ಈ ಹೇಳಿಕೆಯನ್ನು ನವದೆಹಲಿಯಲ್ಲಿ ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಬಿಜಯ್ ಸೋನ್ಕರ್ ಶಾಸ್ತ್ರಿ, ಎಡಪಕ್ಷಗಳು ಭಾರತದಲ್ಲಿ ಕೂಡ ಜನರ ನಂಬಿಕೆಯೊಂದಿಗೆ ಚೆಲ್ಲಾಟವಾಡಿವೆ. ಭಾರತದಲ್ಲಿ ಆಗಿರುವಂತೆ ನೇಪಾಳದಲ್ಲಿ ಕೂಡ ಕಮ್ಯುನಿಸ್ಟ್ ಪಕ್ಷದವರು ಜನರಿಂದ ತಿರಸ್ಕಾರಕ್ಕೆ ಒಳಗಾಗಲಿದ್ದಾರೆ ಎಂದು ಹೇಳಿದ್ದಾರೆ.