ಇಂದು ಮುಂಜಾನೆ ಹನುಮಾನ್ ಗರ್ಹಿ ದೇಗುಲಕ್ಕೆ ಭೇಟಿ ನೀಡಿದ ಅವರು, ಈ ದಿನ (ಆಗಸ್ಟ್ 05) ಐತಿಹಾಸಿಕ ದಿನ ಮತ್ತು ಮುಂದಿನ ತಲೆಮಾರುಗಳು ಬಹಳ ಹೆಮ್ಮೆಯಿಂದ ಈ ದಿನವನ್ನು ನೆನಪಿಸಿಕೊಳ್ಳುತ್ತವೆ ಎಂದು ತಿಳಿಸಿದರು.
'ಇದು ಎಲ್ಲಾ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳ ಅತಿಕ್ರಮಣದ ಅಂತ್ಯವಾಗಿರುತ್ತದೆ. ರಾಮ ದೇವಾಲಯದ ಸ್ಥಾಪನೆಯು ದೇಶದಲ್ಲಿ ಹೊಸ ಸಂಸ್ಕೃತಿಯನ್ನು ಪ್ರಾರಂಭಿಸುತ್ತದೆ' ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಕುರಿತಂತೆ ಪ್ರಶ್ನಿಸಿದ್ದಕ್ಕೆ, 'ರಾಮ ಮತ್ತು ಹನುಮನ 'ಭಕ್ತ'ನಾಗಿರುವ ಒಬ್ಬ ಪ್ರಧಾನಿಯನ್ನು ನಾವು ಹೊಂದಿದ್ದೇವೆ. ಇದು ನಮ್ಮ ದೇಶದ ಅದೃಷ್ಟ. ಹಿಂದೂ ಧರ್ಮವನ್ನು ಹೆಮ್ಮೆಪಡುವಂತೆ ಮಾಡಿದವರು ನಮ್ಮ ಪ್ರಧಾನಿ' ಎಂದರು.
ಈಮಧ್ಯೆ, ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಭದ್ರತೆ ಮತ್ತು ಕೋವಿಡ್-19 ಶಿಷ್ಟಾಚಾರವನ್ನು ಅನುಸರಿಸಲಾಗುತ್ತಿದೆ. ಬುಧವಾರ ರಾಮ ಮಂದಿರದ ದೇವಾಲಯದ ಭೂಮಿಪೂಜೆ ಸಮಾರಂಭಕ್ಕೂ ಮುನ್ನ ಪ್ರಧಾನಿ ಮೋದಿ ಗರ್ಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.