‘ಲಕ್ಷಾಂತರ ಕ್ಯುಸೆಕ್ ನೀರನ್ನು ನೇಪಾಳವು ಅಣೆಕಟ್ಟೆಗಳಿಂದ ಬಿಟ್ಟಿದ್ದು, ಕನಿಷ್ಠ 61 ಹಳ್ಳಿಗಳು ಮುಳುಗಡೆಯಾಗಿವೆ. ಕೇಸರ್ಗಂಜ್, ಮಹ್ಸಿ ಮತ್ತು ಮಹಿಪೂರ್ವ ತಾಲ್ಲೂಕುಗಳ ಹಳ್ಳಿಗಳಲ್ಲಿ 1.50 ಲಕ್ಷಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಈ ಪೈಕಿ ಏಳು ಹಳ್ಳಿಗಳಲ್ಲಿ ಪರಿಸ್ಥಿತಿ ತೀವ್ರ ಗಂಭೀರವಾಗಿದೆ. ಜಿಲ್ಲಾಡಳಿತವು ಸಂತ್ರಸ್ತರಿಗೆ ನೆರವು ನೀಡುತ್ತಿದ್ದು, ರಕ್ಷಣಾ ಚಟುವಟಿಕೆಗಾಗಿ ಒಂದು ಮೋಟಾರ್ ಬೋಟ್, 179 ದೋಣಿ ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ, 48 ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಜೈ ಚಂದ್ರ ಪಾಂಡೆ ತಿಳಿಸಿದರು.