ಅಂಗಡಿ ಬಾಗಿಲಿನ ಬೀಗ ಮುರಿದು ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಮಣ್ಣನ್ನು ಕಳ್ಳರು ಕದ್ದಿದ್ದಾರೆ. ಜುಲೈ 17ರ ರಾತ್ರಿ ಈ ಕಳ್ಳತನ ನಡೆದಿದೆ. ಮಾಸ್ಕ್ ಧರಿಸಿ ಕಳ್ಳರು ಕೃತ್ಯ ಎಸಗಿದ್ದಾರೆ.
ಅಂಗಡಿಯಲ್ಲಿದ್ದ 20 ಸಾವಿರ ನಗದು, ಹವಳದ ಸರ ಸೇರಿದಂತೆ ಗ್ರಾಹಕರು ನೀಡಿದ ಚಿನ್ನಾಭರಣ ಸಹ ಕಳವು ಮಾಡಲಾಗಿದೆ.
ಘಟನೆ ಸಂಬಂಧ ಸೋಮಶೇಖರ್ ಎಂಬುವರು ಕೆ.ಆರ್. ಮಾರುಕಟ್ಟೆ ಠಾಣೆಗೆ ದೂರು ನೀಡಿದ್ದಾರೆ. ಮಣ್ಣಿನಲ್ಲಿ ಚಿನ್ನದ ಕಣಗಳು ಇದ್ದವು. ಚಿನ್ನವನ್ನು ತೆಗೆಯಲು ಮಣ್ಣು ತರಿಸಲಾಗಿತ್ತು ಎನ್ನಲಾಗುತ್ತಿದೆ