‘ಇಬ್ಬರು ಮಕ್ಕಳು, ಪತ್ನಿ ಸೇರಿ ನಾಲ್ವರಿಗೂ ಸೋಂಕು ತಗುಲಿತ್ತು. ಮಗಳು ವೈದ್ಯೆ, ನಾನು ಮೂಲತಃ ಪಶುವೈದ್ಯ. ಮನೆಯಲ್ಲೇ ಪ್ರತ್ಯೇಕವಾಗಿದ್ದು, ಗುಣಪಡಿಸಿಕೊಳ್ಳಬಹುದಿತ್ತು. ಆದರೆ, ಸರ್ಕಾರದ ನಿಗಮಗಳ ಪ್ರಕಾರ ಆಸ್ಪತ್ರೆಗೆ ದಾಖಲಾದೆವು. ಅವರು ಕೊಡುವ ಮಾತ್ರೆಗಳು, ಊಟ, ನಿಯಮಿತವಾಗಿ ಬಿಸಿನೀರು ಸೇವಿಸಿದೆವು. ವೈರಾಣುವಿನ ಬಗ್ಗೆ ಅರಿವಿದ್ದ ಕಾರಣ ಹೆದರಲಿಲ್ಲ. ಎಲ್ಲರೂ ಗುಣಮುಖರಾಗಿ ಮನೆಗೆ ಬಂದೆವು’ ಎಂದು ವಿವರಿಸಿದರು.