ಕೊರೊನಾ ಸೋಂಕು ಹರಡುವ ಭೀತಿಯಿಂದ ಸರ್ಕಾರ ಜಾತ್ರೆ, ಸಂತೆ, ಸಾರ್ವಜನಿಕ ಸಭೆ, ಮದುವೆ ನಿಷೇಧಿಸಿದೆ. ಅಲ್ಲದೆ ಲಾಕ್ ಡೌನ್ ಮಾಡಿದ್ದು, ಇರುವಾಗ ಬುಧವಾರ ಗ್ರಾಮಕ್ಕೆ ತೆರಳಿ ದೇವಸ್ಥಾನದ ಪೂಜಾರಿಗೆ ಹಾಗೂ ಇತರ ಜನರಿಗೆ ಜಾತ್ರೆ ನಡೆಸದಂತೆ ಸೂಚಿಸಲಾಗಿತ್ತು. ಅದರಂತೆ ಗ್ರಾಮಸ್ಥರು ಒಪ್ಪಿಕೊಂಡಿದ್ದರು. ಆದರೆ, ರಾತ್ರಿ ಏಳು ಗಂಟೆಯ ಸುಮಾರಿಗೆ ಸಾಂಕ್ರಾಮಿಕ ರೋಗ ಹರಡುತ್ತಿರುವ ಬಗ್ಗೆ ಗೊತ್ತಿದ್ದರೂ ಸಹ ಉದ್ದೇಶಪೂರ್ವಕವಾಗಿ ಜಾತ್ರೆ ನಡೆಸಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ಕಾಡಂಗೇರಾ ಗ್ರಾಮದ ಲೇಖಾಪಾಲಕ ಶಂಕರಗೌಡ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ವಡಗೇರಾ ಠಾಣೆಯಲ್ಲಿ ದೂರು ದಾಖಲಾಗಿದೆ.