ. ಈ ಚಿತ್ರವನ್ನು ನೋಡಿದ ಮಕ್ಕಳು ‘ಇದರ ಅರ್ಥ ನಾವು ನೀರನ್ನು ಉಳಿಸಬೇಕು’ ಎಂದು ಹೇಳುತ್ತಾರೆ.</p>.<p>‘ಇಂದಿನ ಕಾಲದ ಮಕ್ಕಳೇ ಪೋಷಕರಿಗೆ ಪಾಠ ಕಲಿಸುತ್ತಾರೆ. ನನ್ನ ಮೊಮ್ಮಗ ನನಗೇ ಮೊಬೈಲ್ ಫೋನ್ ಬಳಸುವುದನ್ನು ಹೇಳಿ ಕೊಡುತ್ತಾನೆ. ಅವರಿಗೆ ಈಗಿನಿಂದಲೇಪರಿಸರದಕಾಳಜಿ ಹಾಗೂ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ’ ಎಂದು ನಾಗೇಶ್ ಹೆಗಡೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪಂಚತಾರಾ ಲಲಿತ್ ಅಶೋಕ್ ಹೊಟೇಲ್ ಆವರಣದಲ್ಲಿ ನಡೆದ ಎರಡು ದಿನಗಳ ಬೆಂಗಳೂರು ಸಾಹಿತ್ಯೋತ್ಸವಕ್ಕೆ ಮಕ್ಕಳು ರಂಗು ಹೆಚ್ಚಿಸಿದರು. ಅವರಿಗಾಗಿಯೇ ವಿಶೇಷವಾಗಿ ಆಯೋಜಿಸಿದ್ದ ಗೋಷ್ಠಿಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.</p>.<p>ಪತ್ರಕರ್ತರಾದ ಬರ್ಖಾ ದತ್, ನಾಗೇಶ್ ಹೆಗಡೆ ಸೇರಿದಂತೆ ಸಾಹಿತಿಗಳು, ತಜ್ಞರೊಂದಿಗೆ ಬೆರೆತ ಮಕ್ಕಳು ತಮಗೆ ತೋಚಿದಂತೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.</p>.<p>‘ಇದು ಯಾಕೆ ಹೀಗೆ, ಇದು ಎಲ್ಲಿಂದ ಬಂದಿದೆ. ನಾವು ಈಗ ಏನು ಮಾಡಬೇಕು’ ಹೀಗೆ ಪೂರ್ತಿ ವಿಷಯ ಅರ್ಥವಾಗುವವರೆಗೂ ಪಟ್ಟು ಬಿಡದೆ ಹಿರಿಯರನ್ನು ಕಾಡಿದರು. ಉತ್ತರ ಹೇಳಿ ಸಮಾಧಾನಪಡಿಸುವಲ್ಲಿ ತಜ್ಞರು ತಿಣುಕಾಡಬೇಕಾಯಿತು.</p>.<p class="Subhead"><strong>ಜನಜಂಗುಳಿ:</strong> ಭಾನುವಾರ ಸಾಹಿತ್ಯಾಸಕ್ತರ ಸಂಖ್ಯೆ ತುಸು ಹೆಚ್ಚಿತ್ತು. ಬೇರೆ ಬೇರೆ ರಾಜ್ಯಗಳಿಂದ ಬಂದವರು ಸಾಕಷ್ಟಿದ್ದರು. ಪ್ರತಿಯೊಂದು ಗೋಷ್ಠಿಯಲ್ಲಿಯೂ ಕೂತಿರುವವರಿಗಿಂತ ನಿಂತುಕೊಂಡು ಮಾತುಗಳನ್ನು ಕೇಳುವವರು ಹೆಚ್ಚಿದ್ದರು. ಬಿರು ಬಿಸಿಲಿನಲ್ಲಿ ತಂಪನೆ ಬಿಯರ್ ಹೀರುತ್ತಾ, ಚಿಕನ್ ತಿನ್ನುತ್ತಾ ಗೋಷ್ಠಿಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.</p>.<p>ಪ್ರತಿ ಗೋಷ್ಠಿ ಮುಗಿದ ಮೇಲೂ ಸಂಪನ್ಮೂಲ ವ್ಯಕ್ತಿಗಳು ತಮ್ಮ ಪುಸ್ತಕಕ್ಕೆ ಸಹಿ ಹಾಕಿ ಕೊಡುತ್ತಿದ್ದರು. ಪುಸ್ತಕ ಪ್ರಿಯರು ಸಹಿಗಾಗಿ ಅಲ್ಲಿ ಜಮಾಯಿಸುತ್ತಿದ್ದರು. ಪುಸ್ತಕ ಮಳಿಗೆ ಕೂಡ ಯಾವಾಗಲೂ ತುಂಬಿಕೊಂಡಿತ್ತು. ಮಕ್ಕಳೂ ಪೈಪೋಟಿಯಲ್ಲಿ ಪುಸ್ತಕಗಳನ್ನು ಖರೀದಿಸಿದರು.