<p><strong>ಬೆಂಗಳೂರು:</strong> ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಸೋಮವಾರ ಒಂದೇ ದಿನದಲ್ಲೇ ಐದು ಕಡೆಗಳಲ್ಲಿ ಚಿನ್ನದ ಸರಗಳವು ಪ್ರಕರಣಗಳು ವರದಿಯಾಗಿವೆ.</p>.<p>ಬಿಟಿಎಂ 2ನೇ ಹಂತದಐಎಎಸ್ ಕಾಲೊನಿಯಲ್ಲಿ ಸಾವಿತ್ರಮ್ಮ (57) ಎಂಬುವರ 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಬ್ಯಾಂಕ್ ಉದ್ಯೋಗಿಯಾದ ಸಾವಿತ್ರಮ್ಮ, ಇಡಬ್ಲ್ಯುಎಸ್ ಕಾಲೊನಿ ನಿವಾಸಿ.</p>.<p>ಅದಾದ 40 ನಿಮಿಷಕ್ಕೇ ಬಿಟಿಎಂ 2ನೇ ಹಂತದ ಬಾಲಾಜಿ ದೇವಸ್ಥಾನದ ಬಳಿಯೇ ಪುಷ್ಪಾ ರಾವ್ (66) ಎಂಬುವರ 38 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಕಳ್ಳರು ಕಿತ್ತೊಯ್ದಿದ್ದಾರೆ.</p>.<p class="Subhead">ಮಾಂಗಲ್ಯ ಕಿತ್ತೊಯ್ದರು: ಮತ್ತೀಕೆರೆಯಲ್ಲಿ ಸೋಮವಾರ ಸಂಜೆ ಗೀತಾ (35) ಎಂಬುವರ 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ.</p>.<p class="Subhead"><strong>ಬಸ್ಸಿನಲ್ಲೂ ಸರ ಕದ್ದರು:</strong>ಮಾಡ್ರನ್ ಬ್ರೆಡ್ ಫ್ಯಾಕ್ಟರಿ ವೃತ್ತದಿಂದ ಎಫ್ಟಿಐ ವೃತ್ತಕ್ಕೆ ಬಿಎಂಟಿಸಿ ಬಸ್ಸಿನಲ್ಲಿ ಹೊರಟಿದ್ದ ಗಾರ್ಮೆಂಟ್ಸ್ ಕಾರ್ಖಾನೆ ಉದ್ಯೋಗಿ ಸಿ.ಎಸ್. ಉಮಾ (47) ಎಂಬುವರ 25 ಗ್ರಾಂ ತೂಕದ ಮಾಂಗಲ್ಯವನ್ನು ಕಳವು ಮಾಡಲಾಗಿದೆ.</p>.<p class="Subhead">ಇನ್ನೊಂದು ಪ್ರಕರಣದಲ್ಲಿ, ಬ್ಯಾಡರಹಳ್ಳಿ ಈಸ್ಟ್ ವೆಸ್ಟ್ ಕಾಲೇಜಿನ ನಿಲ್ದಾಣದಿಂದ ಮೆಜೆಸ್ಟಿಕ್ ನಿಲ್ದಾಣಕ್ಕೆ ಬಿಎಂಟಿಸಿ ಬಸ್ಸಿನಲ್ಲಿ ಹೊರಟಿದ್ದ ಮಂಗಳಾ (42) ಎಂಬುವರಸರ ಕದಿಯಲಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಸೋಮವಾರ ಒಂದೇ ದಿನದಲ್ಲೇ ಐದು ಕಡೆಗಳಲ್ಲಿ ಚಿನ್ನದ ಸರಗಳವು ಪ್ರಕರಣಗಳು ವರದಿಯಾಗಿವೆ.</p>.<p>ಬಿಟಿಎಂ 2ನೇ ಹಂತದಐಎಎಸ್ ಕಾಲೊನಿಯಲ್ಲಿ ಸಾವಿತ್ರಮ್ಮ (57) ಎಂಬುವರ 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಬ್ಯಾಂಕ್ ಉದ್ಯೋಗಿಯಾದ ಸಾವಿತ್ರಮ್ಮ, ಇಡಬ್ಲ್ಯುಎಸ್ ಕಾಲೊನಿ ನಿವಾಸಿ.</p>.<p>ಅದಾದ 40 ನಿಮಿಷಕ್ಕೇ ಬಿಟಿಎಂ 2ನೇ ಹಂತದ ಬಾಲಾಜಿ ದೇವಸ್ಥಾನದ ಬಳಿಯೇ ಪುಷ್ಪಾ ರಾವ್ (66) ಎಂಬುವರ 38 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಕಳ್ಳರು ಕಿತ್ತೊಯ್ದಿದ್ದಾರೆ.</p>.<p class="Subhead">ಮಾಂಗಲ್ಯ ಕಿತ್ತೊಯ್ದರು: ಮತ್ತೀಕೆರೆಯಲ್ಲಿ ಸೋಮವಾರ ಸಂಜೆ ಗೀತಾ (35) ಎಂಬುವರ 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ.</p>.<p class="Subhead"><strong>ಬಸ್ಸಿನಲ್ಲೂ ಸರ ಕದ್ದರು:</strong>ಮಾಡ್ರನ್ ಬ್ರೆಡ್ ಫ್ಯಾಕ್ಟರಿ ವೃತ್ತದಿಂದ ಎಫ್ಟಿಐ ವೃತ್ತಕ್ಕೆ ಬಿಎಂಟಿಸಿ ಬಸ್ಸಿನಲ್ಲಿ ಹೊರಟಿದ್ದ ಗಾರ್ಮೆಂಟ್ಸ್ ಕಾರ್ಖಾನೆ ಉದ್ಯೋಗಿ ಸಿ.ಎಸ್. ಉಮಾ (47) ಎಂಬುವರ 25 ಗ್ರಾಂ ತೂಕದ ಮಾಂಗಲ್ಯವನ್ನು ಕಳವು ಮಾಡಲಾಗಿದೆ.</p>.<p class="Subhead">ಇನ್ನೊಂದು ಪ್ರಕರಣದಲ್ಲಿ, ಬ್ಯಾಡರಹಳ್ಳಿ ಈಸ್ಟ್ ವೆಸ್ಟ್ ಕಾಲೇಜಿನ ನಿಲ್ದಾಣದಿಂದ ಮೆಜೆಸ್ಟಿಕ್ ನಿಲ್ದಾಣಕ್ಕೆ ಬಿಎಂಟಿಸಿ ಬಸ್ಸಿನಲ್ಲಿ ಹೊರಟಿದ್ದ ಮಂಗಳಾ (42) ಎಂಬುವರಸರ ಕದಿಯಲಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>