<p><strong>ಮುಂಬೈ:</strong> ‘ನಿಜವಾದ ಅಯೋಧ್ಯೆ ಭಾರತದಲ್ಲಿಲ್ಲ, ನೇಪಾಳದಲ್ಲಿ ಇದೆ’ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೀಡಿರುವ ಹೇಳಿಕೆಯನ್ನು ಶಿವಸೇನೆ ಟೀಕಿಸಿದೆ. ‘ಇನ್ನು ಕೆಲವೇ ದಿನಗಳಲ್ಲಿ ಮೊಘಲ್ ಸುಲ್ತಾನ ಬಾಬರ್ ಕೂಡ ನೇಪಾಳದವರು ಅಂತ ಅವರು ಪ್ರತಿಪಾದಿಸಬಹುದು’ ಎಂದು ಶಿವಸೇನೆ ವ್ಯಂಗ್ಯವಾಡಿದೆ.</p>.<p>‘ರಾಮ ಜಗತ್ತಿಗೆ ಸೇರಿದವರು. ಆದರೆ, ಅವರ ಜನ್ಮಸ್ಥಳ ಅಯ್ಯೋಧ್ಯೆ. ಇದು ಭಾರತದಲ್ಲಿದೆ’ ಎಂದು ಪಕ್ಷದ ಮುಖವಾಣಿಯಾಗಿರುವ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.</p>.<p>‘ನೇಪಾಳವು ಚೀನಾದ ಕೈಗೊಂಬೆಯಾಗಿದೆ. ಚೀನಾದೊಂದಿಗೆ ನಿಕಟವಾಗುತ್ತಿದ್ದಂತೆ ಭಾರತ ಮತ್ತು ನೇಪಾಳದ ನಡುವಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಒಲಿ ಅವರು ಮರೆತಿದ್ದಾರೆ’ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.</p>.<p>‘ಸರಯೂ ನದಿ ಹರಿಯುತ್ತಿರುವುದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿಯೇ ಹೊರತು ನೇಪಾಳದಲ್ಲಿ ಅಲ್ಲ. ಈ ಬಗ್ಗೆಪುರಾಣದಲ್ಲೂ ವಿಸ್ತಾರವಾಗಿ ಹೇಳಲಾಗಿದೆ. ಕಳೆದ 70–75 ವರ್ಷದಿಂದ ಅಯೋಧ್ಯೆ ಭಾರತದಲ್ಲೇ ಇದೆ. ರಾಮನ ಜನ್ಮ ಸ್ಥಳ ನೇಪಾಳವಾದರೆ ಈ ಬಗ್ಗೆ ಪುರಾವೆಗಳನ್ನು ನೀಡಲು ಒಲಿ ಯಾಕೆ ಇಷ್ಟೊಂದು ಸಮಯ ತೆಗೆದುಕೊಂಡರು’ ಎಂದು ಪ್ರಶ್ನಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ‘ನಿಜವಾದ ಅಯೋಧ್ಯೆ ಭಾರತದಲ್ಲಿಲ್ಲ, ನೇಪಾಳದಲ್ಲಿ ಇದೆ’ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೀಡಿರುವ ಹೇಳಿಕೆಯನ್ನು ಶಿವಸೇನೆ ಟೀಕಿಸಿದೆ. ‘ಇನ್ನು ಕೆಲವೇ ದಿನಗಳಲ್ಲಿ ಮೊಘಲ್ ಸುಲ್ತಾನ ಬಾಬರ್ ಕೂಡ ನೇಪಾಳದವರು ಅಂತ ಅವರು ಪ್ರತಿಪಾದಿಸಬಹುದು’ ಎಂದು ಶಿವಸೇನೆ ವ್ಯಂಗ್ಯವಾಡಿದೆ.</p>.<p>‘ರಾಮ ಜಗತ್ತಿಗೆ ಸೇರಿದವರು. ಆದರೆ, ಅವರ ಜನ್ಮಸ್ಥಳ ಅಯ್ಯೋಧ್ಯೆ. ಇದು ಭಾರತದಲ್ಲಿದೆ’ ಎಂದು ಪಕ್ಷದ ಮುಖವಾಣಿಯಾಗಿರುವ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.</p>.<p>‘ನೇಪಾಳವು ಚೀನಾದ ಕೈಗೊಂಬೆಯಾಗಿದೆ. ಚೀನಾದೊಂದಿಗೆ ನಿಕಟವಾಗುತ್ತಿದ್ದಂತೆ ಭಾರತ ಮತ್ತು ನೇಪಾಳದ ನಡುವಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಒಲಿ ಅವರು ಮರೆತಿದ್ದಾರೆ’ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.</p>.<p>‘ಸರಯೂ ನದಿ ಹರಿಯುತ್ತಿರುವುದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿಯೇ ಹೊರತು ನೇಪಾಳದಲ್ಲಿ ಅಲ್ಲ. ಈ ಬಗ್ಗೆಪುರಾಣದಲ್ಲೂ ವಿಸ್ತಾರವಾಗಿ ಹೇಳಲಾಗಿದೆ. ಕಳೆದ 70–75 ವರ್ಷದಿಂದ ಅಯೋಧ್ಯೆ ಭಾರತದಲ್ಲೇ ಇದೆ. ರಾಮನ ಜನ್ಮ ಸ್ಥಳ ನೇಪಾಳವಾದರೆ ಈ ಬಗ್ಗೆ ಪುರಾವೆಗಳನ್ನು ನೀಡಲು ಒಲಿ ಯಾಕೆ ಇಷ್ಟೊಂದು ಸಮಯ ತೆಗೆದುಕೊಂಡರು’ ಎಂದು ಪ್ರಶ್ನಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>