ಬೆಂಗಳೂರು: ಕರಗ ಶಕ್ತ್ಯೋತ್ಸವದ ಪ್ರಯುಕ್ತ ಲಾಲ್ಬಾಗ್ ರಸ್ತೆ 3ನೇ ಅಡ್ಡರಸ್ತೆಯ ಮುನೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಪೂಜೆ ನೆರವೇರಿಸಲಾಯಿತು.
ಕರಗದ ಪೂಜಾರಿ ಮನು ಹಾಗೂ ಅವರ ಸಂಗಡಿಗರಾದ ವೀರಕುಮಾರರು ಪೂಜೆ ಬಳಿಕ, ಸಂಪಂಗಿ ರಾಮನಗರದಲ್ಲಿನ ಆನೇಗೌಡರ ಮನೆಗೆ ಭೇಟಿ ನೀಡಿ ಸೇವೆಯನ್ನು ಸ್ವೀಕರಿಸಿದರು. ಬಳಿಕ ಹಸಿ ಕರಗ ನಡೆಯುವ ಕುಂಟೆಗೆ ಬಂದರು. ಈ ಚಟುವಟಿಕೆಗಳ ಮೂಲಕ ದಿನದ ಧಾರ್ಮಿಕ ವಿಧಿ–ವಿಧಾನಗಳು ಮುಕ್ತಾಯಗೊಂಡವು.
ಏ.15ರಂದು ಗವಿಪುರ ಗುಟ್ಟಹಳ್ಳಿಯಲ್ಲಿ ಇರುವ ಜಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಧ್ಯಾಹ್ನ 12.30ಕ್ಕೆ ವಿಶೇಷ ಪೂಜೆ ನಡೆಯಲಿದೆ.