ಪ್ರತಿ ವರ್ಷ ರಂಜಾನ್ ಬಂದರೆ ಟೇಲರ್ಗಳಿಗೆ ಕೈತುಂಬಾ ಕೆಲಸ ಇರುತ್ತಿತ್ತು. ಪ್ರಸಕ್ತ ವರ್ಷ ಕೊರೊನಾ ಟೇಲರ್ಗಳ ಬದುಕಿನ ಮೇಲೆ ಗದಾಪ್ರಹಾರ ನಡೆಸಿದೆ. ಅನೇಕರಿಗೆ ಅಂಗಡಿ ಬಾಡಿಗೆ ಕಟ್ಟುವ ಮತ್ತು ವಿದ್ಯುತ್ ಬಿಲ್ ಭರಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ‘ಸರ್ಕಾರ ಅಟೊ, ಟ್ಯಾಕ್ಸಿ ಚಾಲಕರಿಗೆ ನೆರವು ಘೋಷಿಸಿದ ರೀತಿಯಲ್ಲಿ ಟೇಲರ್ ವೃತ್ತಿ ಅವಲಂಬಿತರಿಗೂ ನೆರವು ನೀಡಬೇಕು’ ಎಂದು ಭಾರತೀಯ ಮುಕ್ತಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ ಒತ್ತಾಯಿಸಿದ್ದಾರೆ.