ಅಭಿವೃದ್ಧಿ ಹೆಸರಲ್ಲಿ ಅರಣ್ಯ ನಾಶ: ವಿದ್ಯುತ್ ನೀತಿವಿಶ್ಲೇಷಕಶಂಕರ್ ಶರ್ಮಾ, ‘ರಾಜ್ಯ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರಿಂದಪಶ್ಚಿಮ ಘಟ್ಟದಲ್ಲಿ 31 ಲಕ್ಷ ಮರಗಳ ಹನನವಾಗಲಿದೆ. ಕೇರಳ ಹಾಗೂ ಗೋವಾ ಮಧ್ಯೆ ವಿದ್ಯುತ್ ಪೂರೈಕೆಗಾಗಿ ಯೋಜನೆಯೊಂದನ್ನು ರೂಪಿಸಿ, ಜಾರಿಗೆ ತರಲು ಅನುಮತಿ ಸಹ ದೊರೆತಿದೆ. ಈ ಮೂಲಕ ಸಮೃದ್ಧ ಅರಣ್ಯವನ್ನು ನಾಶ ಮಾಡಲು ಸರ್ಕಾರ ಮುಂದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.