ಸಿಂಗಪುರ: ಇಲ್ಲಿನ ಮರಿಯಮ್ಮನ ದೇವಾಲಯದ ಪ್ರಧಾನ ಅರ್ಚಕರನ್ನು ಸಿಂಗಪುರ ಪೊಲೀಸರು ಬಂಧಿಸಿದ್ದಾರೆ.
ಪ್ರಧಾನ ಅರ್ಚಕರ ಸುಪರ್ದಿಯಲ್ಲಿದ್ದ ಕೆಲ ಚಿನ್ನಾಭರಣಗಳು ನಾಪತ್ತೆಯಾಗಿದ್ದರಿಂದ ದೇವಸ್ಥಾನದ ಆಡಳಿತ ಮಂಡಳಿ ದೂರು ಸಲ್ಲಿಸಿತ್ತು.
ಪೂಜೆಯ ಸಮಯದಲ್ಲಿ ದೇವಿಯ ಶೃಂಗಾರಕ್ಕೆ ಚಿನ್ನಾಭರಣಗಳನ್ನು ಬಳಸಲಾಗುತ್ತದೆ. ಹಾಗಾಗಿ ಈ ಆಭರಣಗಳನ್ನು ಪ್ರಧಾನ ಅರ್ಚಕರಿಗೆ ನೀಡಲಾಗಿತ್ತು. ಆದರೆ, ಪರಿಶೀಲನೆ ಸಂದರ್ಭದಲ್ಲಿ ಕೆಲವು ಆಭರಣಗಳು ನಾಪತ್ತೆಯಾಗಿರುವುದು ತಿಳಿದು ಬಂದಿತ್ತು.
‘ಈ ಪ್ರಕರಣದ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಧಾನ ಅರ್ಚಕರು ತಪ್ಪೊಪ್ಪಿಕೊಂಡಿದ್ದು, ನಾಪತ್ತೆಯಾಗಿದ್ದ ಚಿನ್ನಾಭರಣವನ್ನು ಹಿಂತಿರುಗಿಸದ್ದಾರೆ. ಈ ಪ್ರಕರಣದಲ್ಲಿ ಮತ್ತೊಬ್ಬರು ಭಾಗಿಯಾಗಿಲ್ಲ’ ಎಂದು ಮರಿಯಮ್ಮನ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.