ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ ಈ ಸಾಲಿನ ನಾಟಕ ರಚನಾ ಸ್ಪರ್ಧೆಯ ಬಹುಮಾನಕ್ಕೆ ನಾಲ್ಕು ನಾಟಕಗಳನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಎನ್.ಸಿ.ಮಹೇಶ ಬರೆದಿರುವ ‘ಸಾಕುತಂದೆ ರೂಮಿ’, ನಟರಾಜ್ ತಲಘಟ್ಟಪುರ ಅವರ ‘ಬಯಲರೂಪ’, ಉಷಾ ಕಟ್ಟೆಮನೆ ಅವರ ‘ಕೋಡ್ದಬ್ಬ ತನ್ನಿಮಾನಿಗ’ ಮತ್ತು ವಿದ್ಯಾರ್ಥಿ ವಿಭಾಗದಲ್ಲಿ ಕುಪ್ಪಳ್ಳಿಯ ನಮನ ಬಿ.ಎನ್. ಅವರ ‘ನಡುವೆ ಸುಳಿವಾತ್ಮ’ ನಾಟಕ ಬಹುಮಾನಕ್ಕೆ ಆಯ್ಕೆಯಾಗಿದೆ.
ತಲಾ ₹20,000 ಬಹುಮಾನ ಇದಾಗಿದ್ದು, ವಿಶ್ವರಂಗಭೂಮಿ ದಿನವಾದ ಇದೇ 27ರಂದು ಸಂಜೆ 6ಕ್ಕೆ ನಯನ ಸಭಾಂಗಣದಲ್ಲಿ ಬಹುಮಾನ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಜಿ. ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.