ಈ ಸಾಂಕ್ರಾಮಿಕ ಕಾಯಿಲೆಯು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆವೊಡ್ಡಲಿದೆ. ಇದರಿಂದ, ಹಿಂಸಾಚಾರಕ್ಕೆ ದಾರಿಯಾಗಲಿದೆ. ಜತೆಗೆ, ಈ ರೀತಿಯ ಕಾಯಿಲೆ ತಡೆಯಲು ಸನ್ನದ್ಧರಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಸಿದ್ಧತೆಗಳ ಕೊರತೆಯನ್ನು ಇದು ತೋರಿಸಿಕೊಟ್ಟಿದೆ. ಇದರಿಂದ, ಜೈವಿಕ ದಾಳಿಗೆ ದಾರಿ ಮಾಡಿಕೊಡಲಿದೆ. ದುಷ್ಕೃತ್ಯದಲ್ಲಿ ತೊಡಗಿರುವ ಕೆಲವು ಸಂಘಟನೆಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ಜಾಗತಿಕವಾಗಿ ಹಾನಿ ಮಾಡುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದರು.