ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ | ಸಿಂಗರೇನಿ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: 4 ಮಂದಿ ಸಾವು

Last Updated 2 ಜೂನ್ 2020, 8:59 IST
ಅಕ್ಷರ ಗಾತ್ರ

ರಾಮಗುಂಡಂ: ಉತ್ತರ ತೆಲಂಗಾಣದ ರಾಮಗುಂಡಂ ಬಳಿ ಸಿಂಗರೇನಿ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿದ್ದು ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ.

ಸ್ಫೋಟವುಂಟಾಗಲು ಕಾರಣ ಏನು ಎಂಬುದು ಇಲ್ಲಿಯರೆಗೆ ಸ್ಪಷ್ಟವಾಗಿಲ್ಲ. ಕಲ್ಲಿದ್ದಲು ಗಣಿಯಲ್ಲಿ ಸ್ಫೋಟಕ ವಸ್ತುಗಳನ್ನು ಬಳಸಲಾಗುತ್ತದೆ. ಕಲ್ಲಿದ್ದಲು ರಾಶಿಯಲ್ಲಿ ಸಣ್ಣ ತೂತು ಕೊರೆದು ಅದರಲ್ಲಿ ಸ್ಫೋಟಕಗಳನ್ನಿಟ್ಟು ಸ್ಫೋಟಿಸಲಾಗುತ್ತದೆ. ಹೀಗೆ ಸ್ಫೋಟಿಸುವ ಹೊತ್ತಲ್ಲಿ ಅವಘಡವುಂಟಾಗಿದೆ.

ಈ ಅವಘಡದಲ್ಲಿ 6 ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಗೋದಾವರಖನಿ ಸಿಂಗರೇನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT