ಶ್ರೀರಾಮುಲು ಹೇಳಿದ್ದು: ‘ಕೋವಿಡ್ ನಿಯಂತ್ರಿಸಲು ನಮ್ಮ ಸರ್ಕಾರ, ಮುಖ್ಯಮಂತ್ರಿ ಯಡಿಯೂರಪ್ಪ 24 ಗಂಟೆ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರು ನಗರ ಸೇರಿ 4–5 ಜಿಲ್ಲೆಗಳಲ್ಲಿ ಮತ್ತೊಮ್ಮೆ ಲಾಕ್ಡೌನ್ ಮಾಡಿದ್ದೇವೆ. ಜನ ಸಹಕಾರ ನೀಡಬೇಕು ಮತ್ತು ದೇವರು ಕಾಪಾಡಬೇಕು ಎಂದು ಹೇಳಿದ್ದೆ. ಅದನ್ನು ಕೆಲವು ಮಾಧ್ಯಮಗಳು ದೇವರೇ ಬಂದು ಕಾಪಾಡಬೇಕು ಎಂಬ ಅರ್ಥದಲ್ಲಿ ಹೇಳಿದ್ದಾಗಿ ವ್ಯಾಖ್ಯಾನಿಸಿವೆ. ಇದು ಸತ್ಯಕ್ಕೆ ದೂರ’ ಎಂದು ಶ್ರೀರಾಮು ತಿಳಿಸಿದ್ದಾರೆ.