<p><strong>ಬೆಂಗಳೂರು:</strong> ‘ಸೊವಾ ರಿಗ್ಪಾ’ ಎಂಬ ವೈದ್ಯ ಪದ್ಧತಿಗೆ ಸಂಬಂಧಿಸಿದ ಅಪೂರ್ವ ಮಾಹಿತಿಗಳನ್ನು ಒಳಗೊಂಡಿರುವ ಸುಮಾರು 1,500 ವರ್ಷಗಳಷ್ಟು ಹಳೆಯ ಹಸ್ತಪ್ರತಿಯ ಕಡತವನ್ನು ‘ಭಾರತ ವರ್ಷ ಪಾರಂಪರಿಕ ಚಿಕಿತ್ಸಾ ಪದ್ಧತಿಯ ರಾಷ್ಟ್ರೀಯ ಸಮ್ಮೇಳನ’ದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.</p>.<p>ಲಡಾಖ್ನಲ್ಲಿರುವ ‘ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೊವಾ ರಿಗ್ಪಾ’ದ ವಿಜ್ಞಾನಿಗಳು ಈ ಕಡತವನ್ನು ಬೆಂಗಳೂರಿಗೆ ತಂದಿದ್ದಾರೆ. ಸೊವಾ ರಿಗ್ಪಾ ಚಿಕಿತ್ಸಾ ಪದ್ಧತಿ ಬುದ್ಧ ಮತ್ತು ಆನಂತರದ ಕಾಲದಲ್ಲಿ ಭಾರತದಲ್ಲಿ ಪ್ರಚಲಿತದಲ್ಲಿತ್ತು. ವಿದೇಶಿ ದಾಳಿಕೋರರು ನಳಂದಾ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದಾಗ ಬೌದ್ಧ ಭಿಕ್ಕುಗಳು ಈ ಚಿಕಿತ್ಸಾ ಪದ್ಧತಿಗೆ ಸೇರಿದ ಸಾಕಷ್ಟು ಗ್ರಂಥಗಳನ್ನು ಟಿಬೆಟ್ ಮತ್ತು ಚೀನಾಗೆ ಒಯ್ದರು.</p>.<p>‘ಟಿಬೆಟ್ನವರು ತಮ್ಮದೇ ಮೂಲದ್ದು ಎಂದು ಹೇಳಿಕೊಳ್ಳುವ ಈ ವೈದ್ಯ ಪದ್ಧತಿಯ ಮೂಲ ಭಾರತದ್ದೇ ಆಗಿದೆ. ಲೇಹ್– ಲಡಾಖ್ ಪ್ರಾಂತ್ಯದಲ್ಲಿ ಕೆಲವರು ಇದನ್ನು ಕಾಪಾಡಿಕೊಂಡು ಬಂದಿದ್ದಾರೆ. 2010ರಲ್ಲಿ ಭಾರತ ಸರ್ಕಾರ ಇದಕ್ಕೆ ಮಾನ್ಯತೆ ನೀಡಿದ್ದೂ ಅಲ್ಲದೆ, ಸಂಶೋಧನಾ ಸಂಸ್ಥೆಯನ್ನು ಆರಂಭಿಸಿತು’ ಎಂದು ಸಂಶೋಧನಾ ಸಹಾಯಕಿ ಡಾ. ಸೆವಾಂಗ್ ಡೋಲ್ಮಾ ತಿಳಿಸಿದರು.</p>.<p>‘ಸಂಶೋಧನಾ ಸಂಸ್ಥೆ ಆರಂಭವಾದ ಬಳಿಕ ಈ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದ ಪ್ರಾಚೀನ ತಾಳೆ ಪತ್ರಗಳು, ಕೈಯಿಂದ ತಯಾರಿಸಿದ್ದ ಕಾಗದದ ಹಸ್ತಪ್ರತಿಗಳನ್ನು ಸಂಗ್ರಹಿಸಿ, ರಕ್ಷಿಸುವ ಕಾರ್ಯವನ್ನು ಕೈಗೊಂಡಿದ್ದೇವೆ. ಅಲ್ಲದೆ, ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಮೂಲಿಕೆಗಳು, ಔಷಧೀಯ ಸಸ್ಯಗಳನ್ನು ಪತ್ತೆ ಹಚ್ಚಿ ರಕ್ಷಿಸುವ ಕಾರ್ಯ ನಡೆದಿದೆ’ ಎಂದು ಹೇಳಿದರು.