ಸುಶಾಂತ್ ಅಪಾಯದಲ್ಲಿದ್ದಾನೆ ಎಂದು ನಾನು ಫೆ. 25ರಂದು ಬಾಂದ್ರಾ ಪೊಲೀಸರಿಗೆ ದೂರು ನೀಡಿದೆ. ಜೂನ್ 14ರಂದು ಆತ ಸಾವಿಗೀಡಾದ. ಫೆ. 25ರ ದೂರಿನಲ್ಲಿ ನಾನು ಉಲ್ಲೇಖಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಮನವಿ ಮಾಡಿದ್ದೆ. ಸುಶಾಂತ್ ಸತ್ತು 40 ದಿನಗಳ ನಂತರವೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾನು ಪಾಟ್ನಾದಲ್ಲಿ ಎಫ್ಐಆರ್ ದಾಖಲು ಮಾಡಿದೆ,’ ಎಂದು ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ ಸಿಂಗ್ ಹೇಳಿದ್ದಾರೆ.