‘ತಪ್ಪೆಗಿಸಿದವರು ಮತ್ತು ಅವರನ್ನು ಬೆಂಬಲಿಸಿದವರಿಗೆ ಧೈರ್ಯದಿಂದ ಪಾಠ ಕಲಿಸಲು ಕೋಪೋದ್ರಿಕ್ತ ಜನರ ಮನಸ್ಸು ಬಯಸುತ್ತದೆ’ ಎಂದು ಹೇಳಿರುವ ಉತ್ತರ ಕೊರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಸೆಂಟ್ರಲ್ ನ್ಯೂಸ್ ಏಜೆನ್ಸಿ,ಕಚೇರಿ ಧ್ವಂಸ ಮಾಡಿರುವ ಘಟನೆಯನ್ನು ಖಚಿತಪಡಿಸಿದೆ. ಗಡಿಯಲ್ಲಿ ಉತ್ತರ ಕೊರಿಯಾ ವಿರೋಧಿ ಕರಪತ್ರಗಳನ್ನು ಹಂಚಿಸುತ್ತಿರುವ ದಕ್ಷಿಣ ಕೊರಿಯಾದ ಚಿತಾವಣೆಯನ್ನು ಈ ಮೂಲಕ ಪರೋಕ್ಷವಾಗಿ ಉಲ್ಲೇಖಿಸಿದೆ.