</p>.<p>‘ಆಯುರ್ವೇದಕ್ಕೂ ನಮ್ಮ ಪದ್ಧತಿಗೂ ಹೆಚ್ಚಿನ ವ್ಯತ್ಯಾಸಗಳಿಲ್ಲ. ಈ ವೈದ್ಯ ಪದ್ಧತಿ ನಾಲ್ಕು ತತ್ವಗಳನ್ನು ಆಧರಿಸಿದೆ. ಆಯುರ್ವೇದದಷ್ಟೇ ಪ್ರಾಚೀನ ಪದ್ಧತಿ. ಭಾರತದಲ್ಲಿ ಕೆಲವು ಭಾಗಗಳಲ್ಲದೆ, ಟಿಬೆಟ್, ಮಂಗೋಲಿಯಾ, ಭೂತಾನ್, ಚೀನಾದ ಕೆಲವು ಭಾಗ, ನೇಪಾಳ ಮತ್ತು ರಷ್ಯಾದ ಕೆಲವು ಪ್ರದೇಶಗಳಲ್ಲಿ ಈ ವೈದ್ಯ ಪದ್ಧತಿ ಚಾಲ್ತಿಯಲ್ಲಿದೆ. ನಳಂದಾದಿಂದ ಈ ಗ್ರಂಥಗಳನ್ನು ಟಿಬೆಟ್ ಮತ್ತು ಚೀನಾ ಕಡೆಗೆ ಒಯ್ದ ಸಂದರ್ಭದಲ್ಲಿ ಸಂಸ್ಕೃತ, ಪಾಳಿ ಭಾಷೆಗಳಲ್ಲೇ ಇದ್ದವು. ಬಳಿಕ ಟಿಬೆಟ್ ಮತ್ತು ಇತರ ಭಾಷೆಗಳಿಗೆ ತರ್ಜುಮೆ ಮಾಡಲಾಯಿತು ಎಂದು ಅವರು ಹೇಳಿದರು.</p>.<p>ಸಣ್ಣ– ಸಣ್ಣ ಗುಳಿಗೆಗಳು ಮತ್ತು ಚೂರ್ಣದ ರೂಪದಲ್ಲಿ ಔಷಧಗಳನ್ನು ನೀಡುವ ಪದ್ಧತಿ ಲಡಾಖ್ನಲ್ಲಿ ಬಹಳ ಕಾಲದಿಂದಲೂ ಇತ್ತು. ಇದನ್ನು ಒಂದಷ್ಟು ಜನ ಕಾಪಾಡಿಕೊಂಡು ಬಂದಿದ್ದರು. ಇದಕ್ಕೆ ಮಾನ್ಯತೆ ಸಿಗುವಾಗ ವಿಳಂಬವಾಯಿತು ಎಂದು ಅವರು ಹೇಳಿದರು.</p>.<p><strong>ರಾಷ್ಟ್ರೀಯ ಆರೋಗ್ಯ ಮೇಳಕ್ಕೆ ಚಾಲನೆ</strong></p>.<p>ಕೇಂದ್ರದ ಆಯುಷ್ ಇಲಾಖೆ ಮತ್ತು ‘ಜಿಜ್ಞಾಸ’ ಜಂಟಿಯಾಗಿ ಏರ್ಪಡಿಸಿದ್ದ ಮೂರು ದಿನಗಳ ರಾಷ್ಟ್ರೀಯ ಆರೋಗ್ಯ ಮೇಳಕ್ಕೆ ಗುರುವಾರ ಚಾಲನೆ ನೀಡಲಾಯಿತು.</p>.<p>ಕೇಂದ್ರ ಸರ್ಕಾರದ ಆಯುಷ್ ಕಾರ್ಯದರ್ಶಿ ಡಾ. ರಾಜೇಶ್ ಕೊಟೇಚಾ ಮಾತನಾಡಿ, ಆಯುಷ್ (ಆಯರ್ವೇದ, ಯುನಾನಿ, ಸಿದ್ಧ ಮತ್ತು ನ್ಯಾಚುರೋಪತಿ) ವೈದ್ಯ ಪದ್ಧತಿಯನ್ನೂ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು ಎಂದುವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಲಾಗಿದೆ ಎಂದರು.</p>.<p>ಕೇಂದ್ರ ಸರ್ಕಾರ ಸದ್ಯವೇ ಆಯುಷ್ ಕೌಶಲ ಮಂಡಳಿಯನ್ನು ರಚಿಸಲಿದೆ. ಆಯುಷ್ ಶಿಕ್ಷಣ ಪಡೆದು ಬರುವವರಿಗೆ ಉದ್ಯೋಗ ಕಂಡುಕೊಳ್ಳಲು ಅನುಕೂಲವಾಗುವಂತೆ ಕೌಶಲ ಶಿಕ್ಷಣವನ್ನು ನೀಡಲು ಸರ್ಕಾರ ಉದ್ದೇಶಿಸಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಸೊವಾ ರಿಗ್ಪಾ’ ಎಂಬ ವೈದ್ಯ ಪದ್ಧತಿಗೆ ಸಂಬಂಧಿಸಿದ ಅಪೂರ್ವ ಮಾಹಿತಿಗಳನ್ನು ಒಳಗೊಂಡಿರುವ ಸುಮಾರು 1,500 ವರ್ಷಗಳಷ್ಟು ಹಳೆಯ ಹಸ್ತಪ್ರತಿಯ ಕಡತವನ್ನು ‘ಭಾರತ ವರ್ಷ ಪಾರಂಪರಿಕ ಚಿಕಿತ್ಸಾ ಪದ್ಧತಿಯ ರಾಷ್ಟ್ರೀಯ ಸಮ್ಮೇಳನ’ದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.</p>.<p>ಲಡಾಖ್ನಲ್ಲಿರುವ ‘ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೊವಾ ರಿಗ್ಪಾ’ದ ವಿಜ್ಞಾನಿಗಳು ಈ ಕಡತವನ್ನು ಬೆಂಗಳೂರಿಗೆ ತಂದಿದ್ದಾರೆ. ಸೊವಾ ರಿಗ್ಪಾ ಚಿಕಿತ್ಸಾ ಪದ್ಧತಿ ಬುದ್ಧ ಮತ್ತು ಆನಂತರದ ಕಾಲದಲ್ಲಿ ಭಾರತದಲ್ಲಿ ಪ್ರಚಲಿತದಲ್ಲಿತ್ತು. ವಿದೇಶಿ ದಾಳಿಕೋರರು ನಳಂದಾ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದಾಗ ಬೌದ್ಧ ಭಿಕ್ಕುಗಳು ಈ ಚಿಕಿತ್ಸಾ ಪದ್ಧತಿಗೆ ಸೇರಿದ ಸಾಕಷ್ಟು ಗ್ರಂಥಗಳನ್ನು ಟಿಬೆಟ್ ಮತ್ತು ಚೀನಾಗೆ ಒಯ್ದರು.</p>.<p>‘ಟಿಬೆಟ್ನವರು ತಮ್ಮದೇ ಮೂಲದ್ದು ಎಂದು ಹೇಳಿಕೊಳ್ಳುವ ಈ ವೈದ್ಯ ಪದ್ಧತಿಯ ಮೂಲ ಭಾರತದ್ದೇ ಆಗಿದೆ. ಲೇಹ್– ಲಡಾಖ್ ಪ್ರಾಂತ್ಯದಲ್ಲಿ ಕೆಲವರು ಇದನ್ನು ಕಾಪಾಡಿಕೊಂಡು ಬಂದಿದ್ದಾರೆ. 2010ರಲ್ಲಿ ಭಾರತ ಸರ್ಕಾರ ಇದಕ್ಕೆ ಮಾನ್ಯತೆ ನೀಡಿದ್ದೂ ಅಲ್ಲದೆ, ಸಂಶೋಧನಾ ಸಂಸ್ಥೆಯನ್ನು ಆರಂಭಿಸಿತು’ ಎಂದು ಸಂಶೋಧನಾ ಸಹಾಯಕಿ ಡಾ. ಸೆವಾಂಗ್ ಡೋಲ್ಮಾ ತಿಳಿಸಿದರು.</p>.<p>‘ಸಂಶೋಧನಾ ಸಂಸ್ಥೆ ಆರಂಭವಾದ ಬಳಿಕ ಈ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದ ಪ್ರಾಚೀನ ತಾಳೆ ಪತ್ರಗಳು, ಕೈಯಿಂದ ತಯಾರಿಸಿದ್ದ ಕಾಗದದ ಹಸ್ತಪ್ರತಿಗಳನ್ನು ಸಂಗ್ರಹಿಸಿ, ರಕ್ಷಿಸುವ ಕಾರ್ಯವನ್ನು ಕೈಗೊಂಡಿದ್ದೇವೆ. ಅಲ್ಲದೆ, ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಮೂಲಿಕೆಗಳು, ಔಷಧೀಯ ಸಸ್ಯಗಳನ್ನು ಪತ್ತೆ ಹಚ್ಚಿ ರಕ್ಷಿಸುವ ಕಾರ್ಯ ನಡೆದಿದೆ’ ಎಂದು ಹೇಳಿದರು.</p>.