<p><strong>ಲಾಹೋರ್ :</strong>20 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸೇನೆ ಸೋಮವಾರ ವಾಘಾ ಗಡಿಯಲ್ಲಿ ಬಿಎಸ್ಎಫ್ಗೆ ಹಸ್ತಾಂತರಿಸಿದೆ.</p>.<p>ಎರಡೂ ರಾಷ್ಟ್ರಗಳ ಸಂಬಂಧಗಳು ನನೆಗುದಿಗೆ ಬಿದ್ದಿದ್ದ ವೇಳೆ ಮೀನುಗಾರರ ಬಿಡುಗಡೆ ಉತ್ತಮ ಬೆಳವಣಿಗೆ ಎಂದು ಮಾಧ್ಯಮಗಳು ಬಣ್ಣಿಸಿವೆ. ಮೀನುಗಾರರು ಸಿಂಧ್ ಪ್ರಾಂತ್ಯದ ಮಲೀರ್ ಜಿಲ್ಲಾ ಜೈಲಿನಲ್ಲಿ ಬಂಧಿಯಾಗಿದ್ದರು. ಅವರನ್ನು ಭಾನುವಾರ ಬಿಡುಗಡೆಗೊಳಿಸಿ ಲಾಹೋರ್ಗೆರೈಲಿನಲ್ಲಿ ಕರೆತರಲಾಗಿತ್ತು.</p>.<p>ಸ್ವಯಂಸೇವಾ ಸಂಸ್ಥೆ ‘ಈಧೀ ಫೌಂಡೇಶನ್’ ಲಾಹೋರ್ ರೈಲು ನಿಲ್ದಾಣದಲ್ಲಿ ಬಿಡುಗಡೆಗೊಂಡವರನ್ನು ಬರಮಾಡಿಕೊಂಡಿತು. ಅಲ್ಲದೆ, ಅವರಿಗೆ ಹೊಸ ಉಡುಗೆಗಳನ್ನು ನೀಡಿ ಸತ್ಕರಿಸಿತು.</p>.<p>‘ಬಿಡುಗಡೆಗೊಂಡವರಲ್ಲಿ ಬಹುತೇಕರು ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ.‘ಜಲಗಡಿಯನ್ನು ದಾಟಿದ್ದರಿಂದಾಗಿ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆ 2018ರಲ್ಲಿ ನಮ್ಮನ್ನು ಬಂಧಿಸಿತ್ತು’ ಎಂದುಮೀನುಗಾರ ಗಿರ್ ಸೋಮನಾಥ್ ಹೇಳಿದ್ದಾರೆ.</p>.<p>‘ಗಡಿಯನ್ನು ಪ್ರವೇಶಿಸಿದ್ದರಿಂದ 6 ತಿಂಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಬಂಧಿತರ ದಾಖಲೆ ಪತ್ರಗಳ ಸಾಬೀತಿಗೆ ಆದ ವಿಳಂಬ ಮತ್ತು ಇತರ ಕಾರಣಗಳಿಗಾಗಿ ಬಿಡುಗಡೆ ತಡವಾಗಿದೆ’ ಎಂದು ಜೈಲು ಅಧೀಕ್ಷಕ ಔರಂಗ್ಜೇಬ್ ಕಂಗೋ ತಿಳಿಸಿದ್ದಾರೆ.ಜೈಲಿನಲ್ಲಿ ಇನ್ನೂ 200 ಮಂದಿ ಭಾರತೀಯ ಮೀನುಗಾರರು ಇದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಾಹೋರ್ :</strong>20 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸೇನೆ ಸೋಮವಾರ ವಾಘಾ ಗಡಿಯಲ್ಲಿ ಬಿಎಸ್ಎಫ್ಗೆ ಹಸ್ತಾಂತರಿಸಿದೆ.</p>.<p>ಎರಡೂ ರಾಷ್ಟ್ರಗಳ ಸಂಬಂಧಗಳು ನನೆಗುದಿಗೆ ಬಿದ್ದಿದ್ದ ವೇಳೆ ಮೀನುಗಾರರ ಬಿಡುಗಡೆ ಉತ್ತಮ ಬೆಳವಣಿಗೆ ಎಂದು ಮಾಧ್ಯಮಗಳು ಬಣ್ಣಿಸಿವೆ. ಮೀನುಗಾರರು ಸಿಂಧ್ ಪ್ರಾಂತ್ಯದ ಮಲೀರ್ ಜಿಲ್ಲಾ ಜೈಲಿನಲ್ಲಿ ಬಂಧಿಯಾಗಿದ್ದರು. ಅವರನ್ನು ಭಾನುವಾರ ಬಿಡುಗಡೆಗೊಳಿಸಿ ಲಾಹೋರ್ಗೆರೈಲಿನಲ್ಲಿ ಕರೆತರಲಾಗಿತ್ತು.</p>.<p>ಸ್ವಯಂಸೇವಾ ಸಂಸ್ಥೆ ‘ಈಧೀ ಫೌಂಡೇಶನ್’ ಲಾಹೋರ್ ರೈಲು ನಿಲ್ದಾಣದಲ್ಲಿ ಬಿಡುಗಡೆಗೊಂಡವರನ್ನು ಬರಮಾಡಿಕೊಂಡಿತು. ಅಲ್ಲದೆ, ಅವರಿಗೆ ಹೊಸ ಉಡುಗೆಗಳನ್ನು ನೀಡಿ ಸತ್ಕರಿಸಿತು.</p>.<p>‘ಬಿಡುಗಡೆಗೊಂಡವರಲ್ಲಿ ಬಹುತೇಕರು ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ.‘ಜಲಗಡಿಯನ್ನು ದಾಟಿದ್ದರಿಂದಾಗಿ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆ 2018ರಲ್ಲಿ ನಮ್ಮನ್ನು ಬಂಧಿಸಿತ್ತು’ ಎಂದುಮೀನುಗಾರ ಗಿರ್ ಸೋಮನಾಥ್ ಹೇಳಿದ್ದಾರೆ.</p>.<p>‘ಗಡಿಯನ್ನು ಪ್ರವೇಶಿಸಿದ್ದರಿಂದ 6 ತಿಂಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಬಂಧಿತರ ದಾಖಲೆ ಪತ್ರಗಳ ಸಾಬೀತಿಗೆ ಆದ ವಿಳಂಬ ಮತ್ತು ಇತರ ಕಾರಣಗಳಿಗಾಗಿ ಬಿಡುಗಡೆ ತಡವಾಗಿದೆ’ ಎಂದು ಜೈಲು ಅಧೀಕ್ಷಕ ಔರಂಗ್ಜೇಬ್ ಕಂಗೋ ತಿಳಿಸಿದ್ದಾರೆ.ಜೈಲಿನಲ್ಲಿ ಇನ್ನೂ 200 ಮಂದಿ ಭಾರತೀಯ ಮೀನುಗಾರರು ಇದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>