ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗ ಅಪಾಯದಲ್ಲಿರುವುದಾಗಿ ಫೆ. 25ರಂದೇ ದೂರು ನೀಡಿದ್ದೆ: ಸುಶಾಂತ್‌ ತಂದೆ ಮಾಹಿತಿ

Last Updated 3 ಆಗಸ್ಟ್ 2020, 13:02 IST
ಅಕ್ಷರ ಗಾತ್ರ

ಪಾಟ್ನಾ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅಪಾಯದಲ್ಲಿರುವುದಾಗಿ ಫೆ. 25ರಂದೇ ದೂರು ನೀಡಿದ್ದೆ ಎಂದು ತಂದೆ ಕೆ.ಕೆ ಸಿಂಗ್‌ ಮಾಹಿತಿ ನೀಡಿದ್ದಾರೆ.

ಈ ಕುರಿತು ವಿಡಿಯೊ ಬಿಡುಗಡೆ ಮಾಡಿರುವ ಅವರು, ಸುಶಾಂತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಪಾಟ್ನಾದಲ್ಲಿ ಪ್ರತ್ಯೇಕ ದೂರು ನೀಡಿದ್ದು ಏಕೆಂಬುದರ ಬಗ್ಗೆ ತಿಳಿಸಿದ್ದಾರೆ.

ಸುಶಾಂತ್‌ ಅಪಾಯದಲ್ಲಿದ್ದಾನೆ ಎಂದು ನಾನು ಫೆ. 25ರಂದು ಬಾಂದ್ರಾ ಪೊಲೀಸರಿಗೆ ದೂರು ನೀಡಿದೆ. ಜೂನ್‌ 14ರಂದು ಆತ ಸಾವಿಗೀಡಾದ. ಫೆ. 25ರ ದೂರಿನಲ್ಲಿ ನಾನು ಉಲ್ಲೇಖಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಮನವಿ ಮಾಡಿದ್ದೆ. ಸುಶಾಂತ್‌ ಸತ್ತು 40 ದಿನಗಳ ನಂತರವೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾನು ಪಾಟ್ನಾದಲ್ಲಿ ಎಫ್‌ಐಆರ್‌ ದಾಖಲು ಮಾಡಿದೆ,’ ಎಂದು ಸುಶಾಂತ್‌ ಸಿಂಗ್‌ ರಜಪೂತ್‌ ಅವರ ತಂದೆ ಕೆ.ಕೆ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT