<p><strong>ಶಿರಾಳಕೊಪ್ಪ:</strong> ಇಲ್ಲಿಗೆ ಸಮೀಪದ ತೊಗರ್ಸಿ ಗ್ರಾಮದ ಹಳೆ ತೊಗರ್ಸಿ ಪ್ರದೇಶದಲ್ಲಿ 3-4ನೇ ಶತಮಾನದ ದೇವಾಲಯದ ತಳಪಾಯ ಮತ್ತು ರಾಷ್ಟ್ರಕೂಟರ ಅವಧಿಯ ನಾಲ್ಕು ಗೋಸಾಸ ಕಲ್ಲುಗಳನ್ನು ಇತಿಹಾಸ ಸಂಶೋಧಕ ರಮೇಶ್ ಬಿ. ಹಿರೇಜಂಬೂರು ಅವರು ಕ್ಷೇತ್ರ ಕಾರ್ಯ ಕೈಗೊಂಡ ವೇಳೆ ಪತ್ತೆ ಮಾಡಿದ್ದಾರೆ.</p>.<p>ಹಳೆ ತೊಗರ್ಸಿ ಪ್ರದೇಶದ ಕೆರೆಯದಂಡೆಯಲ್ಲಿ ಒಂದು ಪ್ರಾಚೀನ ಶಿವಲಿಂಗವಿದ್ದು, ಅದರ ಕೆಳಭಾಗದಲ್ಲಿ 3-4ನೇ ಶತಮಾನದ ಸುಟ್ಟ ಇಟ್ಟಿಗೆಗಳಿಂದ ರಚಿಸಿರುವ ಬೃಹತ್ ದೇವಾಲಯದ ತಳಪಾಯ ಗೋಚರಿಸಿದೆ. ದೇವಾಲಯದ ಉತ್ತರ ದಿಕ್ಕಿನಲ್ಲಿ ಕೆರೆ<br />ಇದ್ದು ಇತ್ತೀಚಿಗೆ ಈ ದಂಡೆಯ ಮಣ್ಣನ್ನು ಸ್ಥಳೀಯರು ಗೃಹ ಕಾರ್ಯಗಳಿಗೆ ಜೆಸಿಬಿ ಯಂತ್ರಗಳಿಂದ ಅಗೆದಿದ್ದರು.</p>.<p>ಈ ರಚನೆಯು ಸುಮಾರು ಅರವತ್ತು ಅಡಿ ಉದ್ದವಿದ್ದು, ಅಂದಿನ ದೇವಾಲಯದ ವಿಶಾಲ ವಿಸ್ತೀರ್ಣವನ್ನುಕಾಣಬಹುದಾಗಿದೆ. ಸುಮಾರು ನಾಲ್ಕು ಅಡಿಗಳ ಕೆಳಗೆ ಈ ಇಟ್ಟಿಗೆಗಳ ತಳಪಾಯವಿದೆ.</p>.<p>‘ಈ ಸ್ಥಳದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನಗಳು ನಡೆದಲ್ಲಿ ಇತಿಹಾಸದ ಹೊಸ ಸಂಗತಿಗಳು ಹೊರಬರುವ ಸಾಧ್ಯತೆಗಳಿವೆ’ ಎಂದು ರಮೇಶ್ ಹಿರೇಜಂಬೂರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾಳಕೊಪ್ಪ:</strong> ಇಲ್ಲಿಗೆ ಸಮೀಪದ ತೊಗರ್ಸಿ ಗ್ರಾಮದ ಹಳೆ ತೊಗರ್ಸಿ ಪ್ರದೇಶದಲ್ಲಿ 3-4ನೇ ಶತಮಾನದ ದೇವಾಲಯದ ತಳಪಾಯ ಮತ್ತು ರಾಷ್ಟ್ರಕೂಟರ ಅವಧಿಯ ನಾಲ್ಕು ಗೋಸಾಸ ಕಲ್ಲುಗಳನ್ನು ಇತಿಹಾಸ ಸಂಶೋಧಕ ರಮೇಶ್ ಬಿ. ಹಿರೇಜಂಬೂರು ಅವರು ಕ್ಷೇತ್ರ ಕಾರ್ಯ ಕೈಗೊಂಡ ವೇಳೆ ಪತ್ತೆ ಮಾಡಿದ್ದಾರೆ.</p>.<p>ಹಳೆ ತೊಗರ್ಸಿ ಪ್ರದೇಶದ ಕೆರೆಯದಂಡೆಯಲ್ಲಿ ಒಂದು ಪ್ರಾಚೀನ ಶಿವಲಿಂಗವಿದ್ದು, ಅದರ ಕೆಳಭಾಗದಲ್ಲಿ 3-4ನೇ ಶತಮಾನದ ಸುಟ್ಟ ಇಟ್ಟಿಗೆಗಳಿಂದ ರಚಿಸಿರುವ ಬೃಹತ್ ದೇವಾಲಯದ ತಳಪಾಯ ಗೋಚರಿಸಿದೆ. ದೇವಾಲಯದ ಉತ್ತರ ದಿಕ್ಕಿನಲ್ಲಿ ಕೆರೆ<br />ಇದ್ದು ಇತ್ತೀಚಿಗೆ ಈ ದಂಡೆಯ ಮಣ್ಣನ್ನು ಸ್ಥಳೀಯರು ಗೃಹ ಕಾರ್ಯಗಳಿಗೆ ಜೆಸಿಬಿ ಯಂತ್ರಗಳಿಂದ ಅಗೆದಿದ್ದರು.</p>.<p>ಈ ರಚನೆಯು ಸುಮಾರು ಅರವತ್ತು ಅಡಿ ಉದ್ದವಿದ್ದು, ಅಂದಿನ ದೇವಾಲಯದ ವಿಶಾಲ ವಿಸ್ತೀರ್ಣವನ್ನುಕಾಣಬಹುದಾಗಿದೆ. ಸುಮಾರು ನಾಲ್ಕು ಅಡಿಗಳ ಕೆಳಗೆ ಈ ಇಟ್ಟಿಗೆಗಳ ತಳಪಾಯವಿದೆ.</p>.<p>‘ಈ ಸ್ಥಳದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನಗಳು ನಡೆದಲ್ಲಿ ಇತಿಹಾಸದ ಹೊಸ ಸಂಗತಿಗಳು ಹೊರಬರುವ ಸಾಧ್ಯತೆಗಳಿವೆ’ ಎಂದು ರಮೇಶ್ ಹಿರೇಜಂಬೂರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>