</p>.<p>ಗೋಷ್ಠಿಗಳು ನಡೆಯುವ ಐದು ಪ್ರಮುಖ ವೇದಿಕೆಗಳಿಗೆ ಈ ಬಾರಿ ಭಿನ್ನವಾದ ಹೆಸರುಗಳನ್ನಿಡಲಾಗಿತ್ತು. ‘ಅಡ್ಜಸ್ಟ್ ಮಾಡಿ, ನಾಳೆ ಬಾ, ರೆಡ್ ಕೌಚ್, ಮಾಲ್ಗುಡಿ, ನರ್ನಿಯಾ’ ಎನ್ನುವ ಹೆಸರುಗಳು ಜನರ ಬಾಯಿಯಲ್ಲಿ ವಿಭಿನ್ನವಾಗಿ ಕೇಳಿಸುತ್ತಿತ್ತು. ‘ಅಡ್ಜಸ್ಟ್ ಮಾಡಿಕೊಂಡು ಹೋಗೋಣ ಬಾ’ ಎಂದು ವ್ಯಕ್ತಿಯೊಬ್ಬರು ತಮ್ಮ ಪತ್ನಿಯನ್ನು ಕೈ ಹಿಡಿದುಕೊಂಡು ಹೋದರು.</p>.<p class="Subhead">ರೇಖಾ ಚಿತ್ರಗಳು: ಪ್ರಮುಖ ಎಲ್ಲ ವೇದಿಕೆಗಳಲ್ಲಿ ನಗರದ ವಿವಿಧ ಪ್ರದೇಶಗಳ ಕಟ್ಟಡಗಳನ್ನು ಬಿಂಬಿಸುವ ರೇಖಾಚಿತ್ರಗಳ ಡಿಜಿಟಲ್ ಪರದೆ ಅಳವಡಿಸಲಾಗಿತ್ತು. ಈ ಹಿಂದಿನ ವರ್ಷಗಳಲ್ಲಿ ವಿವಿಧ ಕಾರ್ಪೊರೇಟ್ ಕಂಪನಿಗಳ ಹೋರ್ಡಿಂಗ್ ಅಳವಡಿಸುತ್ತಿದುದು ಟೀಕೆಗೆ ಕಾರಣವಾಗಿತ್ತು. ಒಟ್ಟು 97 ಸಂವಾದ ಮತ್ತು ಇತರ ಚಟುವಟಿಕೆಗಳು ಈ ಎರಡು ದಿನಗಳಲ್ಲಿ ನಡೆದವು.</p>.<p><strong>ಗೋಷ್ಠಿಯಲ್ಲಿ ಪರಿಸರದ ಜಾಗೃತಿ</strong></p>.<p>ಕಟ್ಟಡಗಳನ್ನು ಕಟ್ಟುತ್ತಾ ನಾಗರೀಕತೆಯ ಕಡೆಗೆ ಜಾರುವ ಮನುಷ್ಯ ಕೊನೆಗೆ ತಾನು ಸೃಷ್ಟಿಸಿದ ಕಸದ ರಾಶಿಯಿಂದಲೇ ಹೊರಬರಲು ಒದ್ದಾಡುತ್ತಾನೆ..</p>.<p>ಇಂತಹ ಅನೇಕ ಕಥೆಗಳನ್ನು ಪತ್ರಕರ್ತ ನಾಗೇಶ್ ಹೆಗಡೆ ಅವರು ಮಕ್ಕಳಿಗಾಗಿ ಹೇಳಿದರು.</p>.<p>ನಲ್ಲಿಯನ್ನು ನಿಲ್ಲಿಸದೆ ಹೋಗುವ ತಂದೆ ತಾಯಿಗೆ ಚಿಕ್ಕಮಗು ಪಾಠ ಹೇಳುತ್ತದೆ. ತಾನೇ ಹೋಗಿ ನೀರನ್ನು ನಿಲ್ಲಿಸುತ್ತದೆ. ಈ ಚಿತ್ರವನ್ನು ನೋಡಿದ ಮಕ್ಕಳು ‘ಇದರ ಅರ್ಥ ನಾವು ನೀರನ್ನು ಉಳಿಸಬೇಕು’ ಎಂದು ಹೇಳುತ್ತಾರೆ.</p>.<p>‘ಇಂದಿನ ಕಾಲದ ಮಕ್ಕಳೇ ಪೋಷಕರಿಗೆ ಪಾಠ ಕಲಿಸುತ್ತಾರೆ. ನನ್ನ ಮೊಮ್ಮಗ ನನಗೇ ಮೊಬೈಲ್ ಫೋನ್ ಬಳಸುವುದನ್ನು ಹೇಳಿ ಕೊಡುತ್ತಾನೆ. ಅವರಿಗೆ ಈಗಿನಿಂದಲೇಪರಿಸರದಕಾಳಜಿ ಹಾಗೂ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ’ ಎಂದು ನಾಗೇಶ್ ಹೆಗಡೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>