ನವದೆಹಲಿ: ‘ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ನಾಶ ಹೊಂದಿದ್ದು, ದೊಡ್ಡ ದೊಡ್ಡ ಕಂಪನಿಗಳು ತೀವ್ರ ಒತ್ತಡದಲ್ಲಿವೆ. ಇದಕ್ಕೆ ಕೇಂದ್ರದ ಬಿಜೆಪಿ ಸರ್ಕಾರವೇ ಕಾರಣ ಎಂದುಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬುಧವಾರ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಮುಂದಿನ ಹಣಕಾಸು ವರ್ಷದಲ್ಲಿಅಗ್ರ 500 ಖಾಸಗಿ ಕಂಪನಿಗಳ ವಸೂಲಾಗದ ಸಾಲ ಮೊತ್ತ ₹1.67 ಲಕ್ಷದಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ ಎನ್ನುವ ಮಾಧ್ಯಮ ವರದಿವೊಂದನ್ನು ಉಲ್ಲೇಖಿಸಿದ್ದಾರೆ.
‘ಕೋವಿಡ್–19 ಹಿನ್ನೆಲೆಯಲ್ಲಿ ಕೆಲವು ತಿಂಗಳಿನಿಂದ ‘ಆರ್ಥಿಕ ಸುನಾಮಿ’ ಬರಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಾ ಬಂದಿದ್ದೆ. ವಸೂಲಾಗದ ಸಾಲದ (ಎನ್ಪಿಎ) ಕುರಿತೂ ಎಚ್ಚರಿಸಿದ್ದೆ. ಆಗ ಬಿಜೆಪಿ ಹಾಗೂ ಮಾಧ್ಯಮನನ್ನನ್ನು ಅಪಹಾಸ್ಯ ಮಾಡಿತು’ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
Small & medium enterprises stand destroyed. Large companies are under severe stress. Banks are in distress.
I stated months ago that an economic tsunami was coming and was ridiculed by BJP and the Media for warning the country about the truth. pic.twitter.com/t901bUlp9Z