<p><strong>ನವದೆಹಲಿ: </strong>ಕೋವಿಡ್–19 ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಅಗತ್ಯವಿರುವವರಿಗೆ ವಾರಾಣಸಿಯ ಜನರು, ಅಧಿಕಾರಿಗಳು ಮತ್ತು ಎನ್ಜಿಒಗಳು ನೀಡಿದ ಕೊಡುಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ರೋಗ ಹರಡದಂತೆ ತಡೆಯಲು ಮಾರ್ಗಸೂಚಿಗಳನ್ನು ಜನರು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದೂ ಒತ್ತಾಯಿಸಿದರು.</p>.<p>ವಾರಾಣಸಿ ಮೂಲದ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು ಕಾಶಿಯುಕೊರೊನಾ ಸೋಂಕು ಹರಡುವುದನ್ನು ತೀವ್ರವಾಗಿ ನಿಯಂತ್ರಿಸಿದೆ ಎಂದರು.</p>.<p>ಕಾಶಿಯೆಂದೇ ಕರೆಯಲಾಗುವ ವಾರಾಣಸಿ, ಪ್ರಧಾನಿ ಅವರ ಸಂಸದೀಯ ಕ್ಷೇತ್ರವೂ ಆಗಿದೆ.</p>.<p>ಸುಮಾರು 24 ಕೋಟಿ ಜನಸಂಖ್ಯೆ ಇರುವ ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕು ತ್ವರಿತವಾಗಿ ಹರಡುವುದನ್ನು ನಿಯಂತ್ರಿಸಲಾಗಿದೆ. ಸೋಂಕಿತರಾದವರು ಕೂಡ ಬೇಗನೇ ಗುಣಮುಖರಾಗುತ್ತಿದ್ದಾರೆ ಎಂದೂ ಹೇಳಿದರು.</p>.<p>ಬಹುತೇಕ ಇಷ್ಟೇ ಜನಸಂಖ್ಯೆ ಇರುವ ಬ್ರೆಜಿಲ್ನಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ. ಆದರೆ ಉತ್ತರಪ್ರದೇಶದಲ್ಲಿ ಸಾವಿನ ಪ್ರಮಾಣ 800ರ ಸಮೀಪ ಬಂದಿದೆ ಎಂದರು.</p>.<p>ಮುಂಬರುವ ದಿನಗಳಲ್ಲಿ ವಾರಾಣಸಿ‘ಆತ್ಮನಿರ್ಭರ್ ಭಾರತ್’ ಅಭಿಯಾನದ ಮುಖ್ಯ ಕೇಂದ್ರವಾಗಿ ಮತ್ತು ರಫ್ತು ಕೇಂದ್ರವಾಗಿಯೂ ಹೊರಹೊಮ್ಮಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೋವಿಡ್–19 ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಅಗತ್ಯವಿರುವವರಿಗೆ ವಾರಾಣಸಿಯ ಜನರು, ಅಧಿಕಾರಿಗಳು ಮತ್ತು ಎನ್ಜಿಒಗಳು ನೀಡಿದ ಕೊಡುಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ರೋಗ ಹರಡದಂತೆ ತಡೆಯಲು ಮಾರ್ಗಸೂಚಿಗಳನ್ನು ಜನರು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದೂ ಒತ್ತಾಯಿಸಿದರು.</p>.<p>ವಾರಾಣಸಿ ಮೂಲದ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು ಕಾಶಿಯುಕೊರೊನಾ ಸೋಂಕು ಹರಡುವುದನ್ನು ತೀವ್ರವಾಗಿ ನಿಯಂತ್ರಿಸಿದೆ ಎಂದರು.</p>.<p>ಕಾಶಿಯೆಂದೇ ಕರೆಯಲಾಗುವ ವಾರಾಣಸಿ, ಪ್ರಧಾನಿ ಅವರ ಸಂಸದೀಯ ಕ್ಷೇತ್ರವೂ ಆಗಿದೆ.</p>.<p>ಸುಮಾರು 24 ಕೋಟಿ ಜನಸಂಖ್ಯೆ ಇರುವ ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕು ತ್ವರಿತವಾಗಿ ಹರಡುವುದನ್ನು ನಿಯಂತ್ರಿಸಲಾಗಿದೆ. ಸೋಂಕಿತರಾದವರು ಕೂಡ ಬೇಗನೇ ಗುಣಮುಖರಾಗುತ್ತಿದ್ದಾರೆ ಎಂದೂ ಹೇಳಿದರು.</p>.<p>ಬಹುತೇಕ ಇಷ್ಟೇ ಜನಸಂಖ್ಯೆ ಇರುವ ಬ್ರೆಜಿಲ್ನಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ. ಆದರೆ ಉತ್ತರಪ್ರದೇಶದಲ್ಲಿ ಸಾವಿನ ಪ್ರಮಾಣ 800ರ ಸಮೀಪ ಬಂದಿದೆ ಎಂದರು.</p>.<p>ಮುಂಬರುವ ದಿನಗಳಲ್ಲಿ ವಾರಾಣಸಿ‘ಆತ್ಮನಿರ್ಭರ್ ಭಾರತ್’ ಅಭಿಯಾನದ ಮುಖ್ಯ ಕೇಂದ್ರವಾಗಿ ಮತ್ತು ರಫ್ತು ಕೇಂದ್ರವಾಗಿಯೂ ಹೊರಹೊಮ್ಮಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>