<p>‘ಆಯುರ್ವೇದಕ್ಕೂ ನಮ್ಮ ಪದ್ಧತಿಗೂ ಹೆಚ್ಚಿನ ವ್ಯತ್ಯಾಸಗಳಿಲ್ಲ. ಈ ವೈದ್ಯ ಪದ್ಧತಿ ನಾಲ್ಕು ತತ್ವಗಳನ್ನು ಆಧರಿಸಿದೆ. ಆಯುರ್ವೇದದಷ್ಟೇ ಪ್ರಾಚೀನ ಪದ್ಧತಿ. ಭಾರತದಲ್ಲಿ ಕೆಲವು ಭಾಗಗಳಲ್ಲದೆ, ಟಿಬೆಟ್, ಮಂಗೋಲಿಯಾ, ಭೂತಾನ್, ಚೀನಾದ ಕೆಲವು ಭಾಗ, ನೇಪಾಳ ಮತ್ತು ರಷ್ಯಾದ ಕೆಲವು ಪ್ರದೇಶಗಳಲ್ಲಿ ಈ ವೈದ್ಯ ಪದ್ಧತಿ ಚಾಲ್ತಿಯಲ್ಲಿದೆ. ನಳಂದಾದಿಂದ ಈ ಗ್ರಂಥಗಳನ್ನು ಟಿಬೆಟ್ ಮತ್ತು ಚೀನಾ ಕಡೆಗೆ ಒಯ್ದ ಸಂದರ್ಭದಲ್ಲಿ ಸಂಸ್ಕೃತ, ಪಾಳಿ ಭಾಷೆಗಳಲ್ಲೇ ಇದ್ದವು. ಬಳಿಕ ಟಿಬೆಟ್ ಮತ್ತು ಇತರ ಭಾಷೆಗಳಿಗೆ ತರ್ಜುಮೆ ಮಾಡಲಾಯಿತು ಎಂದು ಅವರು ಹೇಳಿದರು.</p>.<p>ಸಣ್ಣ– ಸಣ್ಣ ಗುಳಿಗೆಗಳು ಮತ್ತು ಚೂರ್ಣದ ರೂಪದಲ್ಲಿ ಔಷಧಗಳನ್ನು ನೀಡುವ ಪದ್ಧತಿ ಲಡಾಖ್ನಲ್ಲಿ ಬಹಳ ಕಾಲದಿಂದಲೂ ಇತ್ತು. ಇದನ್ನು ಒಂದಷ್ಟು ಜನ ಕಾಪಾಡಿಕೊಂಡು ಬಂದಿದ್ದರು. ಇದಕ್ಕೆ ಮಾನ್ಯತೆ ಸಿಗುವಾಗ ವಿಳಂಬವಾಯಿತು ಎಂದು ಅವರು ಹೇಳಿದರು.</p>.<p><strong>ರಾಷ್ಟ್ರೀಯ ಆರೋಗ್ಯ ಮೇಳಕ್ಕೆ ಚಾಲನೆ</strong></p>.<p>ಕೇಂದ್ರದ ಆಯುಷ್ ಇಲಾಖೆ ಮತ್ತು ‘ಜಿಜ್ಞಾಸ’ ಜಂಟಿಯಾಗಿ ಏರ್ಪಡಿಸಿದ್ದ ಮೂರು ದಿನಗಳ ರಾಷ್ಟ್ರೀಯ ಆರೋಗ್ಯ ಮೇಳಕ್ಕೆ ಗುರುವಾರ ಚಾಲನೆ ನೀಡಲಾಯಿತು.</p>.<p>ಕೇಂದ್ರ ಸರ್ಕಾರದ ಆಯುಷ್ ಕಾರ್ಯದರ್ಶಿ ಡಾ. ರಾಜೇಶ್ ಕೊಟೇಚಾ ಮಾತನಾಡಿ, ಆಯುಷ್ (ಆಯರ್ವೇದ, ಯುನಾನಿ, ಸಿದ್ಧ ಮತ್ತು ನ್ಯಾಚುರೋಪತಿ) ವೈದ್ಯ ಪದ್ಧತಿಯನ್ನೂ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು ಎಂದುವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಲಾಗಿದೆ ಎಂದರು.</p>.<p>ಕೇಂದ್ರ ಸರ್ಕಾರ ಸದ್ಯವೇ ಆಯುಷ್ ಕೌಶಲ ಮಂಡಳಿಯನ್ನು ರಚಿಸಲಿದೆ. ಆಯುಷ್ ಶಿಕ್ಷಣ ಪಡೆದು ಬರುವವರಿಗೆ ಉದ್ಯೋಗ ಕಂಡುಕೊಳ್ಳಲು ಅನುಕೂಲವಾಗುವಂತೆ ಕೌಶಲ ಶಿಕ್ಷಣವನ್ನು ನೀಡಲು ಸರ್ಕಾರ ಉದ್ದೇಶಿಸಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>