<p><strong>ಅಯೋಧ್ಯೆ: </strong>ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಪೂಜಾ ಕಾರ್ಯಗಳು ವಿಳಂಬವಾಗಿವೆ. ಇಂದು (ಸೋಮವಾರ) ನಡೆಯಬೇಕಿದ್ದ ‘ನಿಶಾನ್ ಪೂಜೆ’ ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ರಾಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಸದಸ್ಯ ಡಾ. ಅನಿಲ್ ಮಿಶ್ರಾ ತಿಳಿಸಿರುವುದಾಗಿ ‘<em><strong>ಝೀ ನ್ಯೂಸ್</strong></em>’ ವರದಿ ಮಾಡಿದೆ.</p>.<p>ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭೇಟಿ ಹಠಾತ್ ಮುಂದೂಡಿಕೆಯಾಗಿರುವುದರಿಂದ ಪೂಜೆಯನ್ನೂ ಮುಂದಕ್ಕೆ ಹಾಕಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.</p>.<p>‘ಭಗವಾನ್ ರಾಮನಿಗೆ ಸಂಬಂಧಿಸಿ ಏನೇ ಕೆಲಸ ಆರಂಭಿಸುವುದಿದ್ದರೂ ಅದಕ್ಕೂ ಮುನ್ನ ‘ಹನುಮಾನ್’ಗೆ ನಿಶಾನ್ ಪೂಜೆ ಸಲ್ಲಿಸಬೇಕೆಂಬ ನಂಬಿಕೆ ಭಕ್ತರಲ್ಲಿ ಬಲವಾಗಿದೆ. ಹೀಗಾಗಿ ರಾಮಮಂದಿರ ನಿರ್ಮಾಣದಲ್ಲಿ ಇದು ಬಹಳ ಮುಖ್ಯ’ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p>ಉತ್ತರ ಪ್ರದೇಶದ ಸಚಿವೆ ಕಮಲಾ ರಾಣಿ ವರುಣ್ ಅವರು ಕೊರೊನಾ ವೈರಸ್ ಸೋಂಕಿನಿಂದಾಗಿ ಭಾನುವಾರ ಮೃತಪಟ್ಟಿದ್ದರು. ಹೀಗಾಗಿ ಯೋಗಿ ಆದಿತ್ಯನಾಥ್ ಅವರ ಅಯೋಧ್ಯೆ ಭೇಟಿ ಮುಂದೂಡಲಾಗಿತ್ತು.</p>.<p>ಈ ಮಧ್ಯೆ, ರಾಮಮಂದಿರ ಭೂಮಿಪೂಜೆಗೆ ಅಯೋಧ್ಯೆಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/india-news/up-minister-kamal-rani-varun-dies-was-admitted-to-hospital-due-to-covid-19-750104.html" itemprop="url">ಉತ್ತರಪ್ರದೇಶ: ಸಚಿವೆ ಕಮಲಾ ರಾಣಿ ವರುಣ್ ಕೊರೊನಾ ಸೋಂಕಿನಿಂದ ಸಾವು</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಯೋಧ್ಯೆ: </strong>ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಪೂಜಾ ಕಾರ್ಯಗಳು ವಿಳಂಬವಾಗಿವೆ. ಇಂದು (ಸೋಮವಾರ) ನಡೆಯಬೇಕಿದ್ದ ‘ನಿಶಾನ್ ಪೂಜೆ’ ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ರಾಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಸದಸ್ಯ ಡಾ. ಅನಿಲ್ ಮಿಶ್ರಾ ತಿಳಿಸಿರುವುದಾಗಿ ‘<em><strong>ಝೀ ನ್ಯೂಸ್</strong></em>’ ವರದಿ ಮಾಡಿದೆ.</p>.<p>ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭೇಟಿ ಹಠಾತ್ ಮುಂದೂಡಿಕೆಯಾಗಿರುವುದರಿಂದ ಪೂಜೆಯನ್ನೂ ಮುಂದಕ್ಕೆ ಹಾಕಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.</p>.<p>‘ಭಗವಾನ್ ರಾಮನಿಗೆ ಸಂಬಂಧಿಸಿ ಏನೇ ಕೆಲಸ ಆರಂಭಿಸುವುದಿದ್ದರೂ ಅದಕ್ಕೂ ಮುನ್ನ ‘ಹನುಮಾನ್’ಗೆ ನಿಶಾನ್ ಪೂಜೆ ಸಲ್ಲಿಸಬೇಕೆಂಬ ನಂಬಿಕೆ ಭಕ್ತರಲ್ಲಿ ಬಲವಾಗಿದೆ. ಹೀಗಾಗಿ ರಾಮಮಂದಿರ ನಿರ್ಮಾಣದಲ್ಲಿ ಇದು ಬಹಳ ಮುಖ್ಯ’ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p>ಉತ್ತರ ಪ್ರದೇಶದ ಸಚಿವೆ ಕಮಲಾ ರಾಣಿ ವರುಣ್ ಅವರು ಕೊರೊನಾ ವೈರಸ್ ಸೋಂಕಿನಿಂದಾಗಿ ಭಾನುವಾರ ಮೃತಪಟ್ಟಿದ್ದರು. ಹೀಗಾಗಿ ಯೋಗಿ ಆದಿತ್ಯನಾಥ್ ಅವರ ಅಯೋಧ್ಯೆ ಭೇಟಿ ಮುಂದೂಡಲಾಗಿತ್ತು.</p>.<p>ಈ ಮಧ್ಯೆ, ರಾಮಮಂದಿರ ಭೂಮಿಪೂಜೆಗೆ ಅಯೋಧ್ಯೆಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/india-news/up-minister-kamal-rani-varun-dies-was-admitted-to-hospital-due-to-covid-19-750104.html" itemprop="url">ಉತ್ತರಪ್ರದೇಶ: ಸಚಿವೆ ಕಮಲಾ ರಾಣಿ ವರುಣ್ ಕೊರೊನಾ ಸೋಂಕಿನಿಂದ ಸಾವು</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>