<p><strong>ಬೆಳಗಾವಿ: </strong>ಇಲ್ಲಿ ನಡೆದ ವಿಟಿಯ ಘಟಿಕೋತ್ಸವದಲ್ಲಿ ಪಿಎಚ್.ಡಿ ಪಡೆದವರಿಗೆ ಪದವಿ ಪ್ರದಾನ ಮಾಡುವಾಗ ಅವ್ಯವಸ್ಥೆ ಮತ್ತು ಗೊಂದಲ ಉಂಟಾಯಿತು.</p>.<p>ಈ ಬಾರಿ ದಾಖಲೆಯ 620 ಮಂದಿಗೆ ಪಿಎಚ್.ಡಿ ನೀಡಲಾಗಿದೆ. ಎಲ್ಲವೂ ವ್ಯವಸ್ಥಿತವಾಗಿ ನಡೆದಿತ್ತು. ಆದರೆ, ಮಧ್ಯದಲ್ಲಿ ಹಲವರಿಗೆ ನೀಡಿದ ಪ್ರಮಾಣಪತ್ರದಲ್ಲಿ ಗೊಂದಲ ಉಂಟಾಯಿತು. ಯಾರದೋ ಹೆಸರಿನ ಪ್ರಮಾಣಪತ್ರ ಇನ್ಯಾರಿಗೋ ಕೊಡಲಾಯಿತು! ಆಯೋಜಕರು ಪಿಎಚ್.ಡಿ ಪದವಿ ಪಡೆದವರಿಗೇ ಪ್ರಮಾಣಪತ್ರ ಕೊಡುತ್ತಿದ್ದರು. ಅವರು ವೇದಿಕೆ ಮೇಲಿದ್ದ ಮುಖ್ಯಅತಿಥಿಗಳಿಗೆ ನೀಡಿ ಮತ್ತೆ ಅವರಿಂದ ಪಡೆದುಕೊಂಡು ಫೋಟೊಗೆ ಪೋಸು ಕೊಡುತ್ತಿದ್ದರು. ಹೀಗೆ ಪಡೆದ ಕೆಲವರು ಮುಜುಗರ ಅನುಭವಿಸಿದ್ದೂ ಕಂಡುಬಂತು.</p>.<p>‘ಮ್ಯರಾಥಾನ್ ಪಿಎಚ್.ಡಿ. ಪ್ರದಾನ’ ನಡೆಯಿತು. ಕೆಲವರು, ತಮ್ಮ ಪ್ರಮಾಣಪತ್ರಗಳನ್ನು ತಾವೇ ಹುಡುಕಿಕೊಳ್ಳಬೇಕಾದ ಪ್ರಸಂಗವೂ ನಡೆಯಿತು. ‘ಯಾರದೋ ಪ್ರಮಾಣಪತ್ರ ಯಾರಿಗೋ ಕೊಡುವುದಾದರೆ ಕಾರ್ಯಕ್ರಮ ನಡೆಸಬೇಕೇಕೆ’ ಎಂದು ಕೆಲವರು ವೇದಿಕೆ ಪಕ್ಕದಲ್ಲಿ ಆಯೋಜಕರನ್ನು ಪ್ರಶ್ನಿಸುತ್ತಿದ್ದುದು ಕಂಡುಬಂತು.</p>.<p>ಬಳಿಕ, ‘ಪ್ರಮಾಣಪತ್ರ ವಿತರಣೆಯಲ್ಲಿ ಆಗಿರುವ ಗೊಂದಲವನ್ನು ನಂತರ ಸರಿಪಡಿಸಲಾಗುವುದು’ ಎಂದು ಆಯೋಜಕರು ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಇಲ್ಲಿ ನಡೆದ ವಿಟಿಯ ಘಟಿಕೋತ್ಸವದಲ್ಲಿ ಪಿಎಚ್.ಡಿ ಪಡೆದವರಿಗೆ ಪದವಿ ಪ್ರದಾನ ಮಾಡುವಾಗ ಅವ್ಯವಸ್ಥೆ ಮತ್ತು ಗೊಂದಲ ಉಂಟಾಯಿತು.</p>.<p>ಈ ಬಾರಿ ದಾಖಲೆಯ 620 ಮಂದಿಗೆ ಪಿಎಚ್.ಡಿ ನೀಡಲಾಗಿದೆ. ಎಲ್ಲವೂ ವ್ಯವಸ್ಥಿತವಾಗಿ ನಡೆದಿತ್ತು. ಆದರೆ, ಮಧ್ಯದಲ್ಲಿ ಹಲವರಿಗೆ ನೀಡಿದ ಪ್ರಮಾಣಪತ್ರದಲ್ಲಿ ಗೊಂದಲ ಉಂಟಾಯಿತು. ಯಾರದೋ ಹೆಸರಿನ ಪ್ರಮಾಣಪತ್ರ ಇನ್ಯಾರಿಗೋ ಕೊಡಲಾಯಿತು! ಆಯೋಜಕರು ಪಿಎಚ್.ಡಿ ಪದವಿ ಪಡೆದವರಿಗೇ ಪ್ರಮಾಣಪತ್ರ ಕೊಡುತ್ತಿದ್ದರು. ಅವರು ವೇದಿಕೆ ಮೇಲಿದ್ದ ಮುಖ್ಯಅತಿಥಿಗಳಿಗೆ ನೀಡಿ ಮತ್ತೆ ಅವರಿಂದ ಪಡೆದುಕೊಂಡು ಫೋಟೊಗೆ ಪೋಸು ಕೊಡುತ್ತಿದ್ದರು. ಹೀಗೆ ಪಡೆದ ಕೆಲವರು ಮುಜುಗರ ಅನುಭವಿಸಿದ್ದೂ ಕಂಡುಬಂತು.</p>.<p>‘ಮ್ಯರಾಥಾನ್ ಪಿಎಚ್.ಡಿ. ಪ್ರದಾನ’ ನಡೆಯಿತು. ಕೆಲವರು, ತಮ್ಮ ಪ್ರಮಾಣಪತ್ರಗಳನ್ನು ತಾವೇ ಹುಡುಕಿಕೊಳ್ಳಬೇಕಾದ ಪ್ರಸಂಗವೂ ನಡೆಯಿತು. ‘ಯಾರದೋ ಪ್ರಮಾಣಪತ್ರ ಯಾರಿಗೋ ಕೊಡುವುದಾದರೆ ಕಾರ್ಯಕ್ರಮ ನಡೆಸಬೇಕೇಕೆ’ ಎಂದು ಕೆಲವರು ವೇದಿಕೆ ಪಕ್ಕದಲ್ಲಿ ಆಯೋಜಕರನ್ನು ಪ್ರಶ್ನಿಸುತ್ತಿದ್ದುದು ಕಂಡುಬಂತು.</p>.<p>ಬಳಿಕ, ‘ಪ್ರಮಾಣಪತ್ರ ವಿತರಣೆಯಲ್ಲಿ ಆಗಿರುವ ಗೊಂದಲವನ್ನು ನಂತರ ಸರಿಪಡಿಸಲಾಗುವುದು’ ಎಂದು ಆಯೋಜಕರು ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>