‘ಕಾನೂನುಬದ್ಧ ವಾರಸುದಾರರನ್ನಾಗಿ ನ್ಯಾಯಾಲಯ ಘೋಷಿಸಿದೆ. ಹೀಗಿರುವಾಗ ಈ ರೀತಿಯ ಕ್ರಮ ತೆಗೆದುಕೊಳ್ಳಲು ಅವರ್ಯಾರು. ಸರ್ಕಾರ ಸ್ವಾಧೀನ ಪ್ರಕ್ರಿಯೆಯನ್ನು ಸರಿಯಾದ ರೀತಿಯಲ್ಲಿ ಮಾಡಿಲ್ಲ. ಎಲ್ಲಾ ಬಾಕಿಗಳನ್ನು ಪಾವತಿಸಲು ನಾವು ತಯಾರಿದ್ದೇವೆ. ಅದು ದೊಡ್ಡ ಬಂಗಲೆ ಎಂದು ನಾನು ಹೋರಾಟ ನಡೆಸುತ್ತಿಲ್ಲ. ಅದು ಗುಡಿಸಲಾಗಿದ್ದರೂ, ನಾನು ಇದೇ ರೀತಿ ನಡೆದುಕೊಳ್ಳುತ್ತಿದ್ದೆ. ಏಕೆಂದರೆ, ಅಲ್ಲಿ ನಮ್ಮ ಪೂರ್ವಜರ ನೆನಪುಗಳಿವೆ’ ಎಂದು ದೀಪಾ ಹೇಳಿದ್ದಾರೆ.