‘ವಚನಗಳು ಲಿಂಗಾಯತ ಧರ್ಮ, ಶರಣ ಪರಂಪರೆ, ಕನ್ನಡ ಸಂಸ್ಕೃತಿಗೆ ಹಿಡಿದ ಕನ್ನಡಿ. ಕನ್ನಡ ಭಾಷೆಯ ಕಸುವು, ಬನಿ, ಬೆಡಗು ಹೆಚ್ಚಿಸಿದವರು ಶರಣರು. ಬಸವಾದಿ ಶಿವಶರಣರು ತಮ್ಮ ಆಚಾರ, ವಿಚಾರಗಳನ್ನು ಮೂಡಿಸಿದ್ದು ಕನ್ನಡ ಭಾಷೆಯಲ್ಲಿ. ಈ ಭಾಷೆಯ ಗೌರವ ಹೆಚ್ಚಿಸಿದವರು ಸಂಸ್ಕೃತ ಬಲ್ಲ ವಿದ್ವಾಂಸರಲ್ಲ, ಸಂಸ್ಕೃತವೇ ಗೊತ್ತಿಲ್ಲದ ಅತ್ಯಂತ ತಳವರ್ಗದಿಂದ ಬಂದವರು. ಬಸವಾದಿ ಶಿವಶರಣರ ಮೂಲ ಉದ್ದೇಶ ವೈದಿಕ ಪರಂಪರೆಗೆ ಎದುರಾಗಿ ಶರಣ ಪರಂಪರೆಯನ್ನು ಬೆಳೆಸುವುದಾಗಿತ್ತು. ಶರಣ ಪರಂಪರೆ ಜೀವಪರವಾದುದು’ ಎಂದು ಅಭಿಪ್ರಾಯಪಟ್ಟರು.