ಲಖನೌ:ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು (ಯುಪಿಎಸ್ಆರ್ಟಿಸಿ) ‘ರಕ್ಷಾ ಬಂಧನ್’ ದಿನದಂದು ತನ್ನ ಎಲ್ಲ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ.
ಈ ನಿರ್ಧಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಘೋಷಿಸಿದ್ದು, ಉಚಿತ ಪ್ರಯಾಣ ಸೌಲಭ್ಯವು ಆಗಸ್ಟ್ 2ರ (ಭಾನುವಾರ) ಮಧ್ಯರಾತ್ರಿಯಿಂದ ಆಗಸ್ಟ್ 3ರ (ಸೋಮವಾರ) ಮಧ್ಯರಾತ್ರಿವರೆಗೆ ಜಾರಿಯಲ್ಲಿರಲಿದೆ.
ಆಚರಣೆಸಲುವಾಗಿರಾಖಿ ಹಾಗೂ ಸಿಹಿತಿಂಡಿಮಾರಾಟ ಮಳಿಗೆಗಳು ಭಾನುವಾರ ತೆರೆದಿರುತ್ತವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಗಸ್ತು ಕಾರ್ಯಾಚರಣೆ ಹೆಚ್ಚಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.
ಈ ವರ್ಷ ಆಗಸ್ಟ್ 3 ರಂದು ‘ರಕ್ಷಾ ಬಂಧನ್’ ಆಚರಿಸಲಾಗುತ್ತಿದೆ.